ಹೆಜಮಾಡಿ : ಇಲ್ಲಿನ ರಾಜೀವ ಗಾಂಧಿ ಕ್ರಿಡಾಂಗಣದಲ್ಲಿ ರಾಜ್ಯ ಮಟ್ಟದ ಫುಟ್ ಬಾಲ್ ಕ್ರೀಡಾ ವೇದಿಕೆಯಲ್ಲಿ ಯುನೈಟೆಡ್ ಕನ್ನಂಗಾರ್ ಫುಟ್ಬಾಲ್ ಕ್ಲಬ್ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಕ ಫಾರೂಕ್ ಚಂದ್ರನಗರ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಹಾಜಿ ಗುಲಾಮ್ ಮಹಮ್ಮದ್, ರಜಬ್ ಪರ್ಕಳ ಉದ್ಯಮಿ ಸೌದಿ ಅರೇಬಿಯಾ, ಸಂದೇಶ್ ಶೆಟ್ಟಿ ಉದ್ಯಮಿ ಮುಂಬೈ, ಆಸೀಫ್ ಕಾರ್ಕಳ, ಶೇಖರ್ ಹೆಜಮಾಡಿ, ಅಝೀಜ್ ಹೆಜಮಾಡಿ, ನಜಿರ್ ಕಾರ್ನಾಡ್, ಯುನೈಟೆಡ್ ಅಧ್ಯಕ್ಷ ಆಶಿಫ್, ಝಿಯಾನ್ ಹೆಜಮಾಡಿ, ಮೋಹನ್ ಸುವರ್ಣ, ಶರಣ್ ಕುಮಾರ್ ಮಟ್ಟು, ಶಿವರಾಮ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.