ಎರ್ಮಾಳು : 78ನೇ ಸ್ವಾತಂತ್ರೋತ್ಸವದ ಅಂಗವಾಗಿ ಎರ್ಮಾಳು ತೆಂಕ ಅಟೋ ಯೂನಿಯನ್ ವತಿಯಿಂದ ಆಚರಿಸಲ್ಪಟ್ಟ ಕಾರ್ಯಕ್ರಮದಲ್ಲಿ ಯೂನಿಯನ್ ಅಧ್ಯಕ್ಷ ಪತ್ರಕರ್ತ ಸುರೇಶ್ ಎರ್ಮಾಳು ಧ್ವಜಾರೋಹಣ ಗೈದರು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ಭರತ್ ಶೆಟ್ಟಿಗಾರ್, ಗ್ರಾ.ಪಂ.ಸದಸ್ಯರಾದ ಸಂತೋಷ್, ಮನೋಜ್ ಶೆಟ್ಟಿ, ಮೋಹನ್, ಕೇಶವ ಮೊಯಿಲಿ, ವಿನಿತ್ ತಲವಾರ್ ಸಹಿತ ಯೂನಿಯನ್ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.