ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಸಂಪನ್ನ

Posted On: 07-02-2025 08:01PM

ಕಾಪು : ಜೀರ್ಣೋದ್ಧಾರಗೊಂಡ ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಗುರುವಾರ ನೆರವೇರಿತು. ದೇವಳದ ಪ್ರಧಾನ ತಂತ್ರಿಗಳಾದ ಕಳತ್ತೂರು ಉದಯ ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಮಂಜಿತ್ತಾಯರವರ ಸಹಭಾಗಿತ್ವದಲ್ಲಿ ಬ್ರಹ್ಮಕಲಶ ಮಹೋತ್ಸವ ಧಾರ್ಮಿಕ ವಿಧಿಗಳು ಸಂಪನ್ನಗೊಂಡವು. ಉತ್ಸವ ಬಲಿ, ಶ್ರೀ ಬ್ರಹಲಿಂಗೇಶ್ವರ, ನಾಗದೇವರಿಗೆ ಪೂಜೆ, ಪಲ್ಲಪೂಜೆ ನಡೆಯಿತು.

ದೇವರನ್ನು ವಿಶೇಷವಾಗಿ ಅಲಂಕರಿಸಿ ಮಹಾಪೂಜೆ ನೆರವೇರಿಸಲಾಯಿತು. ಸಹಸ್ರಾರು ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕರಂದಾಡಿಗುತ್ತು ಸತ್ಯಜಿತ್ ಶೆಟ್ಟಿ, ಕಾರ್ಯಾಧ್ಯಕ್ಷ ಕಿಶನ್ ಭಂಡಾರಿ ಕರಂದಾಡಿಗುತ್ತು, ಕೋಶಾಧಿಕಾರಿ ಪದ್ಮನಾಭ ಶಾನುಭಾಗ್, ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ರಾವ್, ಸಮಿತಿ ಗೌರವಾಧ್ಯಕ್ಷರಾದ ಲಕ್ಷ್ಮೀ ಜಯರಾಮ ಶೆಟ್ಟಿ, ಪಾಂಡುರಂಗ ಶ್ಯಾನುಭಾಗ್, ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮ ಮತ್ತು ಮಹಾ ಅನ್ನಸಂತರ್ಪಣೆಯ ಸೇವಾರ್ಥಿ ಅಕ್ಷಯ್ ಜೆ. ಶೆಟ್ಟಿ, ಉಪಾಧ್ಯಕ್ಷರಾದ ವಿಠಲ ಶೆಟ್ಟಿ ಪಡುಬರ್ಪಾಣಿ, ಭಾಸ್ಕರ್ ಶೆಟ್ಟಿ ಬರ್ಪಾಣಿ, ಪ್ರೇಮನಾಥ ಶೆಟ್ಟಿ ಗುಡ್ಡ ಶೆಟ್ರಮನೆ, ಭಾಸ್ಕರ್ ಶೆಟ್ಟಿ ಕೆಳಮನೆ, ವಿಜಯ ಶೆಟ್ಟಿ ಕಾರ್ಕಳ, ದಿನೇಶ್ ಶೆಟ್ಟಿ ಪಡುಮನೆ, ನಿರಂಜನ್ ಶೆಟ್ಟಿ ತೋಟದ ಮನೆ, ಮುದ್ದು ಪೂಜಾರಿ ಹಾಡಿಮನೆ, ಕಾರ್ಯದರ್ಶಿಗಳಾದ ವಾಸುದೇವ ರಾವ್, ಉಮೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಶ್ರೀಧರ ಶೆಟ್ಟಿಗಾರ್, ರಾಮಚಂದ್ರ ಆಚಾರ್ಯ, ಪ್ರಜ್ಞಾ ಮಾರ್ಪಳ್ಳಿ, ಸಲಹೆಗಾರರಾದ ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ರಾಘವೇಂದ್ರ ಭಟ್ ಉಳಿಯಾರು, ತ್ರಿವಿಕ್ರಮ ಭಟ್, ಹೇಮಲತಾ ಶೆಟ್ಟಿ, ಆಂತರಿಕ ಲೆಕ್ಕಪರಿಶೋಧಕರಾದ ರಾಜಶೇಖರ ರಾವ್, ನಿರ್ಮಲ್ ಕುಮಾರ್ ಹೆಗ್ಡೆ, ಗುರುರಾಜ ಐತಾಳ್, ಸತೀಶ್ ಕುಲಾಲ್ ಉಳಿಯಾರು, ಮುಂಬಯಿ ಸಮಿತಿ ಗೌರವಾಧ್ಯಕ್ಷ ವಿಠಲ ಎಸ್. ಶೆಟ್ಟಿ, ಅಧ್ಯಕ್ಷ ದಯಾನಂದ ಶೆಟ್ಟಿ ಬೋಳ, ಕಾರ್ಯಾಧ್ಯಕ್ಷರಾದ ರಮೇಶ್ ಕೋಟಿ ಹಾಡಿಮನೆ, ರತ್ನಾಕರ ಶೆಟ್ಟಿ ಕುಟಚಾದ್ರಿ, ಶುಶ್ರುತ್ ಶೆಟ್ಟಿ, ಸಂಯೋಜಕರಾದ ಸತೀಶ್ ಶೆಟ್ಟಿ, ಸುರೇಶ್ ಶೆಟ್ಟಿ, ಗೌರವ ಸಲಹೆಗಾರರಾದ ಪ್ರಮುಖರಾದ ಯಾದವಕೃಷ್ಣ ಶೆಟ್ಟಿ ಶಿಬರೂರು, ಸುಭಾಶ್ಚಂದ್ರ ಹೆಗ್ಡೆ ದೊಡ್ಡಮನೆ, ಕಾರ್ಯದರ್ಶಿ ಶಶಿಧರ ಶೆಟ್ಟಿ ತೋಕೂರುಗುತ್ತು, ಜ. ಕಾರ್ಯದರ್ಶಿಗಳಾದ ಸತೀಶ್ ಶೆಟ್ಟಿ, ರಮೇಶ್ ಶೆಟ್ಟಿ, ಸೀತಾರಾಮ ಶೆಟ್ಟಿ, ರವೀಂದ್ರ ಶೆಟ್ಟಿ, ಸಂಜೀವಿ ಶೆಟ್ಟಿ, ಕೋಶಾಧಿಕಾರಿ ವಿದ್ಯಾನಂದ ರೈ, ಪ್ರಮುಖರಾದ ದೇವಿಪ್ರಸಾದ್ ಶೆಟ್ಟಿ, ಭಾಸ್ಕರ್ ಕುಮಾರ್ ಕರಂದಾಡಿ, ಶರ್ಮಿಳಾ ಆಚಾರ್ಯ, ಶ್ಯಾಮ ಶೆಟ್ಟಿಗಾರ್, ಶಶಿಧರ ಶೆಟ್ಟಿ ಎರ್ಮಾಳು, ಚಂದ್ರಶೇಖರ ರಾವ್, ರವಿ ನಾಯ್ಕ್, ಶರತ್ ಶೆಟ್ಟಿಗಾರ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಮೀನಾಕ್ಷಿ ಗೋಪಾಲ್ ನಾಯ್ಕ್, ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಮುಂಬಯಿ ಸಮಿತಿ, ಭಜನಾ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಸ್ಥರು, ಊರ ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.