ಹೆಜಮಾಡಿ : ಹೆಜಮಾಡಿ ಬಸ್ತಿಪಡ್ಪು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದಲ್ಲಿ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಾರ್ಯಾಲಯವನ್ನು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಭಾಸ್ಕರ್ ಭಟ್ ಉದ್ಘಾಟಿಸಿದರು.
ಕ್ಷೇತ್ರದ ಅನುವಂಶಿಕ ಮೋಕ್ತೇಸರ ಅರುಣ್ ಶೆಟ್ಟಿ, ಮೋಕ್ತೇಸರ ಸುರೇಶ್ ಶೆಟ್ಟಿಯವರು ದೀಪ ಪ್ರಜ್ವಲನೆಗೈದರು.
ಈ ಸಂದರ್ಭದಲ್ಲಿ ಅರುಣ್ ಶೆಟ್ಟಿ ಮುಂಬೈ, ವಸಂತ ದೇವಾಡಿಗ, ಕ್ಷೇತ್ರದ ಪ್ರಧಾನ ಅರ್ಚಕ ಜಗ್ನನಾಥ ಮುಖಾರಿ, ಮಹೇಶ್ ಶೆಟ್ಟಿ ಗರಡಿಮನೆ, ಹೆಜಮಾಡಿ ಗ್ರಾ.ಪಂ ಸದಸ್ಯ ಶರಣ್ ಕುಮಾರ್ ಮಟ್ಟು, ಕ್ಷೇತ್ರ ಸಮಿತಿ ಸದಸ್ಯರಾದ ಎಚ್ ಪರಮೇಶ್ವರ್, ಎಚ್ ರಾಜು, ಶೇಖರ್ ಹೆಜಮಾಡಿ, ಗಣೇಶ್ ಎಚ್., ಕೇಶವ ಸಾಲ್ಯಾನ್ ಹೆಜಮಾಡಿ , ಮಧ್ಯಸ್ಥ ರಾಮಚಂದ್ರ ಎಚ್, ಪದ್ಮನಾಭ ಸುವರ್ಣ, ಸಚ್ಚಿದಾನಂದ ಭಟ್ ಮತ್ತು ಹತ್ತು ಸಮಸ್ತರು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.