ಶಿರ್ವ : ವಿಶ್ವಹಿಂದು ಪರಿಷದ್ ಭಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ವಿಷ್ಣುಮೂರ್ತಿ ಘಟಕದ ಆಶ್ರಯದಲ್ಲಿ ಬಾಲ ಸಂಸ್ಕಾರ ಕೇಂದ್ರ ಉದ್ಘಾಟನಾ ಸಮಾರಂಭ ಶಿರ್ವ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಪ್ರದಾನ ಅರ್ಚಕರಾದ ರಘುಪತಿ ಗುಂಡುಭಟ್ ಉದ್ಘಾಟನೆ ಮಾಡಿದರು.
ವಿಷ್ಣುಮೂರ್ತಿದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ರತ್ನವರ್ಮ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ವಿಶ್ವಹಿಂದು ಪರಿಷದ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಕಾಪು ಪ್ರಖಂಡ ಕಾರ್ಯದರ್ಶಿ ರಾಜೇಂದ್ರ ಶೆಣೈ, ಕಾಪು ಪ್ರಖಂಡ ಮಾತೃಶಕ್ತಿ ಪ್ರಮುಖ್ ವಾಣಿ ಆಚಾರ್ಯ, ಕಾಪು ಪ್ರಖಂಡ ಧರ್ಮಚಾರಿ ಪ್ರಮುಖ್ ಪ್ರಸನ್ನ ಭಟ್, ಘಟಕದ ಅಧ್ಯಕ್ಷರಾದ ಜಯ ಪೂಜಾರಿ, ಘಟಕ ಮಾತೃ ಶಕ್ತಿ ಪ್ರಮುಖ್ ಚಂದ್ರಾವತಿ, ಕಾಪು ಪ್ರಖಂಡ ಭಜರಂಗದಳ ಸಹ ಸಂಯೋಜಕ ಆನಂದ್ ಶಿರ್ವ, ಪ್ರಖಂಡ ದುರ್ಗಾವಾಹಿನಿ ಸಂಯೋಜಕಿ ನಿಕ್ಷಿತಾ ಉಪಸ್ಥಿತರಿದ್ದರು.