ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತುಳು ಕಥಾ ಬರಹಗಾರರಿಗೆ ಸುವರ್ಣ ಅವಕಾಶ - “ಕುದ್ಕ ಬಚ್ಚಿರೆ” ತುಳು ಸಣ್ಣ ಕಥಾ ಸ್ಪರ್ಧೆ

Posted On: 03-12-2024 07:26AM

ಕಾಪು : ತುಳು ಕಥೆ ಬರಹಗಾರರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಮಾಯಿಲು ಫಿಲ್ಮ್ಸ್ ಮತ್ತು ಕಡಲ್ ಸ್ಟುಡಿಯೋಸ್ ವತಿಯಿಂದ ಸುವರ್ಣ ಅವಕಾಶವನ್ನು ಕಲ್ಪಿಸಿದ್ದು “ಕುದ್ಕ ಬಚ್ಚಿರೆ” ಎಂಬ ವೇದಿಕೆಯನ್ನು ಸಿದ್ದಪಡಿಸಿ ತುಳು ಸಣ್ಣ ಕಥಾಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಮೂರು ಉತ್ತಮ ಕಥೆಗಳಿಗೆ 3,000ರೂ.ಗಳಂತೆ ಮತ್ತು 7 ಮೆಚ್ಚಿದ ಕಥೆಗಳಿಗೆ 1,500ರೂ. ಗಳಂತೆ ಒಟ್ಟಿಗೆ 10 ವಿಜೇತರಿಗೆ ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಗುವುದು. ಆಯ್ದ ಕಥೆಗಳನ್ನು ಪುಸ್ತಕರೂಪದಲ್ಲಿ ಮುದ್ರಿಸಿ ಬಿಡುಗಡೆ ಮಾಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸುವವರು 800ಪದ ಮೀರದೆ ತುಳು ಭಾಷೆಯಲ್ಲಿ ತಮ್ಮ ಸ್ವಂತ ಕಥೆ ಬರೆದು kudhkabachire@gmail.comಗೆ ಇ-ಮೇಲ್ ಅಥವಾ 9900634405 ನಂಬರಿಗೆ ಪಿಡಿಎಫ್ ಅಥವಾ ವರ್ಡ್ ಫಾರ್ಮ್ಯಾಟ್ ನಲ್ಲಿ ವಾಟ್ಸಾಪ್ ಮೂಲಕ ಜನವರಿ 31 2025ರ ಒಳಗೆ ಕಳುಹಿಸಬೇಕು.

ಕೈ ಬರಹದ ಮೂಲಕ ಕಥೆ ಬರೆಯುವವರು A4 ಹಾಳೆ ಪುಟದಲ್ಲಿ ಬರೆದು “ಆರ್ ಪ್ರದೀಪ್, ತಿರ್ತಗುತ್ತು ಗರ್ಡಾಡಿ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ ತಾಲೂಕು, 574217” ಈ ವಿಳಾಸಕ್ಕೆ ಪೋಸ್ಟ್ ಮೂಲಕ ಕಳಿಸಬಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ತಮ್ಮ ಹೆಸರು, ವಿಳಾಸ, ವಯಸ್ಸು ಮತ್ತು ಕಥೆಯ ತಲೆಬರಹವನ್ನು ಬೇರೆ ಹಾಳೆಯಲ್ಲಿ ಬರೆದು ಅದರ ಜೊತೆಗೆ ತಮ್ಮ ಕಥೆಯನ್ನು ಲಗತ್ತಿಸಿ ಪೋಸ್ಟ್ ಮೂಲಕ ಕಳಿಸಬೇಕು. ಹಾಗೂ ವಾಟ್ಸಾಪ್, ಮೇಲ್ ಮಾಡುವವರು ತಮ್ಮ ವಿವರಗಳನ್ನು ಬೇರೆಯೇ ಹಾಳೆಯಲ್ಲಿ ಬರೆದು ಕಳಿಸಬೇಕು.

ನಿಮ್ಮದೇ ಸ್ವಂತ ವಿಷಯದ ಆಧಾರದ ಮೇಲೆ ಕಥೆ ಬರೆಯಬೇಕು. 14 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ. ಹೆಚ್ಚಿನ ಮಾಹಿತಿಗೆ ಆಯೋಜಕರ ಸೋಷಿಯಲ್ ಮೀಡಿಯಾವನ್ನು ಫಾಲೋ ಮಾಡಬಹುದು ಅಥವಾ 9900634405, 8762686433 ಈ ನಂಬರಿಗೆ ಕರೆಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.