Updated News From Kaup

ರಸ್ತೆಯಲ್ಲಿ ಕಸವೋ ಅಥವಾ ಕಸದಲ್ಲಿ ರಸ್ತೆಯೋ ತಿಳಿಯದಾಗಿದೆ

Thumbnail
Posted On: 19 Jul 2020, 09:59 PM

ಕಟಪಾಡಿ ರಾಷ್ಟ್ರೀಯ ಹೆದ್ದಾರಿ (ಕೆನರಾ ಬ್ಯಾಂಕ್) ಎದುರಿನ ರಸ್ತೆಯು ಕಸಮಯವಾಗಿದೆ. ಈ ರಸ್ತೆಯ ಅಕ್ಕಪಕ್ಕದಲ್ಲಿ ಹಲವಾರು ಮನೆ, ವಾಣಿಜ್ಯ ಸಂಕೀಣ೯ಗಳಿವೆ ಇಲ್ಲಿಂದ ನಡೆದುಕೊಂಡು ಹೋಗುವವರ ಪಾಡು ದೇವರಿಗೆ ಪ್ರೀತಿ. ಕಸದಲ್ಲಿರುವ ಆಹಾರ ವಸ್ತುಗಳನ್ನು ತಿನ್ನಲು ಬರುವ ಬೀದಿ ನಾಯಿಗಳ ಹಿಂಡಿನಿಂದ ಈ ರಸ್ತೆಯಲ್ಲಿ ಸಾಗಲು ಆಗದ ಪರಿಸ್ಥಿತಿ ಎದುರಾಗಿದೆ. ಸ್ಥಳೀಯರ ಪ್ರಕಾರ ವಾಹನಗಳಲ್ಲಿ ಬಂದು ಕಸವನ್ನು ಎಸೆಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಈ ರಸ್ತೆಯು ಮಿನಿ ಡಂಪಿಂಗ್ ಯಾಡ್೯ ಯಾಗಿ ಪರಿಣಮಿಸಿದೆ.ಇದರಿಂದ ಸಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ .ಕೂಡಲೇ ಸಂಬಂಧ ಪಟ್ಟ.ಗ್ರಾ.ಪಂ ಕ್ರಮ ಕೈಗೊಳ್ಳಬೇಕು ಅಲ್ಲದೆ ಕಸ ಹಾಕುವವರಿಗೆ ಸರಿಯಾದ ಶಿಕ್ಷೆ ವಿಧಿಸಬೇಕಾಗಿದೆ. ರಾಘವೇಂದ್ರ ಪ್ರಭು,ಕವಾ೯ಲು ಉಡುಪಿ

ಅಂತಾರಾಷ್ಟ್ರೀಯ ಮಟ್ಟದ ಭಾಷಾ ವಿಜ್ಞಾನಿ ಯು.ಪಿ.ಉಪಾಧ್ಯಾಯ ಇನ್ನಿಲ್ಲ

Thumbnail
Posted On: 19 Jul 2020, 09:12 AM

ಕಾಪು, ಜು. 18 : ಹಿರಿಯ ಸಂಶೋಧಕ, ತುಳು ವಿದ್ವಾಂಸ, ಅಂತಾರಾಷ್ಟೀ ಯ ಮಟ್ಟದ ಭಾಷಾ ವಿಜ್ಞಾನಿ ಮಹೋಪಾಧ್ಯಾಯ ಡಾ| ಉಳಿಯಾರು ಪದ್ಮನಾಭ ಉಪಾಧ್ಯಾಯ (88) ಅವರು ಜು. 17ರಂದು ರಾತ್ರಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಅಸೌಖ್ಯದಿಂದಾಗಿ ನಿಧನ ಹೊಂದಿದರು. ಉಡುಪಿ ಜಿಲ್ಲೆಯ, ಕಾಪು ತಾಲೂಕಿನ ಮಜೂರು ಗ್ರಾಮದ ಉಳಿಯಾರು ನಿವಾಸಿಯಾಗಿದ್ದ ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಭಾಷೆ, ಜನಪದ, ಸಂಸ್ಕೃತಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಪತ್ನಿ ಬಹುಭಾಷಾ ವಿಜ್ಞಾನಿ ಡಾ| ಸುಶೀಲಾ ಉಪಾಧ್ಯಾಯ ಅವರು 2014ರಲ್ಲಿ ನಿಧನ ಹೊಂದಿದ್ದರು. ಕನ್ನಡ, ತುಳು, ಸಂಸ್ಕೃತ, ಮಲಯಾಳಂ, ತಮಿಳು, ಇಂಗ್ಲೀಷ್, ಫ್ರೆಂಚ್, ಆಫ್ರಿಕನ್ ಭಾಷೆಗಳಲ್ಲಿ ಪ್ರಭುತ್ವವನ್ನು ಸ್ಥಾಪಿಸಿದ್ದ ಅವರು ಭೂತ ವರ್ಷಿಪ್, ಫೋಕ್ ರಿಚುವಲ್ಸ್, ಫೋಕ್ ಎಫಿಕ್ಸ್ ಆಫ್ ತುಳುನಾಡು, ಕಾನ್ವರ್‍ಸೇಶನಲ್ ಕನ್ನಡ ಮೊದಲಾದ ನೂರಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ತುಳು ಭಾಷೆಗೆ ಬೃಹತ್ ನಿಘಂಟು ರಚಿಸಿ ನೀಡಿದ್ದ ಉಪಾಧ್ಯಾಯರು ತುಳು ಭಾಷಾ ಅಧ್ಯಯನಕ್ಕೆ ವಿಶೇಷ ಕೊಡುಗೆ ನೀಡಿದ್ದ ಉಪಾಧ್ಯಾಯ ಅವರು ಹಲವಾರು ಕೃತಿಗಳನ್ನು ರಚಿಸಿದ್ದರು. ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿಕೊಂಡಿದ್ದ ಅವರು ಹಲವಾರು ಸಂಶೋಧನಾತ್ಮಕ ಕೃತಿಗಳನ್ನು ಬರೆದಿದ್ದರು. ಎಳೆವೆಯಲ್ಲಿಯೇ ಹಿಂದಿ ಶಿಕ್ಷಣ ಮತ್ತು ಹಿಂದಿ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಸಾಹಿತ್ಯದ ಅಭಿರುಚಿಯೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದರು. ಹಾರ್ಮೋನಿಯಂ, ಕೊಳಲು ವಾದನದಲ್ಲೂ ತರಬೇತಿ ಪಡೆದಿದ್ದ ಅವರು ವೇದಾಧ್ಯಯನ, ಪೌರೋಹಿತ್ಯ ನಿರ್ವಹಣೆಯ ಜೊತೆಗೆ ನಾಟಕ ಅಭಿನಯ, ನಿರ್ದೇಶನ, ರಚನೆ ಮತ್ತು ಹರಿಕಥಾ ಕಾರ್ಯಕ್ರಮದ ನಿರ್ವಹಣೆಗೈದಿದ್ದರು. ನಿರಂತರ ಅಧ್ಯಯನಶೀಲರಾಗಿದ್ದ ಅವರು 1955ರಲ್ಲಿ ಮದರಾಸಿನ ವಿವೇಕಾನಂದ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಬಿಎ ಆನರ್ಸ್ ಪದವಿ, ಎಂ.ಎ. ಪದವಿ ಪಡೆದಿದ್ದು, 1958ರಲ್ಲಿ ಮದರಾಸಿನ ಪ್ರಾಚ್ಯ ಹಸ್ತಪ್ರತಿ ಗ್ರಂಥಾಲಯದ ಉಪಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿರುವಾಗಲೇ ಮದರಾಸು ವಿವಿಯಲ್ಲಿ ಕನ್ನಡ ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. 1959ರಲ್ಲಿ ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಸಂಸ್ಕೃತ / ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು 1965ರಲ್ಲಿ ಪೂನಾ ಡೆಕ್ಕನ್ ಕಾಲೇಜು ಭಾಷಾ ವಿಜ್ಞಾನ ಸಂಸ್ಥೆಯ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಳಿಕ 1969ರಲ್ಲಿ ಮೈಸೂರಿನ ಭಾರತೀಯ ಭಾಷಾ ವಿಜ್ಞಾನದ ದಕ್ಷಿಣ ಭಾರತ ಭಾಷಾ ಕೇಂದ್ರದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದು, 1973ರಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಭಾರತೀಯ ಸಾಂಸ್ಕೃತಿಕ ಸಂಬಂಧ ಪರಿಷತ್ ಮೂಲಕ ಪಶ್ಚಿಮ ಆಫ್ರಿಕಾದ ಸೆನೆಗಲ್ ರಾಷ್ಟ್ರದ ಡಕಾರ್ ವಿವಿಯಲ್ಲಿ ಇಂಡೋ ಆಫ್ರಿಕನ್ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ ಜೊತೆಗೆ ಲಂಡನ್ ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿ 9 ತಿಂಗಳುಗಳ ಕಾಲ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. 1980ರಲ್ಲಿ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ, ಸಂಶೋಧನಾ ಮಾರ್ಗದರ್ಶಕರಾಗಿ, ತುಳು ನಿಘಂಟಿನ ಪ್ರಧಾನ ಸಂಪಾದಕರಾಗಿ, ಸಿದ್ಧ ಸಮಾಽ ಯೋಗದ ಸಾಧನೆಗೈದಿದ್ದರು. 1998ರಲ್ಲಿ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ಇದರ ಉಡುಪಿ ಶಾಖೆಯಲ್ಲಿ ಸಿದ್ಧ ಸಮಾಜ ಯೋಗ ಶಿಕ್ಷಕರಾಗಿ, ಕೇಂದ್ರದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು. 2005ರಲ್ಲಿ ಮುಂಬಯಿಯಲ್ಲಿ ನಡೆದ ಭಾರತೀಯ ಸ್ಥಳನಾಮ ಪರಿಷತ್‌ನ ವಾರ್ಷಿಕ ಅಧ್ಯಯನದ ಅಧ್ಯಕ್ಷತೆ ವಹಿಸಿದ್ದರು. ನಿರಂತರ ಮಾರ್ಗದರ್ಶಕರು : ಅಂತಾರಾಷ್ಟ್ರೀಯ ಭಾಷಾ ವಿಜ್ಞಾನಿ , ತುಳುನಿಘಂಟುಕಾರ, ರಾಷ್ಟ್ರಮಟ್ಟದ ಬಹು ಶ್ರುತ ವಿದ್ವಾಂಸರಾಗಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಬಳಿಯಲ್ಲಿ ಪದ್ಮನಾಭ ಕೇಕುಣ್ಣಾಯ, ಸಂಗೀತಾ ಎಂ. ಕುಂಜೂರು ಲಕ್ಷ್ಮೀ ನಾರಾಯಣ ಕುಂಡಂತಾಯ, ಅರುಣ್ ಕುಮಾರ್ ಎಸ್.ಆರ್. ಮೊದಲಾದವರಿಗೆ ಸಂಶೋಧಕನಾ ಮಾರ್ಗದರ್ಶಕರಾಗಿದ್ದು, ಡಾ| ಎಂ. ಪ್ರಭಾಕರ ಜೋಷಿ, ಡಾ| ರಾಘವ ನಂಬಿಯಾರ್, ಡಾ| ಜನಾರ್ದನ ಭಟ್ ಮೊದಲಾದವರಿಗೆ ಪಿಎಚ್‌ಡಿ ಗೈಡ್ ಆಗಿದ್ದರು. ಪ್ರಶಸ್ತಿ - ಪುರಸ್ಕಾರಗಳು : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ತುಳು ಸಮ್ಮೇಳನ ಪ್ರಶಸ್ತಿ, ಗುಂಡರ್ಟ್ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಕಾರಂತ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಿಟ್ಟೆಲ್ ಪ್ರಶಸ್ತಿ, ಸಂದೇಶ ಪ್ರಶಸ್ತಿ, ಅಂತಾರಾಷ್ಟ್ರೀಯ ನಿಘಂಟುಕಾರ ರಚನಾಕಾರರ ಸಮ್ಮೇಳನ ಪ್ರಶಸ್ತಿ, ದ್ರಾವಿಡ ಭಾಷಾ ವಿeನಿಗಳ ಸಮ್ಮೇಳನದ ಬಹುಮಾನ, ಕನ್ನಡ ಸಂಘದ ತ್ರಿದಶಮಾನೋತ್ಸವ ಪ್ರಶಸ್ತಿ, ಶ್ರೀ ರಾಮ ವಿಠಲ ಪ್ರಶಸ್ತಿ, ಸುವರ್ಣ ಕರ್ನಾಟಕ ದಿಬ್ಬಣ ಪ್ರಶಸ್ತಿ, ಶಂಭಾ ಜೋಷಿ ಪ್ರಶಸ್ತಿ, ಹುಟ್ಟೂರ ಸಮ್ಮಾನ ಸಹಿತವಾಗಿ ನೂರಾರು ಪ್ರಶಸ್ತಿ, ಪುರಸ್ಕಾರ ಮತ್ತು ಗೌರವ ಸಮ್ಮಾನಗಳು ದೊರಕಿದ್ದವು. ಸಂತಾಪ : ಉಳಿಯಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿಯೂ ಕಾರ್ಯನಿರ್ವಹಿಸಿದ್ದ ಡಾ| ಯು.ಪಿ. ಉಪಾಧ್ಯಾಯ ಅವರ ಅಗಲುವಿಕೆಗೆ ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ವಲಯದ ಹಲವಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸಣ್ಣ ವಯಸ್ಸಿನ ಗ್ರಾಮೀಣ ಭಾಗದ ಡ್ರೋನ್ ಸಾಧಕ ಇಲ್ಲಿದ್ದಾನೆ ನೋಡಿ

Thumbnail
Posted On: 18 Jul 2020, 06:45 PM

ಡ್ರೋನ್ ಎಂಬ ಶಬ್ದ ಕೇಳಿದಾಗ ನಮಗೆ ಕಣ್ಣಿದುರಿಗೆ ಬರುವುದು ಹಾರುವ ಹಕ್ಕಿ ಕ್ಯಾಮರಾ ಇದನ್ನು ಖರೀದಿಸುವುದು ಬಿಡಿ ಬಳಕೆ ಮಾಡುವುದು ಬಹಳ ಕಷ್ಟ ಮತ್ತು ದೂರದ ಮಾತು ಎಂಬ ಕಲ್ಪನೆ ಎಲ್ಲರಲ್ಲಿದೆ. ಸಾಧನೆ ಮಾಡಲು ವಯಸ್ಸು ಬೇಡ ಮನಸ್ಸು ಇದ್ದರೆ ಸಾಕು ಎಂಬ ಮಾತಿಗೆ ಅನ್ವಥ೯ಕವಾಗಿ ಅತೀ ಕಡಿಮೆ ವಯಸ್ಸಿನಲ್ಲಿ ಮೀಸೆ ಚಿಗುರುವ ವಯಸ್ಸಿನ ಗ್ರಾಮೀಣ ಭಾಗದ ಹುಡುಗ ಡ್ರೋನ್ ಮ್ಯಾನ್ ಗ್ಲೆನ್ ರೆಬೆಲ್ಲೋ ತನ್ನ ಸಾಧನೆಯಿಂದ ಗುರುತಿಸುವ ಹಾದಿಯಲ್ಲಿ ಸಾಗುತ್ತಿದ್ದಾರೆ. ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಈ ಹುಡುಗ ಆಟದ ಸಾಮಾನುಗಳಿಂದ ತಯಾರಿಸಿದ ಮೊದಲ ಡ್ರೋನ್ ಏಳಲೇ ಇಲ್ಲ. ಈ ಸಂದಭ೯ದಲ್ಲಿ ಆದ ಬೇಸರ. ಹಠವಾಗಿ ಪರಿಣಮಿಸಿತು. ಏನಾದರೂ ಸಾಧನೆ ಮಾಡಬೇಕು ಎಂಬ ಅದಮ್ಯ ಛಲ ಕಾಡಿತು. ಅಂತರ್ಜಾಲದಲ್ಲಿ ಈ ಬಗ್ಗೆ ಹುಡುಕತೊಡಗಿದ ಒಂದಷ್ಟು ಜನರ ಪರಿಚಯ ಮಾಡಿಕೊಳ್ಳಲು ಪ್ರಾರಂಭಿಸಿದ ಈ ಹುಡುಗ ಡ್ರೋನಿಗೆ ಬಳಸುವ ಉಪಕರಣಗಳು ಎಲ್ಲೆಲ್ಲಿ ಸಿಗುತ್ತವೆ? ಅದರ ಮೌಲ್ಯಗಳೆಷ್ಟು ಎಂದು ತಿಳಿದುಕೊಂಡ. ಬರೀ ಮೋಟರಿಗೇ 8 ಸಾವಿರ ರೂ ಅಂದಾಗ ಅಷ್ಟು ಹಣ ಹೇಗೆ ಹೊಂದಾಣಿಕೆ ಮಾಡುವುದು ಎಂದು ಯೋಚಿಸಿದ ಈ ಸಂದಭ೯ ಆಟಿಕೆಗಳ ಮೋಟರ್ ಕೀಳಿ ಕಂಪ್ಯೂಟರ್ ಸಿ.ಪಿ.ಯುನಲ್ಲಿ ಕೂಲಿಂಗ್ ಫ್ಯಾನ್ ನನ್ನು ಖರೀದಿ ಮಾಡಿ ಮತ್ತೊಂದು 9 ವೋಲ್ಟ್ ಬ್ಯಾಟರಿ ಸಿಕ್ಕಿಸಿ ಡ್ರೋನ್ ತಯಾರಿಸಿ, ರಿಮೋಟಿನ ಬಟನ್ ಒತ್ತಲಾಯ್ತು. ಅದು ಹಾರಿತಾ ಖಂಡಿತ ಇಲ್ಲ ಅದರೂ ಛಲ ಬಿಡದ ಈ ಹುಡುಗ ಆ ಬಗ್ಗೆ ಮತ್ತಷ್ಟು ಅನ್ವೇಷಣೆ ಮಾಡಲು ಪ್ರಾರಂಭಿಸಿದ ಹಾರ್ಬೇಕಾದರೆ ಮುಖ್ಯವಾಗಿನಾಲ್ಕು ಫ್ಯಾನ್. ನಾಲ್ಕು ಮೋಟರ್. ಒಂದು ಬ್ಯಾಟರಿ. ಮತ್ತೊಂದು ರಿಮೋಟ್ ಬೇಕಾಗುತ್ತೆ ಕೊನೆಗೊ ಆತನ ಕನಸಿನ ಡ್ರೋನ್ ತಯಾರಿಸಿದ ವಿಮಾನದ ರೀತಿಯ ಸದ್ದು ಕೇಳಿದ ಕೂಡಲೇ ಹೊರಗೆ ಬರುವ, ಮದುವೆ ಕಾರ್ಯಕ್ರಮಗಳಲ್ಲಿ ವೀಡಿಯೋ ರೆಕಾರ್ಡಿಂಗಿಗೆ ಬಳಸುವ ಡ್ರೋನ್ ಕಂಡು ಕುತೂಹಲಗೊಳ್ಳುವ ಬಹಳಷ್ಟು ಮಂದಿಗೆ ಆಶ್ಚಯ೯ವಾಗ ಬಹುದು ಗ್ಲೆನ್ ರೆಬೆಲ್ಲೋ ರಚಿಸಿದ ಮೊದಲ ಡ್ರೋನ್ ಅದು. ಆಗ ಕೇವಲ 9 ನೇ ತರಗತಿಯ ಹುಡುಗ. ಈಗ ಆತನಿಗೆ 18ರ ಹರೆಯ. ಅವನ ಮಾತಲ್ಲಿ ಹೇಳುದಾದರೆ ಸಂಸ್ಥೆಗಳು, ನನ್ನ ಶಾಲೆ ಸೈoಟ್ ಲಾರೆನ್ಸ್ ನೀಡಿದ ಸ್ಕಾಲರ್ಶಿಪ್ ಹಣ ಅಮ್ಮ, ಅಣ್ಣ ಸಂಬಂಧಿಕರನ್ನು ಓಲೈಸಿ ಸಂಗ್ರಹಿಸಿದ ಹಣದಿಂದ ಸಲಕರಣೆಗಳನ್ನು ತರಿಸಿಕೊಂಡೆ ಆದರೆ ಅದನ್ನು ಮುಟ್ಟಲು ಒಂದಿಡೀ ವರ್ಷ ಅಮ್ಮ ಬಿಡಲೇ ಇಲ್ಲ. ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷೆ. ಡ್ರೋನ್ ನಿರ್ಮಾಣದ ಆಸೆ ಕನವರಿಕೆಯಲ್ಲೇ 10ನೇ ತರಗತಿ ಯ ಪಾಠಗಳನ್ನು ಚೆನ್ನಾಗಿ ಓದಿದೆ, ಪರೀಕ್ಷೆ ಯನ್ನುಬರೆದು 85.6% ಅಂಕಗಳಿಸಿದೆ. ಪರೀಕ್ಷೆ ಮುಗಿದ ಆ ಸಂಜೆಯಿಂದಲೇ ನಾನು ಪ್ರಯೋಗ ಮಾಡಲು ಪ್ರಾರಂಭಿಸಿದೆ ವಿವಿಧ ಆಧುನಿಕ ಸಲಕರಣೆಗಳಿಂದ ತಯಾರಿಸಿದ ಈ ಎರಡನೇ ಪ್ರಯೋಗವೂ ಕೂಡ ವಿಫಲವಾಯಿತು ಆದರೂ ನಾನು . ಕುಗ್ಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ತಯಾರಿಸುವವರನ್ನು ಸಂಪರ್ಕಿಸಿದೆ ಯುನೈಟೆಡ್‌‌ ಕಿಂಗ್ಡಮ್ ನ ಹವ್ಯಾಸಿ ಡ್ರೋನ್ ಹಾರಾಟಗಾರರ ಸಹಾಯ ಪಡೆದೆ ಅವರಿಂದ ಬಹಳಷ್ಟು ಮಾಹಿತಿ ಮಾಗ೯ದಶ೯ನ ಪಡೆದೆ. ಅಲ್ಲಿಂದಲೇ ಒಂದಷ್ಟು ಸಾಮಾಗ್ರಿಗಳನ್ನು, ಅಲ್ಲೇ ಕೆಲಸ ಮಾಡುವ ನನ್ನ ಅಮ್ಮನ ತಮ್ಮ ಅನಿಲ್ ಡಿಸೋಜ ಪೆರ್ನಾಲ್ ಅವರಿಗೆ ತಿಳಿಸಿ, ತರಿಸಿಕೊಂಡು ಡ್ರೋನ್ ತಯಾರಿಸಿದೆ. ಈ ಕ್ಷಣ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿತ್ತು ಕಾರಣ ನಾನು ತಯಾರಿಸಿದ ಆ ಪುಟ್ಟ ಡ್ರೋನ್ ಹಾರಿಯೇ ಬಿಡ್ತು. ಅಲ್ಲಿಂದ ನನಗೆ ಮತಷ್ಟು ಭರವಸೆ ಮೂಡಿತು ಈ ಹಂತದಲ್ಲಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವ ಕನಸು ಮೂಡಿತ್ತು ಎಂದು ಹೇಳಿದಾಗ ಕಣ್ಣoಚಿನಲ್ಲಿ ನೀರು ತುಂಬಿತ್ತು. ಈ ಕ್ಷೇತ್ರದಲ್ಲಿ ವಿಶೇಷ ಅಧ್ಯಯನ ಮಾಡುತ್ತಿರುವ ಈತ ಫೋಟೋ, ವೀಡಿಯೋ, ಡೆಲಿವರಿ, ಕೃಷಿ ವಿವಿಧ ಚಟುವಟಿಕೆಗಳಿಗೆ ಡ್ರೋನ್ ಬಳಸುವುದರ ಜೊತೆಗೆ ಅದನ್ನು ಡ್ರೋನ್ ರೇಸಿಂಗ್ ಕೂಡ ಮಾಡುತ್ತಾರೆ ಎಂಬುದನ್ನು ಗೆಳೆಯರಿಂದ ತಿಳಿದುಕೊಂಡ ಈತ ಉಡುಪಿಯ ಮಣಿಪಾಲದಲ್ಲಿ ನಡೆದ ರೇಸಿನಲ್ಲಿ ಭಾಗವಹಿಸಿದ. ಸಾಮಾನ್ಯವಾಗಿ ಡ್ರೋನುಗಳು ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಚಲಿಸಿದರೆ ರೇಸಿಂಗ್ ಡ್ರೋನುಗಳ ವೇಗ ಗಂಟೆಗೆ 180 ರಿಂದ 220 ಕಿ.ಮೀ ಓಡುವುದನ್ನು ಗಮನಿಸಿ ಕೊಂಡ. ಅಂತಹ ಡ್ರೋನುಗಳನ್ನೂ ತಯಾರಿಸಲು ಸಾಧ್ಯ ಎಂಬುದನ್ನು ಅರಿತ ಗ್ಲೆನ್ ಅದನ್ನು ತಯಾರಿಸಲು ಮುಂದಾಗಿ ಅದರಲ್ಲಿ . ಯಶಸ್ವಿಯಾದ . ಕಳೆದ ಒಂದೂವರೆ ವರ್ಷದಲ್ಲಿ ಈ ಹುಡುಗ 22 ಡ್ರೋನ್ ತಯಾರಿಸಿ ಸಮಾಜಕ್ಕೆ ನೀಡಿದ್ದಾನೆ.ಅತ್ಯಂತ ಸಹಜ ಕುತೂಹಲದಿಂದ ಪ್ರಾರಂಭವಾಗಿ ನಂತರ ಹವ್ಯಾಸವಾಗಿ ಇದೀಗ ಸಣ್ಣ ಪ್ರಮಾಣದ ಉದ್ಯಮವನ್ನು ಕೇವಲ 18ರ ವಯಸ್ಸಿನಲ್ಲಿ ಮಾಡುತ್ತಿದ್ದಾನೆ. ಪ್ರಾರಂಭದಲ್ಲಿ ಬೇರೆ ಕಡೆಯಿಂದ ಖರೀದಿಸುವ ಒಂದು ಡ್ರೋನಿನ ಬೆಲೆ ಕನಿಷ್ಟ ಅಂದರೂ ಸುಮಾರು ರೂ.ಒಂದೂವರೆ ಲಕ್ಷದ ಮೇಲಿತ್ತು. ಅದೇ ವಿವಿಧ ರೀತಿಯ ಉಪಕರಣಗಳನ್ನು ಖರೀದಿಸಿ ತಯಾರಿಸಿದಾಗ ಅದಕ್ಕೆ ಖಚಾ೯ಗಿದ್ದು 32 ಸಾವಿರ ರೂ ಮಾತ್ರ ಡ್ರೋನಿನ ತಯಾರಿ ಜೊತೆಗೆ ರಿಪೇರಿಯನ್ನೂ ಕಲಿತುಕೊಂಡುಊರ /ಪರ ಊರಿನ ಛಾಯಾಗ್ರಾಹಕರುಗಳಿಗೆಮುಂಬೈಯ ಕೆಲವು ಸಿನಿಮಾ ತಯಾರಿಕೆಯವರಿಂದಲೂ ಬೇಡಿಕೆ ಬರುತ್ತಿರುವುದು ಅಭಿನಂದನೀಯ ವಿಷಯ . ದ್ವಿತೀಯ ಪಿ.ಯು.ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸ್ ಆಗಿರುತ್ತಾನೆ. ಮುಂದಿನ ಗುರಿ :- ಮಣಿಪಾಲದಲ್ಲಿ ಏರೋನಾಟಿಕ್ಸ್ ಇಂಜಿನಿಯರಿಂಗ್ ಕಲಿಯುವ ಆಸೆ ಇದೆ.. Earn while learn ಎಂಬ ಮಾತಿನಂತೆ ಕಲಿಕೆಯ ಜೊತೆಗೆ ವೀಡಿಯೋ, ರೇಸಿಂಗ್ ಡ್ರೋನುಗಳ ತಯಾರಿ ಜೊತೆಗೆ ವಸ್ತುಗಳ ಸಾಗಾಟ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಕಸ್ಟಮೈಸ್ಡ್ ಡ್ರೋನ್ ಗಳನ್ನೂ ಗ್ಲೆನ್ ತಯಾರಿಸಿ ಕೊಡುತ್ತಾನೆ. ಮುಂದೆ ಈ ಆನ್ವೇಷನೆಯನ್ನು ಸಕಾ೯ರಕ್ಕೆ ಸಲ್ಲಿಸಬೇಕೆನ್ನುವ ಹಂಬಲ ಅವನಿಗಿದೆ .ನನ್ನ ಸಾಧನೆಯ ಹಿಂದೆ ನನ್ನ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಹಾರೈಕೆ ಇದೆ. ನಾನು ವಿಜ್ಞಾನ ವಿದ್ಯಾಥಿ೯ಯಾಗಿದ್ದರೂ ನನಗೆ 14 ದಿನ ರಜೆಯಲ್ಲಿ ಟಿ.ಸಿ.ಎಸ್ ನಲ್ಲಿ ನಡೆದ ವಿಜ್ಞಾನ ಕುರಿತ ವಿಶೇಷ ಕಾಯಾ೯ಗಾರದಲ್ಲಿ ಭಾಗವಹಿಸಲು ಅವಕಾಶ ನೀಡಿದ್ದರು. ನನ್ನ ಹೆತ್ತವರು ಕೂಡ ನನಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದರ ಫಲವಾಗಿ ನನಗೆ ಈ ಕ್ಷೇತ್ರದಲ್ಲಿ ಸಣ್ಣ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಬಹಳ ಕೃತಜ್ಞತೆಯಿಂದ ಹೇಳುತ್ತಾನೆ. ನಾನು ಹೊಸತನ್ನು ಸಂಶೋಧನೆ ಮಾಡಿಲ್ಲ. ಇರುವ ತಂತ್ರಜ್ಞಾನವನ್ನು ಸರಿಯಾದ ದಾರಿಯಲ್ಲಿ ಬಳಸುತ್ತಿದ್ದೇನೆ ಎಂದು ಆತನ ನುಡಿ - ಮುಂದೆಯೂ ಕೂಡ ನನ್ನ ಹೊಸತನ್ನು ಸಂಶೋಧಿಸುವ ಪ್ರಯತ್ನ ನಿಲ್ಲದು ಅದು ನಿರಂತರವಾಗಿ ನಡೆಯುತ್ತದೆ ಎಂದು ಹೇಳುತ್ತಾನೆ. ಈ ಚಿಗುರು ಮೀಸೆಯ ಹುಡುಗ. ಡ್ರೋನ್ ಹಾರಾಟದಲ್ಲಿನ ಕಾರ್ಯಕ್ಷಮತೆ ಯನ್ನು ಮನಗಂಡ ಒಂದು ಸಂಸ್ಥೆಯವರು ಮುಂಬೈಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಸ್ಪರ್ಧೆ ಯಲ್ಲಿ ಭಾಗವಹಿಸಿದ ಅನುಭವ ಅತನಿಗಿದೆ. ಈ ಸಣ್ಣಪ್ರಾಯದಲ್ಲೇ ಸಾಧನೆ ಜೊತೆಗೆ ಸಂಪಾದನೆ ಮಾಡುತ್ತಿರುವ ತನ್ನ ಮುದ್ದು ಮಗನ ಬಗ್ಗೆ ತಾಯಿ ಗ್ಲ್ಯಾಡಿಸ್ ರೆಬೆಲ್ಲೋಗೆ ಬಹಳ ಹೆಮ್ಮೆ ಇದೆ. ಸಾಮಾನ್ಯವಾಗಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಸುಲಭದಲ್ಲದ ಈ ಕಾಯ೯ವನ್ನು ತನ್ನ ಪಿಯುಸಿಯಲ್ಲಿ ಮಾಡಿರ ಈತನ ಸಾಧನೆ ಎಲ್ಲಾ ವಿದ್ಯಾಥಿ೯ಗಳಿಗೂ ಮಾದರಿಯಾಗಿದೆ. ಈತನ ಸಾಧನೆಗೆ ಬೇಕಿದೆ ಬೆಂಬಲ: - ಸರಕಾರ, ವಿವಿಧಿ ಸಂಘ ಸಂಸ್ಥೆಗಳು , ಮಾಧ್ಯಮಗಳು ಇಂತಹ ಸಹಜ ಸತ್ಯವಾದ ಯುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕಾಗಿದೆ ಇದರಿಂದ ಆತನ ಪ್ರತಿಭೆ ಅಂತ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯವಾಗಬಹುದಾಗಿದೆ. ಪ್ರಧಾನಿಯವರು ಹೇಳಿದಂತೆ ಆತ್ಮ ನಿಭ೯ರ ಭಾರತ ದ ನಿಮಾ೯ಣ ಮಾಡುವಲ್ಲಿ ಈ ರೀತಿಯ ವಿದ್ಯಾಥಿ೯ಗಳಿಂದ ಸಾಧ್ಯ. ಈತನ ಪ್ರತಿಭೆಯ ಕುರಿತು ಜನಪ್ರತಿನಿಧಿಗಳು ಬೆಂಬಲ ನೀಡಬೇಕು ಆತನ ಮಾತಿನಂತೆ ನನಗೆ ಇದರಲ್ಲಿ ಹಣ ಮಾಡಬೇಕೆಂಬ ಮನಸ್ಸಿಲ್ಲ ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಿ ಜನರಿಗೆ ಸುಲಭವಾಗಿ ಡ್ರೋನ್ ಸಿಗಬೇಕೆಂಬ ಹಂಬಲವಿದೆ.ಈ ವಿದ್ಯಾಥಿ೯ಯ ಮಾತು ಕೇಳಿದಾಗ ನಮಗೆ ಅನಿಸುವುದು ಇಷ್ಟೇ ಈ ವಿಶೇಷ ಪ್ರತಿಭೆಯನ್ನು ಬೆಳೆಸಬೇಕು.ಡ್ರೋನ್ ನಲ್ಲಿ ಮತ್ತಷ್ಟು ಸಂಶೋಧನೆಗೆ ಈ ರೀತಿಯ ವ್ಯಕ್ತಿಗಳನ್ನು ಬಳಸಿಕೊಂಡು ಗ್ರಾಮೀಣ ಭಾಗಕ್ಕೆ ಅಭಿವೃದ್ಧಿ ಮಾಡಲು ಸಾಧ್ಯವಾಗಬಹುದು. *ಕಲಿಕೆಯೊಂದಿಗೆ ಗಳಿಕೆ :-* ತತ್ವವನ್ನು ಎಲ್ಲಾ ಕಾಲೇಜುಗಳಲ್ಲಿ ಅಳವಡಿಸಿಕೊಂಡರೆ ಸಮಾಜದ ಅದೇ ರೀತಿ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಸಾಧ್ಯವಾಗಬಹುದು. ಈ ಬಗ್ಗೆ ಕಾಲೇಜುಗಳು ಯೋಚನೆ ಮಾಡಬೇಕು. ಮಂಗಳೂರಿನಲ್ಲಿ ಈ ರೀತಿಯ ಕಾಲೇಜು ಪ್ರಾರಂಭವಾಗಿರುವುದು ಶುಭ ಸೂಚನೆ . ಕರೋನಾ ದ ಈ ಸಮಯದಲ್ಲಿ ಭಾರತ ಆತ್ಮ ನಿಭ೯ರ ವಾಗಬೇಕು ಈ ರೀತಿಯ ಗ್ರಾಮೀಣ ಯುವ ಪ್ರತಿಭೆಗಳಿಗೆ ಅವಕಾಶ ಸಿಗಬೇಕು. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ

ಅಂಗವೈಕಲ್ಯತೆ ಮೆಟ್ಟಿನಿಂತ ರಕ್ಷಾ ನಾಯಕ್ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ -ಯಶ್ ಪಾಲ್ ಸುವರ್ಣ

Thumbnail
Posted On: 18 Jul 2020, 04:43 PM

ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 93% ಅಂಕಗಳಿಸಿದ ಉಡುಪಿ ತಾಲೂಕಿನ ಹಿರಿಯಡ್ಕ ಬೊಮ್ಮಾರಬೆಟ್ಟು ಗ್ರಾಮದ ವಿದ್ಯಾರ್ಥಿನಿ ಕುಮಾರಿ ರಕ್ಷಾ ನಾಯಕ್ ರನ್ನು ಅವರ ನಿವಾಸದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಶ್ರೀ ಯಶ್ ಪಾಲ್ ಎ ಸುವರ್ಣ ರೂ. 25,000 ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಬಾಲ್ಯದಿಂದಲೇ ಬಲಗೈ ಮತ್ತು ಬಲಗಾಲಿನ ಸ್ವಾಧೀನವಿಲ್ಲದೆ ಎಡಗೈ ಮೂಲಕ ಪರೀಕ್ಷೆ ಬರೆದು ,ಅಂಗವೈಕಲ್ಯ ತೆಯನ್ನು ಮೆಟ್ಟಿನಿಂತು ಸಾಧನೆ ಮಾಡುವ ಮೂಲಕ , ಮನಸ್ಸಿದ್ದರೆ ಮಾರ್ಗ ಎಂಬುದನ್ನು ಸಾಬೀತು ಪಡಿಸಿದ್ದೀರಿ, ತಮ್ಮ ಈ ಸಾಧನೆ ಇತರರಿಗೆ ಸ್ಫೂರ್ತಿಯಾಗಲಿ ಹಾಗೂ ಮುಂದಿನ ಶೈಕ್ಷಣಿಕ ಜೀವನ ಉಜ್ವಲವಾಗಲಿ ಎಂದು ಯಶ್ ಪಾಲ್ ಸುವರ್ಣ ಶುಭ ಹಾರೈಸಿದರು. ರಕ್ಷಾ ನಾಯಕ್ ರವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ತಮ್ಮ ವೈಯುಕ್ತಿಕ ನೆಲೆಯಲ್ಲಿ ರೂ. 25,000 ಪ್ರೋತ್ಸಾಹ ಧನದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಸಂಧ್ಯಾ ಕಾಮತ್, ಜಿಲ್ಲಾ ಬಿಜೆಪಿ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀ ಅಕ್ಷಿತ್ ಶೆಟ್ಟಿ ಹೆರ್ಗ, ಹಿಂದೂ ಯುವಸೇನೆಯ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಶೇಖರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭು, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.

ಬೊಮ್ಮರಬೆಟ್ಟು ನಿವಾಸಿ ಕು.ರಕ್ಷಾಳಿಗೆ ಸಾಧನೆಗೆ ಅಡ್ಡಿಯಾಗದ ಅಂಗವೈಕಲ್ಯ

Thumbnail
Posted On: 18 Jul 2020, 08:26 AM

ಸಾಧನೆ ಎನ್ನುವುದು ಉಳ್ಳವರ ಸೊತ್ತಲ್ಲ. ಸಾಧನೆ ಮಾಡುವ ಕನಸಿದ್ದರೆ ಏನಾದರೂ ಸಾಧಿಸಲು ಸಾಧ್ಯ ಮನುಷ್ಯ ಸಾಧನೆಗೆ ದೇವರ ಆಶೀರ್ವಾದ ಕೃಪೆ ಎರಡೂ ಇರುತ್ತದೆ. ಇಲ್ಲೊಬ್ಬ ಸಾಧಕಿ ತನ್ನ ಅಂಗವೈಕಲ್ಯಕ್ಕೆ ನಾಚುವಂತಹ ಸಾಧನೆ ಮಾಡಿ ಮನೆ ಮಾತಾಗಿದ್ದಾರೆ. ಉಡುಪಿ ತಾಲೂಕು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡುಜೆ ಶಾಲೆ ಬಳಿಯ ನಿವಾಸಿ ಕು. ರಕ್ಷಾ ಬಿನ್ ಉಮೇಶ್ ನಾಯಕ್ ಇವರೇ ಆ ಸಾಧಕಿ. ಈಕೆ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದಲ್ಲಿ 93% ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ. ಅದರಲ್ಲೇನು ವಿಶೇಷ ಇದಕ್ಕಿಂತ ಹೆಚ್ಚು ಅಂಕ ಗಳಿಸಿದವರೂ ಇಲ್ಲವೆ ಎನ್ನದಿರಿ. ಈಕೆಗೆ ಹುಟ್ಟಿನಿಂದ ಬಲ ಕಾಲು, ಬಲ ಕೈ ಸ್ವಾಧೀನ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ *ಎಡಗೈಯಲ್ಲಿ ಪರೀಕ್ಷೆ ಬರೆದು* ಅದ್ವಿತೀಯ ಸಾಧನೆ ಮಾಡಿ ಇಷ್ಟು ಅಂಕ ಗಳಿಸಿರುವುದು ಅಭಿನಂದನೀಯ ವಿಷಯ. ಎಲ್ಲಾ ರೀತಿಯ ವ್ಯವಸ್ಥೆಗಳು ಇದ್ದೂ ಸದೃಢರಾಗಿದ್ದರೂ ಕಲಿಯಲು ನುಣುಚಿಕೊಳ್ಳುವ ಹಲವಾರು ವಿದ್ಯಾರ್ಥಿಗಳ ನಡುವೆ ಕು. ರಕ್ಷಾರವರ ಈ ವಿಶೇಷ ಸಾಧನೆ ಎಲ್ಲರಿಗೂ ಮಾದರಿ. ಬಡತನ, ಅಂಗವೈಕಲ್ಯ ಇದ್ದರೂ ನಿರಂತರ ಅಧ್ಯಯನ ಶೀಲತೆ ಸಾಧಿಸಬೇಕೆನ್ನುವ ಅದಮ್ಯ ಮನಸ್ಸು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಅಂಗವೈಕಲ್ಯ ಹೊರಗೆ ಮಾತ್ರ ಒಳಗಿನ ಸಾಧನೆಗೆ ಯಾವುದೇ ವೈಕಲ್ಯ ಇಲ್ಲ ನಾನು ಕೂಡ ಬೇರೆ ವಿದ್ಯಾಥಿ೯ಗಳಂತೆ ಸಮಾನ ಎಂಬುದನ್ನು ಮನಗಂಡು ನನ್ನ ಪಾಠಗಳನ್ನು ಓದುತ್ತಿದ್ದೆ ನನಗೆ ಖಂಡಿತವಾಗಿಯೂ ಉತ್ತಮ ಅಂಕಗಳು ಬರುತ್ತವೆ ಎಂಬ ನಂಬಿಕೆ ಇತ್ತು ಎಂಬುದನ್ನು ಮನತುಂಬಿ ಹೇಳುತ್ತಾರೆ ರಕ್ಷಾ. ಮುಂದೆ ಉನ್ಯತ ವ್ಯಾಸಂಗ ಮಾಡುವ ಕನಸು ಅವರಲ್ಲಿದೆ. ಈ ರೀತಿಯ ವಿದ್ಯಾಥಿ೯ ಎಲ್ಲರಿಗೂ ಮಾದರಿ . ಅವರ ಸಾಧನೆಯನ್ನು ಗಮನಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಈಸಬೇಕು ಇದ್ದು ಜಯಿಸಬೇಕು ಎಂಬ ಮಾತಿನಂತೆ ಬದುಕುತ್ತಿರುವ ಈ ಸಾಧಕಿಗೆ ಸಲಾಂ ಸಕಾ೯ರ ಇವರ ಸಾಧನೆಗೆ ಪೂರಕವಾದ ಪ್ರೋತ್ಸಾಹ ನೀಡಬೇಕಕಾಗಿದೆ. ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ

ಕಾಪು ತಾಲೂಕಿನ ಮೂಡಬೆಟ್ಟುವಿನಲ್ಲೊಬ್ಬ ಡ್ರೋಣ್ ತಯಾರಕ ಗ್ಲೆನ್

Thumbnail
Posted On: 17 Jul 2020, 06:55 PM

ಡ್ರೋನ್ ಗ್ಲೇನ್ ರೆಬೆಲ್ಲೋ. ನಿಜವಾದ ಡ್ರೋನ್ ಮ್ಯಾನ್ ಇಲ್ಲಿದ್ದಾನೆ! Glen Rebello ಡ್ರೋನ್ ಹಾರ್ಬೇಕಾದ್ರೆ ನಾಲ್ಕು ಫ್ಯಾನ್. ನಾಲ್ಕು ಮೋಟರ್. ಒಂದು ಬ್ಯಾಟರಿ. ಮತ್ತೊಂದು ರಿಮೋಟ್ ಸಾಕು ತಾನೇ? ಆಟಿಕೆಗಳಿಂದ ಮೋಟರ್ ಕೀಳಲಾಯ್ತು. ಕಂಪ್ಯೂಟರ್ ಸಿ.ಪಿ.ಯುನಲ್ಲಿ ಕೂಲಿಂಗ್ ಫ್ಯಾನ್ ಇರುತ್ತಲ್ಲ, ಅದನ್ನು ಖರೀದಿಸಲಾಯ್ತು. ಮತ್ತೊಂದು 9 ವೋಲ್ಟ್ ಬ್ಯಾಟರಿ ಸಿಕ್ಕಿಸಿ ಡ್ರೋನ್ ತಯಾರಿಸಿ, ರಿಮೋಟಿನ ಬಟನ್ ಒತ್ತಲಾಯ್ತು. ಅದು ಹಾರಿತಾ? ವಿಮಾನದ ಸದ್ದು ಕೇಳಿದ ಕೂಡಲೇ ಹೊರಗೆ ಬರುವ, ಮದುವೆ ಕಾರ್ಯಕ್ರಮಗಳಲ್ಲಿ ವೀಡಿಯೋ ರೆಕಾರ್ಡಿಂಗಿಗೆ ಬಳಸುವ ಡ್ರೋನ್ ಕಂಡು ಕುತೂಹಲಗೊಳ್ಳುವ ಗ್ಲೆನ್ ರೆಬೆಲ್ಲೋ ರಚಿಸಿದ ಮೊದಲ ಡ್ರೋನ್ ಅದು. ಆಗ ಕೇವಲ 9 ನೇ ತರಗತಿಯ ಹುಡುಗ. ಈಗ 18ರ ಹರೆಯವಷ್ಟೇ. ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಹುಡುಗ ಆಟದ ಸಾಮಾನುಗಳಿಂದ ತಯಾರಿಸಿದ ಮೊದಲ ಡ್ರೋನ್ ಏಳಲೇ ಇಲ್ಲ. ಬೇಸರವಾಯ್ತು. ಹಠ ಮೂಡಿತು. ಕಾರಣ ಹುಡುಕತೊಡಗಿದ. ಅಂತರ್ಜಾಲದಲ್ಲಿ ಅಡ್ಡಾಡಿದ. ಒಂದಷ್ಟು ಜನರ ಪರಿಚಯ ಮಾಡ್ಕೊಂಡ. ಡ್ರೋನಿಗೆ ಬಳಸುವ ಉಪಕರಣಗಳು ಎಲ್ಲೆಲ್ಲಿ ಸಿಗುತ್ತವೆ? ಅದರ ಮೌಲ್ಯಗಳೆಷ್ಟು ಎಂದು ತಿಳಿದುಕೊಂಡ. ಬರೀ ಮೋಟರಿಗೇ ರೂ. 8,000! ಅಷ್ಟು ಹಣ ಎಲ್ಲಿದೆ? ಸ್ಕಾಲರ್ಶಿಪ್ ದುಡ್ಡು, ಅಮ್ಮ, ಅಣ್ಣ ಸಂಬಂಧಿಕರನ್ನು ಓಲೈಸಿ ಸಂಗ್ರಹಿಸಿದ ಹಣದಿಂದ ಸಲಕರಣೆಗಳನ್ನು ತರಿಸಿಕೊಂಡ. ಆದರೆ ಅದನ್ನು ಮುಟ್ಟಲು ಒಂದಿಡೀ ವರ್ಷ ಅಮ್ಮ ಬಿಡಲೇ ಇಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ. ಡ್ರೋನ್ ನಿರ್ಮಾಣದ ಕನವರಿಕೆಯಲ್ಲೇ 10ನೇ ತರಗತಿ ಯ ಪಾಠಗಳನ್ನು ಚೆನ್ನಾಗಿ ಓದಿ, ಪರೀಕ್ಷೆ ಬರೆದು 85.6% ಅಂಕಗಳಿಸಿದ. ಪರೀಕ್ಷೆ ಮುಗಿದ ಸಂಜೆಯಿಂದಲೇ ಪ್ರಯೋಗಕ್ಕಿಳಿದ. ಆಧುನಿಕ ಸಲಕರಣೆಗಳಿಂದ ತಯಾರಿಸಿದ ಈ ಎರಡನೇ ಪ್ರಯೋಗವೂ ವಿಫಲ. ಅಲ್ಲೂ ಕುಗ್ಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ತಯಾರಿಸುವವರನ್ನು ಸಂಪರ್ಕಿಸಿದ. ಯುನೈಟೆಡ್‌‌ ಕಿಂಗ್ಡಮ್ ನ ಹವ್ಯಾಸಿ ಡ್ರೋನ್ ಹಾರಾಟಗಾರ Ashcarter ಎಂಬೊಬ್ಬರ ಸ್ನೇಹಿತನಾದ. ಅವ್ರಿಂದ ಪಾಠ ಹೇಳಿಸಿಕೊಂಡು, ಅಲ್ಲಿಂದಲೇ ಒಂದಷ್ಟು ಸಾಮಾಗ್ರಿಗಳನ್ನು, ಅಲ್ಲೇ ಕೆಲಸ ಮಾಡುವ ಅಮ್ಮನ ತಮ್ಮ ಅನಿಲ್ ಡಿಸೋಜ ಪೆರ್ನಾಲ್ ಅವರಿಗೆ ತಿಳಿಸಿ, ತರಿಸಿಕೊಂಡು ಡ್ರೋನ್ ತಯಾರಿಸಿದ. ಅದು ಹಾರಿಯೇ ಬಿಡ್ತು. ಅಲ್ಲಿಂದ ಗ್ಲೆನ್ ಕನಸು ಗರಿಗೆದರಿತು. ಫೋಟೋ, ವೀಡಿಯೋ, ಡೆಲಿವರಿ, ಕೃಷಿ ಚಟುವಟಿಕೆಗಳಿಗೆ ಡ್ರೋನ್ ಬಳಸುವುದರ ಜೊತೆಗೆ ಡ್ರೋನ್ ರೇಸಿಂಗು ಅನ್ನೋದೊಂದು ಉಂಟು ಎಂದು ಕಂಡುಕೊಂಡ. ಮಣಿಪಾಲದಲ್ಲಿ ನಡೆದೊಂದು ರೇಸಿನಲ್ಲಿ ಭಾಗವಹಿಸಿದ. ಸಾಮಾನ್ಯ ಡ್ರೋನುಗಳು ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಚಲಿಸಿದರೆ ರೇಸಿಂಗ್ ಡ್ರೋನುಗಳ ವೇಗ ಗಂಟೆಗೆ 180 ರಿಂದ 220 ಕಿ.ಮೀ ಓಡುವುದನ್ನು ಗಮನಿಸಿದ. ಅಂತಹ ಡ್ರೋನುಗಳನ್ನೂ ತಯಾರಿಸಲು ಗ್ಲೆನ್ ಮುಂದಾದ. ಯಶಸ್ವಿಯಾದ. (https://youtu.be/4lHSuCcKbcA). ಕಳೆದ ಒಂದೂವರೆ ವರ್ಷದಲ್ಲಿ ಈ ಹುಡುಗ ಒಟ್ಟು 22 ಡ್ರೋನ್ ನಿರ್ಮಾಣ ಮಾಡಿದ್ದಾನೆ. ಸಹಜ ಕುತೂಹಲದಿಂದ ಆರಂಭಗೊಂಡು, ಹವ್ಯಾಸವಾಗಿ ಇದೀಗ ಸಣ್ಣ ಪ್ರಮಾಣದ ಉದ್ಯಮವನ್ನೂ ಕೇವಲ 18ರ ವಯಸ್ಸಿನ ಗ್ಲೆನ್ ಮಾಡುತ್ತಿದ್ದಾನೆ. "ಆರಂಭದಲ್ಲಿ ಹೊರಗಿನಿಂದ ಖರೀದಿಸುವ ಒಂದು ಡ್ರೋನಿನ ಬೆಲೆ ಕನಿಷ್ಟ ಒಂದೂವರೆ ಲಕ್ಷದ ಮೇಲಿತ್ತು. ಅದೇ, ಉಪಕರಣಗಳನ್ನು ಖರೀದಿಸಿ ತಯಾರಿಸಿದಾಗ ಕೇವಲ ₹32,000ವಷ್ಟೇ ತಗುಲಿತು. ನಿರ್ಮಾಣದ ಜೊತೆಗೆ ರಿಪೇರಿಯನ್ನೂ ಕಲಿತೆ. ಊರ ಛಾಯಾಗ್ರಾಹಾಕರುಗಳಿಗೆ, ಮುಂಬೈಯ ಕೆಲವು ಸಿನಿಮಾ ಮಂದಿಗೆ ನನ್ನ ವಿಷಯ ಗೊತ್ತಾಗಿ ಬೇಡಿಕೆ ಬರಲು ಶುರುವಾದವು" ಎನ್ನುತ್ತಾನೆ ಗ್ಲೆನ್. ಮೊನ್ನೆಯಷ್ಟೇ ದ್ವಿತೀಯ ಪಿ.ಯು.ಸಿ ಫಲಿತಾಂಶ ಬಂದಿದೆ. 72.5% ಅಂಕ ಗಳಿಸಿದ್ದಾನೆ. ಮಣಿಪಾಲದಲ್ಲಿ ಏರೋನಾಟಿಕ್ಸ್ ಇಂಜಿನಿಯರಿಂಗ್ ಕಲಿಯುವ ಆಸೆ ಹೊತ್ತಿದ್ದಾನೆ. ಜೊತೆ ಜೊತೆಗೇ ಡ್ರೋನಿನ ವ್ಯವಹಾರ. ವೀಡಿಯೋ, ರೇಸಿಂಗ್ ಡ್ರೋನುಗಳ ಜೊತೆಗೆ ವಸ್ತುಗಳ ಸಾಗಾಟ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಕಸ್ಟಮೈಸ್ಡ್ ಡ್ರೋನ್ ಗಳನ್ನೂ ಗ್ಲೆನ್ ತಯಾರಿಸಿ ಕೊಡುತ್ತಾನೆ. "ನಾನು ಹೊಸತೇನನ್ನೂ ಸಂಶೋಧನೆ ಮಾಡಿಲ್ಲ. ಇರುವ ತಂತ್ರಜ್ಞಾನಗಳನ್ನು ಬಳಸಿ, ಕುತೂಹಲದಿಂದ ಕಲಿತು ಮಾಡುತ್ತಿದ್ದೇನೆ. ಮುಂದೆ ಹೊಸತುಗಳನ್ನು ಸಂಶೋಧಿಸುವ ಪ್ರಯತ್ನ ಮಾಡ್ತೇನೆ" ಎನ್ನುತ್ತಾನೆ ಹುಡುಗ. ಡ್ರೋನ್ ಹಾರಾಟದಲ್ಲಿನ ಕಾರ್ಯಕ್ಷಮತೆ ಕಂಡು ಹಲವು ಅವಕಾಶಗಳು ಈ ಹುಡುಗನನ್ನು ಅರಸಿಬಂದಿವೆ. ಅದರಲ್ಲಿ ಪ್ರಮುಖವಾದದ್ದು Army Yachting Node & Yachting Association of India ಮುಂಬೈಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ Sail India ಸ್ಪರ್ಧೆ. ಅದರ ಡ್ರೋನ್ ಚಿತ್ರೀಕರಣಕ್ಕೆ ಕರೆದದ್ದು ಉಡುಪಿಯ ಈ ಹುಡುಗ ಗ್ಲೆನ್ ನನ್ನು. (https://youtu.be/do-cs7ftMfY). ಸಣ್ಣಪ್ರಾಯದಲ್ಲೇ ಸಾಧನೆ, ಸಂಪಾದನೆ ಮಾಡುತ್ತಿರುವ ಮಗನ ಬಗ್ಗೆ ತಾಯಿ ಗ್ಲ್ಯಾಡಿಸ್ ರೆಬೆಲ್ಲೋಗೆ ಬಹಳ ಹೆಮ್ಮೆ ಇದೆ. ಮಗನ ಮುಂದೆ ಯಾವತ್ತೂ ಹೇಳಿಕೊಳ್ಳುವುದಿಲ್ಲ. ಯಾವಾಗ ನೋಡಿದರೂ ಡ್ರೋನಿನ ಕನವರಿಕೆಯಲ್ಲೇ ಇರುವ ಗ್ಲೆನ್ ಓದು, ಮುಂದಿನ ಗುರಿಯ ಬಗ್ಗೆ ಚಿಂತೆ ಅವರಿಗೆ. ಆದರೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಸುಲಭದಲ್ಲಿ ಮಾಡಲಾಗದ ಕೆಲಸವನ್ನು ಹೈಸ್ಕೂಲು, ಪಿಯುಸಿಯಲ್ಲೇ ಮಾಡಿ ತೋರಿಸಿದ ಗ್ಲೆನ್ ಭವಿಷ್ಯ ಖಂಡಿತವಾಗಿಯೂ ಉಜ್ವಲವಾಗಲಿದೆ. ಸರಕಾರ, ಸಂಸ್ಥೆ, ಮಾಧ್ಯಮಗಳು ಇಂತಹ ಸಹಜ ಕುತೂಹಲಿ, ಸತ್ಯ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಈಗ ಮೊಬೈಲ್ ಇಲ್ಲದ ಮನೆಯೇ ಇಲ್ಲ ಅನ್ನುವಂತೆ ಮುಂದೆ ಡ್ರೋನ್ ಬಳಸದ ಕ್ಷೇತ್ರವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಅದರ ಉಪಯೋಗಗಳಿವೆ. ಅವುಗಳನ್ನು ಗ್ಲೆನ್ ನಂತಹ ಹುಡುಗರನ್ನು ಬಳಸಿ ಪ್ರಯೋಗ, ಸಂಶೋಧನೆ, ಪ್ರಚಾರ ಮಾಡಿಸಬಹುದು. ಸ್ವಾವಲಂಬಿ, ನವ ಭಾರತ ನಿರ್ಮಾಣ ಮಾಡಬಹುದು. (ಡ್ರೋನ್ ಪ್ರತಾಪನ ಪ್ರಕರಣಗಳ ಹಿನ್ನೆಲೆಯಲ್ಲಿ ಡ್ರೋನುಗಳ ಕುರಿತು ಹೆಚ್ಚು ತಿಳಿದುಕೊಳ್ಳೋಣವೆಂದು ಉಡುಪಿಯ ಪ್ರಸಿದ್ಧ ಛಾಯಾಗ್ರಾಹಕ Focus Raghu ಮೂಡುಬೆಳ್ಳೆಯ ಗ್ಲೆನ್ ಮನೆಗೆ ನನ್ನನ್ನು ಕರೆದೊಯ್ದಿದ್ದರು. ಇಷ್ಟು ಸಣ್ಣ ವಯಸ್ಸಿನಲ್ಲೇ ಡ್ರೋನ್ ಕುರಿತ ಜ್ಞಾನ, ಆಸಕ್ತಿ, ಜೊತೆಗೆ ಉದ್ಯಮ ಕಂಡು ಸ್ಪೂರ್ತಿಯಾಗಿ ಬರೆದ ಲೇಖನವಿದು). Manjunath Kamath

ಸಾದು ಪಾಣಾರ ನೆರವಿಗೆ ಬಂದ ತುಳುನಾಡ ದೈವಾರಾಧಕರ ಸಹಕಾರಿ ಒಕ್ಕೂಟ

Thumbnail
Posted On: 16 Jul 2020, 12:17 PM

ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಸಾದು ಪಾಣಾರ ಇವರಿಗೆ ಧನಸಹಾಯ ವಿತರಣೆ. ಗಾಳಿ-ಮಳೆಗೆ ಮನೆಯ ಅಂಚು ಹಾಗೂ ಸಿಮೆಂಟಿನ ತಗಡು ಶೀಟ್ ಹಾರಿಹೋಗಿದ್ದು . ಮನೆಗೆ ಸಂಪೂರ್ಣವಾಗಿ ಹಾನಿಯಾಗಿದೆ ... ಇವರ ಸಮಸ್ಯೆಯನ್ನು ಮನಗೊಂಡು. ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಇವರ ವತಿಯಿಂದ ಸಾಧು ಪಾನಾರ್ ಮಂಚಿ ಇವರಿಗೆ ಧನಸಹಾಯ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರಾಘವ ಸೇರಿಗಾರ್, ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ, ಕೋಶಧಿಕಾರಿ ಶ್ರೀಧರ್ ಪೂಜಾರಿ ಬೈಕಾಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

ದೈವ ಚಾಕಿರಿಯವರಿಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ - ವಿನೋದ್ ಶೆಟ್ಟಿ

Thumbnail
Posted On: 14 Jul 2020, 09:05 PM

ಕರಾವಳಿಯಲ್ಲಿ ಪ್ರಪಂಚದ ಎಲ್ಲೆಡೆ ವ್ಯಾಪಿಸಿರುವ ಮಹಾ ಕೋರನದಿಂದ ಹೊಟ್ಟೆಪಾಡಿಗೆ ಪೆಟ್ಟು ಬಿದ್ದ ದೈವ ಚಾಕ್ರಿ ವರ್ಗದವರಿಗೆ. ದೈವ ಚಾಕ್ರಿ ಪಂಗಡದವರಿಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಜಿಲ್ಲಾಧಿಕಾರಿ ಅವರಿಂದ ಯಾವುದೇ ಮನವಿಗೆ ಸ್ಪಂದನೆ ಇಲ್ಲ ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಮಂತ್ರಿಗಳಿಂದ ಯಾವುದೇ ಸ್ಪಂದನೆ ಹಾಗೂ ಸಹಕಾರ ಇಲ್ಲ. ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಧರ್ಮ ಅದರ್ಮ ಮಾರ್ಗದಲ್ಲಿ ನಡೆಯುತ್ತಿರುವಾಗ ಧರ್ಮರಕ್ಷಣೆಗೆ ಬೇಕಾಗಿ ಮಿಗಿ ಲೋಕದಲ್ಲಿ ಈಶ್ವರ ದೇವರ ಅನುಗ್ರಹದಲ್ಲಿ ಅನ್ಯಾಯವನ್ನು ನಿರ್ಮೂಲನೆ ಮಾಡಲು ಧರ್ಮರಕ್ಷಣೆಗೆ ಬೇಕಾಗಿ ಸಾವಿರಾರು ದೈವ-ದೇವರು ನೆಲೆಯಾದ ಪುಣ್ಯಭೂಮಿ ನಮ್ಮ ತುಳುವ ನಾಡು. ಜನವರಿಯಿಂದ ಮೇ ತಿಂಗಳ ಕೊನೆಯ ತನಕ ದೈವಾರಾಧನೆ ಕ್ಷೇತ್ರದಲ್ಲಿ ಊರಿನ ಪ್ರಮುಖ ದೇವಸ್ಥಾನ ದೈವಸ್ಥಾನಗಳಲ್ಲಿ ಗರಡಿಗಳಲ್ಲಿ ಹಾಗೂ ಊರಿನ ಮನೆತನದಲ್ಲಿ ದೈವಗಳಿಗೆ ಹರಕೆ ವಾರ್ಷಿಕ ನೇಮೋತ್ಸವ, ತಂಬಿಲ ಸೇವೆ, ಮಾರಿಪೂಜೆ, ದರ್ಶನ ಸೇವೆ, ಹಾಗೂ ಇತರ ಹಲವಾರು ಸೇವೆಗಳು ನಡೆಯುವ ಸಂದರ್ಭ, ಈ ವರ್ಷ ವಿಶ್ವದೆಲ್ಲೆಡೆ ಹಬ್ಬಿರುವ ಕೋರನ ಎಂಬ ರೋಗದಿಂದ ಸರ್ಕಾರದ ಆದೇಶ ಮೇರೆಗೆ ಎಲ್ಲಾ ಸೇವೆಗಳು ಸ್ಥಗಿತಗೊಂಡಿದೆ.. ಇದರಿಂದ ದೈವ ಚಾಕ್ರಿ ವರ್ಗದವರು ತಮ್ಮ ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಿದ್ದಾರೆ ದೈವ ಆರಾಧನೆ ಕ್ಷೇತ್ರ ಅವರ ಮೂಲ ಕುಲ ಕಸುಬಾಗಿರುತ್ತದೆ. ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಸುಮಾರು 30 ಸಾವಿರ ಮಂದಿ ದೈವ ಚಾಕ್ರಿ ವರ್ಗದವರು ಇದ್ದಾರೆ. ಈ ಕ್ಷೇತ್ರದಲ್ಲಿ ಸುಮಾರು 20ಕ್ಕೂ ಹೆಚ್ಚು ಪಂಗಡಗಳಿವೆ. ಎರಡು ತಿಂಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿಗಳಿಗೆ, ಉಸ್ತುವಾರಿ ಸಚಿವರಿಗೆ, ಹಾಗೂ ಮಾನ್ಯ ಸಂಸದರಿಗೆ ಅವರು ಸಿಗದ ಕಾರಣ ಅವರ ಕಚೇರಿಯ ಸಹಾಯಕರಿಗೆ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಿರುತ್ತೇವೇ. ಆದರೆ ನಮ್ಮ ಸಮಸ್ಯೆಗೆ ಯಾವುದೇ ಪ್ರತಿಕ್ರಿಯೆ ಹಾಗೂ ಸ್ಪಂದನೆ ಸಿಕ್ಕಿರುವುದಿಲ್ಲ. ನಂತರ ತುಳುನಾಡ್ ದೈವರಾಧಕರ ಸಹಕಾರಿ ಒಕ್ಕೂಟದ ಸುಮಾರು 120 ಮಂದಿ ಸದಸ್ಯರು ಒಟ್ಟಾಗಿ ನಮಗೆ ಸಿಗಬೇಕಾದ ಪರಿಹಾರ ಹಾಗೂ ತಕ್ಕಮಟ್ಟಿಗೆ 150 ಜನರ ಒಳಗೆ ದೈವಸ್ಥಾನಗಳ ನಡೆಯುವ ನೇಮೋತ್ಸವ, ಮಾರಿಪೂಜೆ ದರ್ಶನ, ಸೇವೆಗಳಿಗೆ ಅನುಮತಿ ನೀಡಬೇಕಾಗಿ ಮನವಿ ಅಲ್ಲಿ ಕೇಳಿರುತ್ತೇವೆ. ಅನುಮತಿ ಕೊಟ್ಟರೆ ತಕ್ಕಮಟ್ಟಿಗೆ ದೈವ ಚಾಕ್ರಿ ವರ್ಗದವರು ಅದರಲ್ಲಿ ಬರುವ ಸಂಭಾವನೆಯಿಂದ ಜೀವನ ನಡೆಸಬಹುದು ಎಂಬ ಚಿಂತನೆಯಿಂದ ನಾವು ಮಾನ್ಯ ಜಿಲ್ಲಾಧಿಕಾರಿ ಹಾಗೂ ಉಡುಪಿ ಶಾಸಕರಿಗೆ ನಮ್ಮ ಒಕ್ಕೂಟದ ಪರವಾಗಿ ಮನವಿ ಕೊಟ್ಟಿರುತ್ತೇವೆ. ಸುಮಾರು 25 ದಿನದಿಂದ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಆಗಲಿ ರಾಜಕಾರಣಿಗಳಿಂದ ಇದರ ಬಗ್ಗೆ ಭರವಸೆ ಬಂದಿರುವುದಿಲ್ಲ. ಮುಂದಿನ ದಿನಗಳಲ್ಲಿ ದಯಮಾಡಿ ನಮ್ಮ ಸಮಸ್ಯೆಗೆ ಸ್ಪಂದಿಸಬೇಕಾಗಿ. ತುಳುನಾಡಿನ ಸಮಸ್ತ ದೈವ ಚಾಕ್ರಿ ವರ್ಗದವರು ತುಳುನಾಡು ದೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲಾ ಹಾಗೂ ಎಲ್ಲಾ ಘಟಕದ ಪರವಾಗಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ವಿನೋದ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ

ಉಡುಪಿ ಜಿಲ್ಲಾ ರಂಗಮಂಟಪದ ಮೈದಾನ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ

Thumbnail
Posted On: 14 Jul 2020, 07:45 AM

ಉಡುಪಿ ಬೀಡಿನಗುಡ್ಡೆ ಜಿಲ್ಲಾ ರಂಗ ಮಂದಿರ ರ ಆವರಣ ಗೋಡೆ ಕುಸಿದು 3 ತಿಂಗಳಾದರೂ ಇನ್ನೂ ದುರಸ್ತಿಯಾಗದ ಕಾರಣ ರಂಗಮಂದಿರ ಆವರಣದಲ್ಲಿ ಕುಡುಕರು, ಅಲೆಮಾರಿಗಳು ತನ್ನ ಆಶ್ರಯತಾಣವಾಗಿ ಮಾಡಿರುತ್ತಾರೆ.ಮೈದಾನದಲ್ಲಿ ಅಲ್ಲಲ್ಲಿ ಬಿದ್ದಿರುವ ಮಧ್ಯದ ಬಾಟಲಿಗಳು ಇದನ್ನು ಪುಷ್ಠಿಕರೀಸಿವೆ. ರಂಗ ಮಂದಿರದ ಎದುರಿನ ಅವರಣ ಗೋಡೆ ಅಲ್ಲದೆ ರಂಗ ಮಂಟಪದ ಎಡ ಭಾಗದ ಅವರಣ ಗೋಡೆ ಸಂಪೂಣ೯ ಕುಸಿದಿದೆ. ಇದರಿಂದ ಕುಡುಕರಿಗೆ ಒಳಗೆ ತೆರಳಲು ಸುಲಭ ಸಾಧ್ಯವಾಗಿದೆ.ರಂಗ ಮಂಟಪದಲ್ಲಿರುವ ಕೊಠಡಿಯ ಎದುರು ನೈಮ೯ಲ್ಯ ದೂರದ ಮಾತಾಗಿದೆ. ಸಕಾ೯ರ ಲಕ್ಷಾಂತರ ರೂಪಾಯಿ ವ್ಯಯಿಸಿ ನಿಮಾ೯ಣಗೊಂಡ ಈ ಜಿಲ್ಲಾ ಮೈದಾನ ರಂಗ ಮಂಟಪದಲ್ಲಿ ಸಕಾ೯ರ ದ ಅಧಿಕೃತ ಕಾಯ೯ಕ್ರಮಗಳು ಹಾಗೂ ಸಾವ೯ಜನಿಕ ಸಭೆ ಸಮಾರಂಭ ನಡೆಯುತ್ತಿದ್ದವು.ಇದೀಗ ಕರೋನಾ ಹಾವಳಿಯಿಂದ ಯಾವುದೇ ಕಾಯ೯ಕ್ರಮ ನಡೆಯದೇ 4 - 5 ತಿಂಗಳುಗಳು ಕಳೆದಿವೆ. ಈ ಆವರಣಗೋಡೆ ಮರು ನಿಮಾ೯ಣ ಮಾಡಬೇಕು ಅದೇ ರೀತಿ ಇದರ ನಿವ೯ಹಣೆಯನ್ನು ಸರಿಯಾಗಿ ನಿವ೯ಹಿಸಲು ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದು ನಾಗರೀಕರ ಪರವಾಗಿ ವಿನಂತಿ. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ

ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟದಿಂದ ಬೆಳಪು ರಾಜು ಪೂಜಾರಿಗೆ ನೆರವು

Thumbnail
Posted On: 13 Jul 2020, 10:49 PM

ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ ಕಾಪು ಪಡುಬಿದ್ರಿ ಘಟಕದ ವತಿಯಿಂದ.. ರಾಜು ಪೂಜಾರಿ ಅವರನ್ನು ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಧನಸಹಾಯದೊಂದಿಗೆ ಶಾಲು, ಹಣ್ಣು , ಹಂಪಲು ಕೊಟ್ಟು ಗೌರವಿಸಲಾಯಿತು. ರಾಜು ಪೂಜಾರಿಯವರು ಬೆಳಪು ಗ್ರಾಮದ ದಿವಂಗತ ಚಂದು ಪೂಜಾರಿ ಮತ್ತು ಅಕ್ಕು ಪೂಜಾರ್ತಿ ದಂಪತಿಯ ಪುತ್ರ, ರಾಜು ಪೂಜಾರಿ ಯವರು ಸಾಂಪ್ರದಾಯಿಕ ಶಿಕ್ಷಣ ಪಡೆಯದಿದ್ದರೂ 25 ವರ್ಷ ಮುಂಬೈಯಲ್ಲಿ ದುಡಿದು ಆ ಬಳಿಕ ದೈವದ ಆಕರ್ಷಣೆಗೆ ಒಳಗಾಗಿ ಊರಲ್ಲಿ ನೆಲೆನಿಂತರು. ಬೆಳಪು ಜಾರಂದಾಯ ದೈವಸ್ಥಾನದಲ್ಲಿ ದೈವದ ಅನುಗ್ರಹ ಎಣ್ಣೆ ಪಡೆದು ದೈವಾರಾಧನೆ ಕ್ಷೇತ್ರದಲ್ಲಿ ಸುಮಾರು 40 ವರ್ಷಕ್ಕಿಂತಲೂ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಜಾರಂದಾಯ ಬಂಟ ಪಾತ್ರಿಯಾಗಿ ಎಣ್ಣೆ ಪಡೆದು ಉಡುಪಿ ಜಿಲ್ಲೆಯ ಹತ್ತು ಹಲವಾರು ಪ್ರಸಿದ್ಧ ಕ್ಷೇತ್ರ, ದೈವಸ್ಥಾನಗಳಲ್ಲಿ ಬಂಟ ಪಾತ್ರಿಯಾಗಿ ದರ್ಶನ ಸೇವೆಯನ್ನು ನೀಡಿದ್ದಾರೆ ಐದು ವರ್ಷಗಳ ಹಿಂದೆ ದೈವಾರಾಧನೆ ಕ್ಷೇತ್ರದಲ್ಲಿ ನಿವೃತ್ತಿ ಹೊಂದಿದ್ದಾರೆ. ಇದೀಗ 90ರ ಇಳಿವಯಸ್ಸಿನಲ್ಲಿ ಪತ್ನಿ ಗಿರಿಜಾ ಪೂಜಾರ್ತಿ ಮಕ್ಕಳಾದ ವೆಂಕಟೇಶ್ ಚಂದ್ರಾವತಿ ಗಂಗಾಧರ ರಮೇಶ್ ಬಾಲಕೃಷ್ಣ ಅವರೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.. ಕೋರೋನ ಎಂಬ ಮಹಾರೋಗದ ತುರ್ತು ಸಂದರ್ಭದಲ್ಲಿ ಯಾವುದೇ ಸರ್ಕಾರವು ದೈವ ಚಾಕ್ರಿ ವರ್ಗದವರಿಗೆ ಸಹಾಯಧನ ಇತರ ಯಾವುದೇ ಯೋಜನೆಗಳು ನೆರವಿಗೆ ಬಂದಿರುವುದಿಲ್ಲ ಈ ತುರ್ತು ಸಂದರ್ಭದಲ್ಲಿ ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ ಹಾಗೂ ಕಾಪು ಪಡುಬಿದ್ರಿ ಘಟಕದ ಸದಸ್ಯರ ಧನಸಹಾಯ, ನೆರವಿನೊಂದಿಗೆ ಗೌರವಿಸಲಾಯಿತು ರಾಜು ಪೂಜಾರಿಯವರಿಗೆ ತುಳು ನಾಡಿನ ಸಮಸ್ತ ದೈವ-ದೇವರು ಅವರಿಗೆ ಆರೋಗ್ಯ ಆಯುಷ್ಯ ಭಾಗ್ಯ ಕೊಟ್ಟು ಕರುಣಿಸಲಿ ಎಂದು ಸರ್ವ ಸದಸ್ಯರು ಪ್ರಾರ್ಥಿಸುತ್ತೇವೆ.. ಈ ಒಂದು ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಘವ ಸೇರಿಗಾರ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಹಾಗೂ ಕಾಪು ಪಡುಬಿದ್ರಿ ಘಟಕದ ಅಧ್ಯಕ್ಷರಾದ ಯಶೋಧರ್ ಶೆಟ್ಟಿ ಉಪಾಧ್ಯಕ್ಷರಾದ ಮಾಧವ ಪಂಬದ ಹಾಗೂ ಸತೀಶ್ ಪೂಜಾರಿ ಶಮ್ಮಿ ಕಪೂರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಪೂಜಾರಿ ಕಟಪಾಡಿ ಗೌರವಾಧ್ಯಕ್ಷರಾದ ಸುಧಾಕರ್ ಆಚಾರ್ಯ ಹಾಗೂ ಸರ್ವ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು. ವರದಿ : ವಿನೋದ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ