ಕಾಪು : ಜನತಾದಳ(ಜಾತ್ಯಾತೀತ)ಪಕ್ಷದ ಕಾಪು ವಿಧಾನಸಭಾ ಕ್ಷೇತ್ರ ಸಮಿತಿಯ ದಕ್ಷಿಣ ವಿಭಾಗದ ಅಧ್ಯಕ್ಷರಾಗಿ ಕಾಪು ಶ್ರೀ ದೇವರಾಜ ಕೋಟ್ಯಾನ್ ತೊಟ್ಟಂ ಆಯ್ಕೆಯಾಗಿರುತ್ತಾರೆ.
ಕಾಪು ಪಂಚಾಯತ್ ಮಾಜಿ ಸದಸ್ಯ, ಸಾಮಾಜಿಕ, ಧಾರ್ಮಿಕ ಮಂದಾಳು, ಪಕ್ಷ ಸಂಘಟನೆಯಲ್ಲಿ ಸೇವೆಗೈಯುತ್ತಿರುವ ಕಾಪು ಶ್ರೀ ದೇವರಾಜ ಕೋಟ್ಯಾನ್ ತೊಟ್ಟಂರವರನ್ನು ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ ಶೆಟ್ಟಿ ಅವರು ನೇಮಕ ಮಾಡಿರುತ್ತಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.