ಕಾಪು : ತಾಲೂಕಿನ ವಿವಿದೆಡೆ ಇಂದು ಸುರಿದ ಭಾರೀ ಮಳೆಗೆ ಹಲವು ಪ್ರದೇಶ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ತೆಂಕಗ್ರಾಮದ ಗುಣವತಿ ಎಂಬವರ ವಾಸ್ತವ್ಯದ ಪಕ್ಕ ಮನೆಗೆ ಮರ ಬಿದ್ದು ಅಂದಾಜು 20,000 ನಷ್ಟ ಸಂಭವಿಸಿರುತ್ತದೆ. ಕಾಪು ಕೈಪುಂಜಾಲಿನ ಬಟತೋಟದ ಪ್ರದೇಶ, ಪಡುಬಿದ್ರಿಯ ಕೆಳಗಿನ ಪೇಟೆಯ ಯೂನಿಯನ್ ಬ್ಯಾಂಕ್ ಬಳಿ ತೋಡು - ರೋಡು ಒಂದಾಗಿ ಜನರು ನಡೆದಾಡಲು ಹರಸಾಹಸ ಪಟ್ಟರು. ಉಳಿದಂತೆ ಹಲವೆಡೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆಯಿಂದ ಜಲಾವೃತವಾಗಿದೆ.