ಉಡುಪಿ : ಲಯನ್ಸ್, ಲಿಯೋ ಕ್ಲಬ್ ಮಲ್ಪೆ - ವಿಶ್ವ ಓಜೋನ್ ದಿನಾಚರಣೆ ; ಸಾಧಕರಿಗೆ ಅಭಿನಂದನೆ
Posted On:
25-09-2023 09:59PM
ಉಡುಪಿ : ಲಯನ್ಸ್ ಮತ್ತು ಲಿಯೋ ಕ್ಲಬ್ ಮಲ್ಪೆ ಇದರ ವತಿಯಿಂದ ವಿಶ್ವ ಓಜೋನ್ ದಿನಾಚರಣೆ ಮತ್ತು ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ರವಿವಾರ ಮಲ್ಪೆ ಗೋಪಾಲ್ ಸಿ ಬಂಗೇರ ಇವರ ಮನೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷ ಹರಿನಾಥ್ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪೂರ್ವ ಗವರ್ನರುಗಳಾದ ಶಿವರಾಂ ಶೆಟ್ಟಿ ತಲ್ಲೂರು, ಶ್ರೀಧರ್ ಶೇಣವ ಭಾಗವಹಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷ ಹರಿನಾಥ್ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪೂರ್ವ ಗವರ್ನರುಗಳಾದ ಶಿವರಾಂ ಶೆಟ್ಟಿ ತಲ್ಲೂರು, ಶ್ರೀಧರ್ ಶೇಣವ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದಭ೯ದಲ್ಲಿ ಶಿಕ್ಷಕರಾದ ಗೋವಿಂದರಾಯ ನಾಯ್ಕ ದಂಪತಿಗಳನ್ನು ಮತ್ತು ಇಂಜಿನಿಯರ್ ರಂಜನ್ ಕೆ ಯವರನ್ನು ಗೌರವಿಸಲಾಯಿತು.
ಆತಿಥ್ಯ ವಹಿಸಿದ ಗೋಪಾಲ್ ಸಿ ಬಂಗೇರ ಮತ್ತು ವಿಜಯ ಯುವ ಬಂಗೇರ ಅವರನ್ನು ಗುರುತಿಸಲಾಯಿತು.