ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನ. 30 - ಡಿ.1: ವೀರಮಾರುತಿ ಕ್ರಿಕೆಟರ್ಸ್ ಇವರ ವತಿಯಿಂದ ಹನುಮ ಟ್ರೋಫಿ -2024 ; ನೂತನ ಕಚೇರಿ ಉದ್ಘಾಟನೆ ; ಆಮಂತ್ರಣ ಪತ್ರ ಬಿಡುಗಡೆ

Posted On: 23-11-2024 07:14PM

ಹೆಜಮಾಡಿ : ವೀರಮಾರುತಿ ಕ್ರಿಕೆಟರ್ಸ್ ಇವರ ವತಿಯಿಂದ ನ. 30 ಮತ್ತು ಡಿ.1 ರಂದು ಹೆಜಮಾಡಿ ಮೈದಾನದಲ್ಲಿ ನಡೆಯಲಿರುವ ಕಡಲ ತೀರದ ಮುಗ್ಗೆರ್ಕಳ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟ ಹನುಮ ಟ್ರೋಫಿ -2024 ಇದರ ನೂತನ ಕಚೇರಿ ಉದ್ಘಾಟನೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.

ಈ ಸಂದರ್ಭದಲ್ಲಿ ಅತಿಥಿಗಳಾಗಿ ರೊಲ್ಪಿ ಡಿ ಕೋಸ್ತಾ ಹೆಜಮಾಡಿ , ಕೃಷ್ಣ. ಪಿ. ಬಂಗೇರ ಕಲ್ಲಟ್ಟೆ , ನವೀನ್ ಕುಮಾರ್ ಹೆಜಮಾಡಿ, ಗುರುಪ್ರಸಾದ್ ಜಿ. ಎಸ್ ಮಟ್ಟು , ರಾಜು ಎಲ್ ಐ ಸಿ ಹೆಜಮಾಡಿ ಹಾಗೂ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಜೀವನ್ ಪ್ರಕಾಶ್ ಮಟ್ಟು, ಗೌರವ ಅಧ್ಯಕ್ಷರಾದ ವಿಠಲ್ ಮಾಸ್ಟರ್ ಉಪಸ್ಥಿತರಿದ್ದರು. ತಂಡದ ಗೌರವ ಸಲಹೆಗರಾರು ನಿತಿನ್ ಕುಮಾರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನ.30 ರಂದು ಬೆಳಿಗ್ಗೆ 8 ಗಂಟೆಗೆ 6 ತಂಡಗಳ ಲೀಗ್ ಮಾದರಿಯ ಪಂದ್ಯಾಟ ಆರಂಭ ಗೊಂಡು, ಬೆಳಿಗ್ಗೆ 10 ಗಂಟೆಗೆ ಪಂದ್ಯಾಟದ ಉದ್ಘಾಟನೆ ಹಾಗೂ ಸಮುದಾಯದ ಆಟಗಾರದ ದಿ| ಹರೀಶ್ ಬಂಗೇರ ಮುಳೂರು ಮತ್ತು ದಿ| ಅಶ್ವಥ್. ಉಪ. ತಹಸೀಲ್ದಾರ್ ಉಡುಪಿ ಇವರುಗಳಿಗೆ ಶೃದ್ಧಾಂಜಲಿ ಅರ್ಪಣೆ ನಂತರ ವಿಶೇಷ ಆಕರ್ಷಣೆಯ ಟ್ರೋಫಿ ಹಾಗೂ ಸಮುದಾಯದ ವಿದ್ಯಾರ್ಥಿಗಳಿಗೆ, ಅಸೌಖ್ಯದ ಕುಟುಂಬಕ್ಕೆ ನೀಡುವ ಆಹಾರ ಕಿಟ್ ಕೊಡುಗೆ. ತದನಂತರ 6 ತಂಡದ ಹಾಗೂ ಆಯೋಜಕರಿಂದ ಧ್ವಜಾರೋಹಣ ಮುಖ್ಯ ಅತಿಥಿ ಗಣ್ಯರ ಸಮ್ಮುಖದಲ್ಲಿ ನೆರವೇರಲಿದೆ.

ಡಿ.1, ಭಾನುವಾರ ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ, ಸನ್ಮಾನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮ M9 ಸ್ಪೋರ್ಟ್ಸ್ ಇದರಲ್ಲಿ ನೇರ ಪ್ರಸಾರದ ವೀಕ್ಷಣೆ ಗೆ ಅವಕಾಶ ಇದೆ ಎಂದು ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಧನಂಜಯ ರವರು ತಿಳಿಸಿದರು.