ಶಿರ್ವ : ಭಾರೀ ಕುತೂಹಲ ಮೂಡಿಸಿದ್ದ ಶಿರ್ವ ಸಹಕಾರಿ ವ್ಯವಸಾಯಿಕ ಸಂಘ(ನಿ.) ಶಿರ್ವ ಇದರ ಆಡಳಿತ ಮಂಡಳಿಗೆ ಶನಿವಾರ ನಡೆದ ಚುಣಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದ ಬಿಜೆಪಿ ಹಾಗೂ ಸಹಕಾರ ಭಾರತಿ ಬೆಂಬಲಿತ ಕುತ್ಯಾರು ಪ್ರಸಾದ್ ಶೆಟ್ಟಿ ನೇತೃತ್ವದ ತಂಡ 12 ಸ್ಥಾನಗಳಲ್ಲಿ 11 ಸ್ಥಾನವನ್ನು ಗಳಿಸುವ ಮೂಲಕ ದ್ವಿತೀಯ ಅವಧಿಗೆ ಆಡಳಿತದ ಚುಕ್ಕಾಣಿಯನ್ನು ಹಿಡಿದಿದೆ.
ಚುನಾವಣಾ ಅಧಿಕಾರಿಯಾಗಿ ರೋಹಿತ್ ಪ್ರ.ದ.ಸಹಾಯಕರು, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಉಡುಪಿ ಇವರು ಕರ್ತವ್ಯ ನಿರ್ವಹಿಸಿದ್ದರು.
ಸಾಮಾನ್ಯ ಸ್ಥಾನದಲ್ಲಿ ಕುತ್ಯಾರು ಪ್ರಸಾದ್ ಎಸ್.ಶೆಟ್ಟಿ, ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ರಂಜಿತ್ ಪ್ರಭು ಮಟ್ಟಾರು, ಉಮೇಶ ಆಚಾರ್ಯ, ಪುರುಶೋತ್ತಮ ಶೆಟ್ಟಿಗಾರ್, ಸುಂದರ ಮೂಲ್ಯ. ಮಹಿಳಾ ಮೀಸಲು ಸ್ಥಾನದಲ್ಲಿ ವಾರಿಜ ಆರ್ ಕಲ್ಮಾಡಿ, ವೇದಾವತಿ ಆಚಾರ್ಯ, ಹಿಂದುಳಿದ ಪ್ರವರ್ಗ ಎಯಲ್ಲಿ ವಿಜಯ ಪೂಜಾರಿ, ಹಿಂದುಳಿದ ಪ್ರವರ್ಗ ಬಿಯಲ್ಲಿ ಹರಿಣಾಕ್ಷ ಶೆಟ್ಟಿ, ಪರಿಶಿಷ್ಠ ಜಾತಿ ವಿಭಾಗದಲ್ಲಿ ಕೃಷ್ಣ ಮುಖಾರಿ, ಪರಿಶಿಷ್ಠ ಪಂಗಡದಲ್ಲಿ ಗಣೇಶ್ ನಾಯ್ಕ್ ಆಯ್ಕೆಯಾಗಿದ್ದಾರೆ.
ಕಾರ್ಯಕರ್ತರ ಪರಿಶ್ರಮವೇ ವಿಜಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕುತ್ಯಾರು ಪ್ರಸಾದ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ವಿಜೇತರನ್ನು ಅಭಿನಂದಿಸಿದರು.