ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ರವಿ ಉಪಾಧ್ಯಾಯ ಅವಿರೋಧ ಆಯ್ಕೆ

Posted On: 01-07-2025 06:10PM

ಕಾಪು : ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನದ ಉಳಿಯಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಜೂರು ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ರವಿ ಉಪಾಧ್ಯಾಯ ಉಳಿಯಾರು ಆಯ್ಕೆಗೊಂಡಿದ್ದಾರೆ.

ನೂತನ ಸಮಿತಿ ಸದಸ್ಯರಾಗಿ ರಾಘವೇಂದ್ರ ಭಟ್ ಉಳಿಯಾರು, ಗುರುರಾಜ್ ಭಟ್ ಉಳಿಯಾರು, ಜನಾರ್ಧನ ಆಚಾರ್ಯ ಉಳಿಯಾರು, ಗಣೇಶ್ ನಾಯ್ಕ್ ಉಳಿಯಾರು, ಶೈಲೇಶ್ ಮಜೂರು, ಯೋಗೀಶ್ ಉಳಿಯಾರು, ಅಶ್ವಿನಿ ಜಯರಾಮ ದೇವಾಡಿಗ ಉಳಿಯಾರು, ಗೀತಾ ಉಳಿಯಾರು ಆಯ್ಕೆಯಾಗಿದ್ದಾರೆ.