ಮುದರಂಗಡಿ : ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಮುದರಂಗಡಿ ಇದರ ಆಶ್ರಯದಲ್ಲಿ ಸೋಮವಾರ ಜರುಗಿದ ಶ್ರಾವಣ ಪೌರ್ಣಮಿ ಋಗುಪಾಕರ್ಮ ಯಜ್ಞೋಪವೀತ ಧಾರಣೆ ಧಾರ್ಮಿಕ ಅನುಷ್ಠಾನಗಳನ್ನು ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದ ವೈದಿಕರಾದ ವೇ.ಮೂ.ಶ್ರೀಕಾಂತ್ ಭಟ್ ನೆರವೇರಿಸಿದರು.
ಸಂಘದ ಅಧ್ಯಕ್ಷ ವೈ.ಉಪೇಂದ್ರ ಪ್ರಭು, ಕಾರ್ಯದರ್ಶಿ ದೇವದಾಸ್ ಪಾಟ್ಕರ್, ಕೋಶಾಧಿಕಾರಿ ಕೇಶವ ನಾಯಕ್, ಸದಸ್ಯರು ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.