ಉಡುಪಿ : ಕಾಪು ತಾಲೂಕಿನ ಎಲ್ಲೂರು ಬಂಡಸಾಲೆ ಪ್ರತಿಭಾನ್ವಿತ ವಿದ್ಯಾರ್ಥಿನಿ ನಿಖಿತಾ ಕುಲಾಲ್ ಉಡುಪಿಯ ಸಿಟಿ ಆಸ್ಪತ್ರೆಯಲ್ಲಿ ಅಸಹಜ ಸಾವನಪ್ಪಿದ್ದು ನಿಖಿತಾ ಮನೆಯವರಿಗೆ ಸೂಕ್ತ ನ್ಯಾಯ ಒದಗಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಆಸ್ಪತ್ರೆಯ ಮುಖ್ಯ ವೈದ್ಯರಿಗೆ ಹಾಗೂ ಆಡಳಿತ ಮಂಡಳಿಗೆ ಜಿಲ್ಲಾ ಕುಲಾಲ ಸಂಘಟನೆಯ ಪ್ರಮುಖರು ಸೇರಿ ಮನವಿ ನೀಡಿದರು.
ಮನವಿಗೆ ಸ್ಪಂದಿಸಿ ಮಾತಾಡಿದ ವೈದ್ಯರು ಆಸ್ಪತ್ರೆಯ ಬಗ್ಗೆ ಈಗಾಗಲೇ ದೂರು ದಾಖಲಾಗಿದುದರಿಂದ ಇನ್ನು 15 ದಿನಗಳ ಬಳಿಕ ತನಿಖೆಯ ವರದಿ ಬರಲಿದ್ದು ಅಲ್ಲಿಯ ತನಕ ಕಾಯಿರಿ, ನಂತರ ನಿಖಿತಾ ಕುಲಾಲ್ ಮನೆಯವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಾತು ತಪ್ಪಿದಲ್ಲಿ ಎಲ್ಲಾ ಸ್ವಜಾತಿ ಬಾಂಧವರುಗಳನ್ನು ಒಟ್ಟು ಗೂಡಿಸಿ ದೊಡ್ಡ ಮಟ್ಟದ ಪ್ರತಿಭಟನೆ ಮಾಡಲಾಗುವುದು ಎಂದು ಸಂಘಟನೆಯ ಪ್ರಮುಖರು ತಿಳಿಸಿದರು.
ಈ ಸಂದರ್ಭದಲ್ಲಿ ಸಂತೋಷ್ ಕುಲಾಲ್ ಪಕ್ಕಾಲು, ಸಂದೀಪ್ ಬಂಗೇರ ಶಂಕರಪುರ, ಉದಯ್ ಕುಲಾಲ್ ಕಳತ್ತೂರು, ಸುಧಾಕರ್ ಕುಲಾಲ್ ಪಟ್ಲ, ಸಂತೋಷ್ ಕುಲಾಲ್ ಪದವು, ದಿವಾಕರ್ ಬಂಗೇರ, ವಸಂತ್ ಕುಲಾಲ್ ಎರ್ಲಪಾಡಿ, ಬಸವರಾಜ್ ಕುಲಾಲ್, ಸತೀಶ್ ಕುಲಾಲ್ ನಡೂರು, ಕೃಷ್ಣಪ್ಪ ಕುಲಾಲ್ ಪೆರ್ಡೂರು, ಶಂಕರ್ ಕುಲಾಲ್ ಪೆರಂಪಳ್ಳಿ, ದಿನೇಶ್ ಕುಲಾಲ್, ಸುರೇಂದ್ರ ಕುಲಾಲ್ ವರಂಗ, ಹರೀಶ್ ಕುಲಾಲ್ ಹಂದಿಬೆಟ್ಟು ಉಪಸ್ಥಿತರಿದ್ದರು.