ಕಾರ್ಕಳ : ಇಲ್ಲಿನ ಇರ್ವತ್ತೂರು ಕುಲಾಲ ಸಂಘ (ರಿ.) ವತಿಯಿಂದ ಇರ್ವತ್ತೂರು ಗ್ರಾಮ ಪಂಚಾಯತ್ ನ ನೂತನ ಸಭಾಭವನಕ್ಕೆ ಪೋಡಿಯಂನ್ನು ಸಂಘದ ಅಧ್ಯಕ್ಷರಾದ ಸುರೇಶ್ ಬಂಗೇರ ಪಾಲಾಜೆ ಮುಂದಾಳತ್ವದಲ್ಲಿ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭರತ್ ಕುಮಾರ್ ಜೈನ್,ಉಪಾಧ್ಯಕ್ಷೆ ದೀಪಾ ಶ್ರೀನಾಥ್, ಪಂಚಾಯತ್ ಪಿ.ಡಿ.ಓ ಆನಂದ ವಾರ್ತಿ, ಪಂಚಾಯತ್ ಸದಸ್ಯೆ ಅನಿತಾ ನಾಗೇಶ್ ಕುಲಾಲ್, ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯೆ ಪ್ರಮೀಳಾ ಕುಲಾಲ್ ಉಪಸ್ಥಿತರಿದ್ದರು.