ಕಾಪು : ಬದ್ರೀಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ಇದರ ನೂತನವಾಗಿ ಆಯ್ಕೆಯಾದ ಜಮಾತ್ ಆಡಳಿತ ಸಮಿತಿ ಹಾಗೂ ಜಮಾತ್ ಅಭಿವೃದ್ದಿ ಸಮಿತಿಯ ವತಿಯಿಂದ ದಾನಿಗಳ ನೆರವಿನಿಂದ ವಿವಿದ ಅಭಿವೃದ್ಧಿ ಕಾಮಗಾರಿಗಳನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಿದರು.
ಈ ಸಂದರ್ಭ ಅವರು ಅಭಿವೃದ್ದಿ ಕೆಲಸಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಮಾತ್ ಸಮಿತಿ ಮತ್ತು ಅಬಿವೃದ್ದಿ ಸಮಿತಿ ಹಾಗೂ ದಾನಿಗಳು, ಎಲ್ಲಾ ಜಮಾತಿಗರ ಒಗ್ಗಟ್ಟನ್ನು ಶ್ಲಾಘಿಸಿದರು.
ಜಮಾತಿನ ಹಲವಾರು ದಾನಿಗಳ ಮುಖಾಂತರ ಸಮಾರು 10 ಲಕ್ಷದ ಅಭಿವೃದ್ಧಿ ಕಾರ್ಯಗಳು ನಡೆಯಿತು.
ಜಮಾತಿನ ಅಧ್ಯಕ್ಷರಾದ ಡಾ. ಯು.ಎಂ.ಫಾರೂಕ್ ಚಂದ್ರನಗರರವರು ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ರಜಬ್ ಪರ್ಕಳ, ಅಶ್ರಫ್ ಮೂಸ ಮಜೂರು, ಹಸನಬ್ಬ ಸಾಹೇಬ್, ಹಾಜಿಮೋನು, ಉ ಎ ರಶೀದ್, ಸಾದಿಕ್ ಕೆ ಪಿ, ಮಹಮ್ಮದ್, ಶೌಕತ್ ಅಲಿ ಬಾವ, ಅಬ್ದುಲ್ ರಹೀಂ, ಜಮಾತ್ ಆಡಳಿತ ಸಮಿತಿಯ ಸದಸ್ಯರುಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಜಮಾತಿನ ಸದಸ್ಯರು ಉಸಸ್ಥಿತರಿದ್ದರು.
ಮಸೀದಿಯ ಖತೀಬರಾದ ಅಬ್ದುಲ್ ರಶೀದ್ ಸಖಾಫಿ ದುವಾ ಮಾಡಿದರು. ಶರ್ಫುದ್ದೀನ್ ಶೇಖ್ ಸ್ವಾಗತಿಸಿ, ಅಶ್ರಫ್ ಖಾಸಿಂ ಕರಂದಾಡಿ ವಂದಿಸಿದರು.