ಅಯ್ಯಪ್ಪ ಸ್ವಾಮಿ ಭಕ್ತನೊಬ್ಬನ ಶಬರಿಮಲೆಗೆ ವಿಶೇಷ ಪಾದಯಾತ್ರೆಯ ಹರಕೆ
Posted On:
09-05-2023 07:45PM
ಕಾಪು : ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಹಾಗೂ ಉಡುಪಿ ಕ್ಷೇತ್ರದಲ್ಲಿ ಯಶ್ಪಾಲ್ ಸುವರ್ಣ ಮತ್ತು ಕಾಪು ಕ್ಷೇತ್ರದಲ್ಲಿ ಸುರೇಶ್ ಶೆಟ್ಟಿ ಗುರ್ಮೆಯವರು ಚುನಾವಣೆಯಲ್ಲಿ ಯಶಸ್ವಿಯಾಗಿ ಬಹುಮತಗಳಿಂದ ಗೆದ್ದು ಶಾಸಕರಾಗಬೇಕೆಂದು ಪಡುಬಿದ್ರಿಯ ವಿಶ್ವಕಲ್ಲಟ್ಟೆ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತಿದ್ದಾರೆ.
ಈಚು ಸ್ವಾಮಿ ಎಂದು ಪರಿಚತರಾಗಿರುವ ವಿಶ್ವ ಕಲ್ಲಟ್ಟೆಯವರು ಪಾದಯಾತ್ರೆಯ ಮೂಲಕ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ತುಪ್ಪದ ಅಭಿಷೇಕದ ಹರಕೆ ಹೊತ್ತಿದ್ದಾರೆ.
ಇವರು ಸಮಾಜ ಸೇವಾ ಸಂಸ್ಥೆ ಪಡುಬಿದ್ರಿ ಭಗವತಿ ಗ್ರೂಪ್ ಇದರ ಸದಸ್ಯರೂ ಆಗಿದ್ದಾರೆ.