ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು ಜೇಸಿಐ ಸಂಸ್ಥೆಗೆ ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ಜೆ ಎಫ್ ಎಸ್ ರೆಖೇಶ್ ಶರ್ಮ ಭೇಟಿ

Posted On: 22-08-2024 06:14PM

ಕಾಪು : ಜಾಗತಿಕವಾಗಿ 115 ದೇಶದಲ್ಲಿ ಯುವ ನಾಯಕರು, ಉದ್ಯಮಿಗಳ ಜೊತೆಗೆ 5 ಲಕ್ಷ ಸಕ್ರಿಯ ಸದಸ್ಯರನ್ನು ಹೊಂದಿರುವ ಜೇಸಿಐ ಸಂಸ್ಥೆಯು ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ವಿವಿಧ ಝೋನ್ ಗಳ ಘಟಕಗಳ ಭೇಟಿಯ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಚಾಲನೆ ಕಾರ್ಯ ನೀಡಲಾಗುತ್ತಿದೆ ಎಂದು ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ಜೆ ಎಫ್ ಎಸ್ ರೆಖೇಶ್ ಶರ್ಮ ಹೇಳಿದರು. ಅವರು ಜೇಸಿಐ‌ ಕಾಪು ಭೇಟಿಯ ಸಂದರ್ಭ ಕಾಪುವಿನ ಮಂದಾರ ಹೊಟೇಲ್ ಸಭಾಂಗಣದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದ.ಕ, ಉಡುಪಿ, ಉ.ಕ ದ ವಿವಿಧ ಘಟಕಗಳು ಝೋನ್ 15 ರಲ್ಲಿದೆ. ಜೆಸಿಐ ಸಂಸ್ಥೆ ಯುವಕರನ್ನು ಗಮನದಲ್ಲಿರಿಸಿಕೊಂಡು ವಾಯ್ಸ್ ಆಫ್ ಯುತ್ ಕಾರ್ಯಕ್ರಮದ ಮೂಲಕ ಯುವಕರನ್ನು ಭೇಟಿಯಾಗಿ ಅವರ ಮುಂದಿನ ಸವಾಲು, ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಗ್ರಾಮೀಣ ಭಾಗದ ಆಯ್ದ ವಿದ್ಯಾರ್ಥಿಗಳಿಗೆ ರೂ.3 ಕೋಟಿ ಮೌಲ್ಯದ ವಿದ್ಯಾರ್ಥಿವೇತನ, ನಾಯಕತ್ವ ‌ಶಿಬಿರಗಳ ಆಯೋಜನೆ ಮಾಡಲಾಗುತ್ತಿದೆ. ಜೆಸಿಐ ಸಂಸ್ಥೆಯಿಂದ ವಯನಾಡು ದುರಂತಕ್ಕೆ 1 ಕೋಟಿ ಸಹಾಯಧನ ನೀಡಲಾಗಿದೆ ಎಂದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ರಾಕೇಶ್ ಕುಂಜೂರು, ಜೆಸಿಐ ವಲಯ 15ರ ವಲಯಾಧ್ಯಕ್ಷ ಗಿರೀಶ್ ಎಸ್ ಪಿ, ಸುಖಲಾಕ್ಷಿ ಬಂಗೇರ, ಸನತ್ ಕುಮಾರ್, ಸೌಮ್ಯ ರಾಕೇಶ್, ಸತೀಶ್ ಪೂಜಾರಿ, ಅಭಿಲಾಷ್ ಮತ್ತಿತರರು ಉಪಸ್ಥಿತರಿದ್ದರು.