ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬಂಟಕಲ್ಲು : ಕೆ ಆರ್ ಪಾಟ್ಕರ್ ರಿಂದ ರಚಿಸಲ್ಪಟ್ಟ ಕನ್ನಡದ ಗೂಡುದೀಪ

Posted On: 12-11-2023 11:15AM

ಬಂಟಕಲ್ಲು : ದೀಪಾವಳಿ ಸಂಭ್ರಮದಲ್ಲಿ ಗೂಡುದೀಪಕ್ಕೂ ಪಾಲಿದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ತಯಾರಿಸಿದ ಗೂಡುದೀಪಗಳು ರಾರಾಜಿಸಿದರೆ ಇಂದು ಅಂಗಡಿಗಳಲ್ಲಿ ತಯಾರಿಸಲ್ಪಟ್ಟ ಗೂಡುದೀಪಗಳು ಮನೆಯ ಎದುರಿಗೆ ರಾರಾಜಿಸುತ್ತಿದೆ.

ಆದರೆ ಇಲ್ಲೊಬ್ಬರು ಕನ್ನಡದ ಕಟ್ಟಾಳು, ಬಂಟಕಲ್ಲು ಗ್ರಾಮ ಪಂಚಾಯ್ ನ ಮಾಜಿ ಅಧ್ಯಕ್ಷ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಸಂಘಟನಾ ಕಾರ್ಯದರ್ಶಿ, ಇತ್ತೀಚೆಗೆ ನಡೆದ ೫ನೇ ಕಾಪು ತಾಲೂಕು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ರೂಪಿಸಿದ ಸಮ್ಮೇಳನದ ಕಾರ್ಯಧ್ಯಕ್ಷರಾದ ಕೆ‌ ಆರ್ ಪಾಟ್ಕರ್ ತಮ್ಮ ಮನೆಯಲ್ಲಿ ಕನ್ನಡದ ಗೂಡುದೀಪ ತಯಾರಿಸಿದ್ದಾರೆ. ಇದು ನೋಡುಗರಿಗೂ ಖುಷಿ ತಂದಿದೆ.