ಬಂಟಕಲ್ಲು : ದೀಪಾವಳಿ ಸಂಭ್ರಮದಲ್ಲಿ ಗೂಡುದೀಪಕ್ಕೂ ಪಾಲಿದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ತಯಾರಿಸಿದ ಗೂಡುದೀಪಗಳು ರಾರಾಜಿಸಿದರೆ ಇಂದು ಅಂಗಡಿಗಳಲ್ಲಿ ತಯಾರಿಸಲ್ಪಟ್ಟ ಗೂಡುದೀಪಗಳು ಮನೆಯ ಎದುರಿಗೆ ರಾರಾಜಿಸುತ್ತಿದೆ.
ಆದರೆ ಇಲ್ಲೊಬ್ಬರು ಕನ್ನಡದ ಕಟ್ಟಾಳು, ಬಂಟಕಲ್ಲು ಗ್ರಾಮ ಪಂಚಾಯ್ ನ ಮಾಜಿ ಅಧ್ಯಕ್ಷ, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ಸಂಘಟನಾ ಕಾರ್ಯದರ್ಶಿ, ಇತ್ತೀಚೆಗೆ ನಡೆದ ೫ನೇ ಕಾಪು ತಾಲೂಕು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ರೂಪಿಸಿದ ಸಮ್ಮೇಳನದ ಕಾರ್ಯಧ್ಯಕ್ಷರಾದ ಕೆ ಆರ್ ಪಾಟ್ಕರ್ ತಮ್ಮ ಮನೆಯಲ್ಲಿ ಕನ್ನಡದ ಗೂಡುದೀಪ ತಯಾರಿಸಿದ್ದಾರೆ. ಇದು ನೋಡುಗರಿಗೂ ಖುಷಿ ತಂದಿದೆ.