ಕಾಪು : ತಾಲೂಕಿನ ಇನ್ನಂಜೆ ಮಂಡೇಡಿ ಶ್ರೀ ದೇವಿ ಭಜನಾ ಮಂಡಳಿಯಲ್ಲಿ ಪಾಂಗಾಳ ಮುರಳಿ ಭಟ್ ನೇತೃತ್ವದಲ್ಲಿ ವರಮಹಾಲಕ್ಷ್ಮಿ ಪೂಜೆಯು ನಡೆಯಿತು.
ಈ ಸಂದರ್ಭ ಗ್ರಾಮದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಮಂಡೇಡಿ ದೇರೆಕ್ಯಾರ್ ಮನೆ ದಿವಂಗತ ವಿಠಲ ಶೆಟ್ಟಿ ಸ್ಮರಣಾರ್ಥ ಅವರ ಮಗ ದಯಾನಂದ ವಿ ಶೆಟ್ಟಿ ಪ್ರೋತ್ಸಾಹ ಧನ ಹಾಗೂ ಶಶಿಧರ ಕೆ ಶೆಟ್ಟಿ ಕುಂಜಿರಬೆಟ್ಟು ನೀಡಲ್ಪಟ್ಟ ಶಾಲು ಮತ್ತು ಸ್ಮರಣಿಕೆಯನ್ನು ಮುಂಬೈ ಉದ್ಯಮಿ ರತ್ನಾಕರ ಶೆಟ್ಟಿ ಮಂಡೇಡಿ ಸಾದುಮನೆ ಮಕ್ಕಳಿಗೆ ನೀಡಿ ಗೌರವಿಸಿದರು.
ಈ ಸಂದರ್ಭ ರತ್ನಾಕರ ಶೆಟ್ಟಿ ಹಾವಂಜೆ, ಬಾಲಕೃಷ್ಣ ಶೆಟ್ಟಿ ಪೊಲ್ಯ, ಮುಕ್ಕಾಲಿ ರಮಾನಂದ ಶೆಟ್ಟಿ, ಮಂಡಳಿಯ ಅಧ್ಯಕ್ಷ ಲಕ್ಷ್ಮಣ ಕೆ ಶೆಟ್ಟಿ, ಕಾರ್ಯದರ್ಶಿ ಕೃಷ್ಣ ವಿ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಎಸ್ ಶೆಟ್ಟಿ, ಮಂಡಳಿಯ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.