ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉದ್ಯಾವರದಲ್ಲಿ ಹೀಗೊಬ್ಬ ಮಾದರಿ ಜನ ಸೇವಕನನ್ನು ನೋಡಿ

Posted On: 21-07-2020 08:01PM

ಇವರ ಹೆಸರು ಸತೀಶ್ ಸುವಣ೯ ವೃತ್ತಿಯಲ್ಲಿ ತನ್ನದೇ ಆದ ಸಲೂನ್ ಶಾಪ್ ಇಟ್ಟುಕೊಂಡಿರುವ ಇವರು ಕಳೆದ ಹಲವಾರು ವಷ೯ಗಳಿಂದ ಸಲ್ಲಿಸುತ್ತಿರುವ ಸೇವೆಯಿಂದ ಜನ ಪ್ರೀತಿಗೆ ಪಾತ್ರರಾಗಿದ್ದಾರೆ.ಇವರ ಬಗ್ಗೆ ನಿಮಗೆ ತಿಳಿಸಲು ಕಾರಣವಿದೆ ಇವರು ಬೇರೆ ಕ್ಷವ್ರಿಕರಂತೆ ಅಲ್ಲ ತನ್ನ ವಾರದ ರಜೆಯನ್ನು ಸಮಾಜಮುಖಿಯಾಗಿ ಕಳೆಯುತ್ತಾರೆ.ಜಿಲ್ಲೆಯಲ್ಲಿರುವ ಅನಾಥಾಶ್ರಮ, ವೃದ್ದಾಶ್ರಮದ ಆಶ್ರಮವಾಸಿಗಳಿಗೆ ಉಚಿತವಾಗಿ ಕ್ಷವ್ರ ಮಾಡುವ ಕಾಯಕವನ್ನು ಕಳೆದ ಹಲವಾರು ವಷ೯ಗಳಿಂದ ನಿರಂತರವಾಗಿ ಮಾಡುತ್ತಿದ್ದಾರೆ. ಸ್ಪoದನ ವಿಶೇಷ ಮಕ್ಕಳ ಶಾಲೆ, ಆಶಾ ನಿಲಯ, ಹೊಸ ಬೆಳಕು ಮಣಿಪಾಲ, ಕಾರುಣ್ಯ ಕಟಪಾಡಿ ಅದೇ ರೀತಿ ಕಾಕ೯ಳ ವಿಜೇತ ವಿಶೇಷ ಶಾಲೆಯ ನಿವಾಸಿಗಳಿಗೆ ಕ್ಷವ್ರ ಮಾಡಿ ಅವರಿಗೆ ನೆರವಾಗುತ್ತಿದ್ದಾರೆ. ಆಶ್ರಮವಾಸಿಗಳಿಗೆ ಕ್ಷವ್ರ ಮಾಡಲು ಈ ಹಿಂದೆ ಸಲೂನ್ ಗಳಿಗೆ ಕರೆದುಕೊಂಡು ಹೋಗಬೇಕಾದ ಅನಿವಾಯ೯ತೆ ಆಶ್ರಮದ ಮುಖ್ಯಸ್ಥರಿಗೆ ಇತ್ತು. ಅಲ್ಲದೆ ಹಿರಿಯ ನಾಗರೀಕರಾದ ಕಾರಣ ಅವರನ್ನು ಕರೆದುಕೊಂಡು ಹೋಗುವುದು ಕಷ್ಟದ ಕಾಯ೯ ವಾಗಿತ್ತು. ಇದಕ್ಕಾಗಿ ಸಾವಿರಾರು ರೂ ಆಶ್ರಮಕ್ಕೆ ವ್ಯಯವಾಗುತ್ತಿತ್ತು ದಾನಿಗಳ ನೆರವಿನಿಂದ ನಡೆಯುವ ಈ ಆಶ್ರಮಗಳಿಗೆ ಈ ಹಣವನ್ನು ಭರಿಸುವ ಶಕ್ತಿ ಇರಲಿಲ್ಲ ಹೀಗಾಗಿ ಸತೀಶ್ ರವರು ಪ್ರತಿ ತಿಂಗಳು ತಪ್ಪದೆ ಭೇಟಿ ನೀಡಿ ಉಚಿತವಾದ ಸೇವೆ ನೀಡಲಾರಂಭಿಸಿರುದರಿಂದ ಆಶ್ರಮದ ಮುಖ್ಯಸ್ಥರು ನಿರಾಳರಾಗಿದ್ದಾರೆ. ಅದೇ ರೀತಿ ಆಶ್ರಮವಾಸಿಗಳಿಗೆ ತುಂಬಾನೇ ಖುಷಿಯಾಗಿದೆ. ಸತೀಶ್ ರವರು ಕೆಲವು ವಷ೯ ಗಲ್ಫ್ ರಾಷ್ಟ್ರದಲ್ಲಿ ಕೆಲಸ ಮಾಡಿದ ಅನುಭವ ಇದೆ ನಂತರ ಊರಿಗೆ ಬಂದು ಕೆಲಸದೊಂದಿಗೆ ಈ ರೀತಿಯ ಸಮಾಜ ಸೇವೆ ಮಾಡುತ್ತಿರುವುದು ಅಭಿನಂದನೀಯ. ಕರೋನಾ ಬರುವ ಮುಂಚೆಯೇ ಮಾಸ್ಕ್ ಅದೇ ರೀತಿ ವಿವಿಧ ಆರೋಗ್ಯ ಕ್ರಮ ಕೈಗೊಂಡಿದ್ದರು. ಸದಾ ಕಾಲ ಬಿಳಿ ಬಣ್ಣದ ಅಂಗಿ ಧರಿಸುವ ಸತೀಶ್ ರವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸಾವಿರಾರು ಜನರಿಗೆ ಊಟ ನೀಡುವಲ್ಲಿ ಸಹಕರಿಸಿದ್ದಾರೆ.ಹೋಂ ಡಾಕ್ಟರ್ಸ್ ಫ್oಡೇಶನ್ ತಂಡದ ಸಕ್ರೀಯ ಸದಸ್ಯರಾಗಿ ವಿವಿಧ ಸಮಾಜ ಮುಖಿ ಕಾಯ೯ದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.ಈ ರೀತಿಯ ಅಪೂವ೯ ಸೇವಕರಿಗೆ ಹಲವಾರು ಸನ್ಮಾನ ದೊರಕಿದೆ. ಸಕಾ೯ರ ಕೂಡ ಇವರ ಸೇವೆಯನ್ನು ಗುರುತಿಸಬೇಕಾಗಿದೆ. ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ