ಕಾಪು : ಎರ್ಮಾಳು ತೆಂಕ ಪೂಂದಾಡುವಿನಲ್ಲಿ ಕಂಡುಬಂದ ಚಿರತೆಗೆ ಬೋನಿಟ್ಟ ಅರಣ್ಯಾಧಿಕಾರಿಗಳು
Posted On:
15-06-2023 09:22PM
ಕಾಪು : ತಾಲೂಕಿನ ತೆಂಕ ಎರ್ಮಾಳು ಪೂಂದಾಡು ರೈಲ್ವೆ ಸೇತುವೆ ಬಳಿ ರಾತ್ರಿ ಮನೆಯೊದರ ಸಿಸಿ ಕ್ಯಾಮೆರಾದಲ್ಲಿ ಚಿರತೆಯ ಚಲನವಲನ ಕಂಡು ಬಂದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಅರಣ್ಯಾಧಿಕಾರಿಗಳು ಪೂಂದಾಡುವಿನಲ್ಲಿ ಚಿರತೆ ಬೇಟೆಗೆ ಬೋನನ್ನು ಇಟ್ಟಿದ್ದಾರೆ.
ಈ ಸಂದರ್ಭ ಮಾಹಿತಿ ನೀಡಿದ ಅರಣ್ಯಾಧಿಕಾರಿ ಅಭಿಲಾಶ್, ಮೇಲಾಧಿಕಾರಿಗಳ ಆದೇಶದಂತೆ ಈ ಕಾರ್ಯಾಚರಣೆ ಮಾಡಲಾಗುತ್ತಿದೆ. ಚಿರತೆ ಬೇಟೆಗೆ ಇಟ್ಟ ಬೋನಿನಲ್ಲಿ ನಾಯಿ ಒಂದನ್ನು ಇಡಲಾಗಿದೆ. ನಾಯಿಗೆ ಯಾವುದೇ ತೊಂದರೆ ಆಗದಂತೆ ಕಬ್ಬಿಣದ ಬೇಲಿಯನ್ನು ಅಳವಡಿಸಲಾಗಿದೆ. ಚಿರತೆ ಬೋನಿಗೆ ಬಿದ್ದ ಕೂಡಲೇ ನಮಗೆ ಮಾಹಿತಿ ನೀಡಿದರೆ ಅದನ್ನು ಮುಂದೆ ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದರು.
ಈ ಸಂದರ್ಭ ತೆಂಕ ಗ್ರಾಮ ಪಂಚಾಯತ್ ಸದಸ್ಯ ಮನೋಜ್ ಶೆಟ್ಟಿ, ಸ್ಥಳೀಯರಾದ ಸಂತೋಷ್ ಜೆ ಶೆಟ್ಟಿ ಬರ್ಪಾಣಿ, ಪ್ರದೀಪ್ ಅದಮಾರು, ಸುಬ್ರಮಣ್ಯ ಭಟ್, ರವೀಂದ್ರ ಉಪಸ್ಥಿತರಿದ್ದರು.