ಕಟಪಾಡಿ ರಾಷ್ಟ್ರೀಯ ಹೆದ್ದಾರಿ (ಕೆನರಾ ಬ್ಯಾಂಕ್) ಎದುರಿನ ರಸ್ತೆಯು ಕಸಮಯವಾಗಿದೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ಹಲವಾರು ಮನೆ, ವಾಣಿಜ್ಯ ಸಂಕೀಣ೯ಗಳಿವೆ ಇಲ್ಲಿಂದ ನಡೆದುಕೊಂಡು ಹೋಗುವವರ ಪಾಡು ದೇವರಿಗೆ ಪ್ರೀತಿ.
ಕಸದಲ್ಲಿರುವ ಆಹಾರ ವಸ್ತುಗಳನ್ನು ತಿನ್ನಲು ಬರುವ ಬೀದಿ ನಾಯಿಗಳ ಹಿಂಡಿನಿಂದ ಈ ರಸ್ತೆಯಲ್ಲಿ ಸಾಗಲು ಆಗದ ಪರಿಸ್ಥಿತಿ ಎದುರಾಗಿದೆ.
ಸ್ಥಳೀಯರ ಪ್ರಕಾರ ವಾಹನಗಳಲ್ಲಿ ಬಂದು ಕಸವನ್ನು ಎಸೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಈ ರಸ್ತೆಯು ಮಿನಿ ಡಂಪಿಂಗ್
ಯಾಡ್೯ ಯಾಗಿ ಪರಿಣಮಿಸಿದೆ.ಇದರಿಂದ ಸಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ .ಕೂಡಲೇ ಸಂಬಂಧ ಪಟ್ಟ.ಗ್ರಾ.ಪಂ ಕ್ರಮ ಕೈಗೊಳ್ಳಬೇಕು ಅಲ್ಲದೆ ಕಸ ಹಾಕುವವರಿಗೆ ಸರಿಯಾದ ಶಿಕ್ಷೆ ವಿಧಿಸಬೇಕಾಗಿದೆ.
ರಾಘವೇಂದ್ರ ಪ್ರಭು,ಕವಾ೯ಲು ಉಡುಪಿ