Updated News From Kaup

ಬಂಡ್ರ್ಯಾಕರ್ ಕೊರಗಜ್ಜನಿಗೆ ಸರಳ ರೀತಿಯಲ್ಲಿ ಪೂಜಾ ವಿಧಿ ವಿಧಾನ ನೆರೆವೇರಿಸಲಾಯಿತು

Thumbnail
Posted On: 03 May 2020, 08:27 PM

ಕಾಪು ತಾಲೂಕಿನ ಕಲ್ಲುಗುಡ್ಡೆ ಬಂಡ್ರ್ಯಾಕರ್ ಕೊರಗಜ್ಜ ಕ್ಷೇತ್ರದಲ್ಲಿ ವರ್ಷಾಂಪ್ರತಿ ನಡೆಯುವ ನೇಮೋತ್ಸವ ಕೊರೊನ ನಿಮಿತ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ಸರಕಾರದ ಆಜ್ಞೆಯನ್ನು ಪಾಲಿಸುವ ಸಲುವಾಗಿ ಶಾಸ್ತ್ರೋಕ್ತವಾಗಿ ಸರಳ ರೀತಿಯಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು

ಕುರ್ಕಾಲು ರಕ್ತ ದಾನ ಶಿಬಿರ ಯಶಸ್ವಿ ಕಾರ್ಯಕ್ರಮ

Thumbnail
Posted On: 03 May 2020, 08:01 PM

ಕೊರೊನ ಪರಿಣಾಮದಿಂದ ಬ್ಲಡ್ ಬ್ಯಾಂಕ್ನಲ್ಲಿ ರಕ್ತದ ಕೊರತೆ ಇದ್ದದ್ದರಿಂದ ಕುರ್ಕಾಲು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಇಂದು ಬೆಳಿಗ್ಗೆ ಒಂಬತ್ತರಿಂದ ಮದ್ಯಾಹ್ನ ಒಂದರವರೆಗೆ ಕುರ್ಕಾಲು ಯುವಕ ಮಂಡಲ ಮತ್ತು ಲಯನ್ಸ್ ಕ್ಲಬ್ ಸುಭಾಸ್ನಗರ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ರಕ್ತ ದಾನ ಶಿಬಿರವನ್ನು ಆಯೋಜಿಸಲಾಯಿತು, ಈ ಶಿಬಿರದಲ್ಲಿ ನಿರೀಕ್ಷೆಗೂ ಮಿಕ್ಕಿ 130 ಜನರು ರಕ್ತದಾನ ಮಾಡಿದ್ದು ಈ ಸಂದರ್ಭದಲ್ಲಿ ಗೀತಾಂಜಲಿ ಸುವರ್ಣ ಕಟಪಾಡಿ , ದೇವುಪುತ್ರ ಕೋಟ್ಯಾನ್, ವಿಶಾಖ್ ಜಿ ಶೆಟ್ಟಿ, ದಿನಕರ ಶೆಟ್ಟಿ, ಡಿ ಆರ್ ಕೋಟ್ಯಾನ್, ಪ್ರವೀಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು..

15 ದಿನಗಳ ನಂತರ ಮತ್ತೇ ರಿಕ್ಷಾ ಚಾಲಕರಿಗೆ ನೆರವು ನೀಡಿದ ದಾನಿ

Thumbnail
Posted On: 01 May 2020, 06:18 PM

ಮಡುಂಬು ವಿದ್ವಾನ್ ಕೆ.ಪಿ.ಶ್ರೀನಿವಾಸ್ ತಂತ್ರಿಗಳು ಕೊರೊನ ಲಾಕ್ಡೌನ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾಪು, ಉದ್ಯಾವರ, ಶಂಕರಪುರ, ಇನ್ನಂಜೆ ಸೇರಿದಂತೆ ಇನ್ನು ಅನೇಕ ಕಡೆಗಳಲ್ಲಿ ಇರುವ ರಿಕ್ಷಾ ಚಾಲಕರನ್ನು ಗುರುತಿಸಿ. 160 ರಿಕ್ಷಾ ಚಾಲಕರ ಕುಟುಂಬಗಳಿಗೆ 15 ದಿನಕ್ಕೆ ಬೇಕಾಗುವಷ್ಟು ದಿನಬಳಕೆಯ ಸಾಮಗ್ರಿಗಳನ್ನು ಏಪ್ರಿಲ್ 16ರಂದು ನೀಡಿದ್ದರು. ಇದೀಗ ರಿಕ್ಷಾ ಚಾಲಕರಿಗೆ ನೀಡಿದ್ದ ಸಾಮಗ್ರಿಗಳು ಸಂಪೂರ್ಣವಾಗಿ ಖಾಲಿಯಾಗಿದ್ದು ಇದನ್ನರಿತ ಶ್ರೀನಿವಾಸ್ ತಂತ್ರಿಗಳು ಮತ್ತೇ ಸಾಮಗ್ರಿಗಳನ್ನು ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಈ ಹಿಂದೆ ನೀಡಿದವರಿಗೆ ಮತ್ತೇ ಅಕ್ಕಿ, ಮಟ್ಟು ಗುಳ್ಳ, ಸೌತೆಕಾಯಿ ಹಾಗೂ ಇನ್ನಿತರ ದಿನ ಬಳಕೆಯ ಸಾಮಗ್ರಿಗಳಿರುವ ಕಿಟ್ ತಯಾರಿಸಿ ಒಟ್ಟು 200 ರಿಕ್ಷಾ ಚಾಲಕರ ಕುಟುಂಬಕ್ಕೆ ಹಂಚಿದ್ದಾರೆ . ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಮಡುಂಬು, ಉಮೇಶ್ ಅಂಚನ್ ಮಡುಂಬು, ಸುಬ್ರಹ್ಮಣ್ಯ ಭಟ್, ಶ್ರೇಯಸ್ ಭಟ್ ಹಾಗೂ ಯುವಸೇನೆ ಮಡುಂಬು ಇದರ ಸದಸ್ಯರು ಉಪಸ್ಥಿತರಿದ್ದರು..

ಇನ್ನಂಜೆ ಹಾಲು ಉತ್ಪಾದಕರ ಸಂಘದ ಹೈನುಗಾರ ಸದಸ್ಯರಿಗೆ ಕಿಟ್ ವಿತರಣೆ

Thumbnail
Posted On: 30 Apr 2020, 09:11 PM

ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಂಘದ ಎಲ್ಲಾ ಹೈನುಗಾರ ಸದಸ್ಯರಿಗೆ ಹಾಗು ಸಿಬ್ಬಂದಿ ವರ್ಗದವರಿಗೆ ತಲಾ 500 ರೂಪಾಯಿಯ ಆಹಾರ ಸಾಮಗ್ರಿಗಳ 240 ಕಿಟ್ಟುಗಳನ್ನು ತಾರೀಖು 30-4-2020ರಂದು ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕೆ ಶೆಟ್ಟಿ, ಹಾಗು ಉಪಾಧ್ಯಕ್ಷರಾದ ಮಹೇಶ್ ಸುವರ್ಣ, ನಿರ್ದೇಶಕರಾದ ರಾಘವೇಂದ್ರ ಉಪಾದ್ಯಾಯ, ರಾಮ ಶೆಟ್ಟಿ ಮಡುಂಬು, ಶಿವರಾಮ ಶೆಟ್ಟಿ, ಉದಯ ಮೂಲ್ಯ, ಉಮೇಶ್ ಆಚಾರ್ಯ, ನಾಗರಾಜ್ ಮುಚಂತಾಯ, ಜಯ ಪೂಜಾರಿ, ಶ್ರೀಮತಿ ಸುಮತಿ ಅಂಚನ್, ಶ್ರೀಮತಿ ಬೇಬಿ, ಪದ್ಮ ಮುಖಾರಿ ಯವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು. ಸಂಘದ ಕಾರ್ಯನಿರ್ವಾಹಣಾದಿಕಾರಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ ಧನ್ಯವಾದ ನೀಡಿದರು.

ಕಾಪು : ಆಸುಪಾಸಿನ ಕಟ್ಟಡಗಳಿಗೆ ಹಾನಿಯಾದರೆ ಸ್ಥಳೀಯಾಡಳಿತವೇ ನೇರ ಹೊಣೆ

Thumbnail
Posted On: 30 Apr 2020, 02:56 PM

ಕಾಪು ತಾಲೂಕಿನ ಉಳಿಯಾರಗೋಳಿ ಗ್ರಾಮದಲ್ಲಿ ಪ್ರಸಾದ್ ಕಾಮತ್ ಎಂಬುವವರು ಸ್ವಂತ ಜಮೀನಿನಲ್ಲಿ ಸಣ್ಣದೊಂದು ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಮಾರ್ಚ್ 12 ರಂದು ಶಿಲಾನ್ಯಾಸ ಮಾಡಿದ್ದು. ಮಳೆಗಾಲ ಆರಂಭವಾಗುವ ಮೊದಲೇ ತಳ ಅಂತಸ್ತಿನ ಕಾಮಗಾರಿ ಮುಗಿಯಬೇಕೆಂಬ ತುರಾತುರಿಯಲ್ಲಿ 10 ಅಡಿ ಆಳಕ್ಕೆ ಗುಂಡಿ ತೋಡಿ ಇನ್ನೇನು ತಳಪಾಯ ಹಾಕಬೇಕು ಅನ್ನುವಷ್ಟರಲ್ಲಿ ಕೊರೊನ ಮಹಾಮಾರಿಯ ಆಗಮನದಿಂದ ಲಾಕ್ಡೌನ್ ಘೋಷಣೆಯಾಗಿ ಕಾಮಗಾರಿ ನಿಲ್ಲಿಸಬೇಕಾಯಿತು. ಕಾಮಗಾರಿ ಸ್ಥಗಿತಗೊಂಡಿರುವ ಜಮೀನಿನ ಮಣ್ಣು ಕೆಂಪು ಮಣ್ಣಾಗಿದ್ದು ಇದನ್ನು ಹೂ ಮಣ್ಣು ಎಂದು ಕರೆಯುತ್ತಾರೆ. ಒಂದು ವೇಳೆ ಮಳೆ ಬಂದರೆ ಈ ಮಣ್ಣು ಜಾರಿ ಅಕ್ಕ ಪಕ್ಕದ ಕಟ್ಟಡಗಳಿಗೆ ಬಹಳ ಹಾನಿಯಾಗುವ ಸಂಭವವಿದ್ದು. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಆಡಳಿತವನ್ನು ಸಂಪರ್ಕಿಸಿದಾಗ ಸರಕಾರದ ಆದೇಶದಂತೆ ಯಾವುದೇ ರೀತಿಯ ಕಾಮಗಾರಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪ್ರಸಾದ್ ಕಾಮತ್ ಅವರು ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯವರು ಈ ಮೊದಲೇ ಯಾರು ಯಾವುದೇ ಅನುಮತಿಗಾಗಿ ಅವರ ಕಚೇರಿಯ ಬಳಿ ಬರಬಾರದೆಂದು ಆದೇಶಿಸಿರುವುದರಿಂದ ಅವರನ್ನು ಭೇಟಿಯಾಗಲು ಆಗುತ್ತಿಲ್ಲ. ಕನಿಷ್ಠ ತಡೆಗೋಡೆ ನಿರ್ಮಾಣಕ್ಕೆ ಅನುಮತಿ ಸಿಕ್ಕಿದಲ್ಲಿ ಬಹಳ ಉಪಕರವಾಗುತ್ತಿತ್ತು. ಆದರೇ ನಿನ್ನೆ ದಿನ ಉಡುಪಿ ಆದರ್ಶ ಆಸ್ಪತ್ರೆಗೆ ಸಂಬಂಧಿಕರೋರ್ವರನ್ನು ಕರೆದುಕೊಂಡು ಹೋಗುವಾಗ ಆಸ್ಪತ್ರೆಯ ಮುಂಭಾಗದ ಜಮೀನಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಕಂಡು ಬಂದಿದೆ. ಅದು ಕೂಡಾ ಅಲ್ಲಿ ನಡೆಯುತ್ತಿರುವ ಕಾಮಗಾರಿ ಮೊದಲನೇ ಮಹಡಿಯ ಸೆಂಟ್ರಿಂಗ್ ಕೆಲಸ ಆಗಿದ್ದು ಅಲ್ಲಿ ಯಾವುದೇ ರೀತಿಯ ತುರ್ತಿನ ಅಗತ್ಯವಿಲ್ಲ ಅನ್ಸುತ್ತೆ. ಅದೇ ನನ್ನ ಸೈಟಿನಲ್ಲಿ ಮಳೆ ಬಂದರೆ ಅಕ್ಕ ಪಕ್ಕದ ಕಟ್ಟಡಗಳು ಹಾನಿಯಾಗುವ ಸಂಭವವಿದೆ. ಈ ತಾರತಮ್ಯ ಯಾಕೆ.? ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇದ್ಯಾವ ನ್ಯಾಯ.? ಕನಿಷ್ಠ ಪಕ್ಷ ತಡೆಗೋಡೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರೆ ಬಹಳ ಉಪಕರವಾಗುತ್ತಿತ್ತು. ಒಂದು ವೇಳೆ ಮಳೆ ಬಂದು ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿಯಾದರೆ ಸ್ಥಳೀಯ ಅಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು..

ತುಳುನಾಡ್ದ ಪ್ರತಿಭೆಲು ತಂಡ ಆಯೋಜಿಸಿದ ಹಾಡುಗಾರಿಕೆ ಸ್ಪರ್ಧೆಯ ಫಲಿತಾಂಶ

Thumbnail
Posted On: 30 Apr 2020, 02:17 PM

ಜನಸಾಮಾನ್ಯರ ಬದುಕಿಗೆ ಮಹಾಮಾರಿಯಂತೆ ಕಾಲಿಟ್ಟಿರುವ ಕೊರೋನಾದ ದೆಸೆಯಿಂದ ಎಲ್ಲರೂ ಮನೆಯಲ್ಲಿ ಕುಳಿತು ಬೇಸತ್ತು ಹೋಗಿದ್ದರು. ಇಂತಹ ಸಮಯದಲ್ಲಿ ಕೇವಲ ಮನೋರಂಜನೆ ಒಂದನ್ನೇ ನಿಲುಮೆಯನ್ನಾಗಿಸಿ ತುಳುನಾಡ್ದ ಪ್ರತಿಭೆಲು ಫೇಸ್ಬುಕ್ ಪೇಜ್ ಆಯೋಜಿಸಿದ ಆನ್ಲೈನ್ ಹಾಡುಗಾರಿಕೆಯ ಸ್ಪರ್ಧೆಯಲ್ಲಿ ಹಲವಾರು ಕಲಾವಿದರು ವಯೋಮಿತಿ ಇಲ್ಲದೆ ಭಾಗವಹಿಸಿದ್ದು. ಅತಿ ಹೆಚ್ಚಿನ ಲೈಕ್ಸ್ ಗಳನ್ನು ಪಡೆದ ಮೂರು ಸ್ಪರ್ಧಿಗಳನ್ನು ಸ್ಪರ್ಧೆಯ ವಿಜೇತರು ಎಂಬುದಾಗಿ ಗುರುತಿಸುವುದು ಎಂದು ನಿರ್ಧರಿಸಲಾಗಿತ್ತು. ಆದರೆ ದಿನಗಳು ಉರುಳಿದಂತೆ ಸ್ಪರ್ಧಿಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಕಂಡು ಮೂರು ಉತ್ತಮ ಗಾಯಕರಿಗೂ(ಅತಿ ಹೆಚ್ಚು ಲೈಕ್ಸ್ ಪಡೆದ ಮೂರು ಸ್ಪರ್ಧಿಗಳನ್ನು ಹೊರತುಪಡಿಸಿ) ಮನ್ನಣೆ ನೀಡುವ ಬಗ್ಗೆ ಆಲೋಚಿಸಿ ನಿರ್ಧರಿಸಿದ್ದರು. ಈ ಮೂರು ಉತ್ತಮ ಗಾಯಕರ ತೀರ್ಪು ನೀಡಿದವರು ಚಂದ್ರಶೇಖರ್ ಮಂಗಳೂರು (ಮಂಗಳಾದೇವಿ). ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿ ವಿಜೇತರು. ಗಾಯನ ತರಬೇತಿ ನೀಡುವ ಶಿಕ್ಷಕರು. ಇವರು ಈ ಸ್ಪರ್ಧೆಯ ಫಲಿತಾಂಶವನ್ನು ಗುರುವಾರ ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ತುಳುನಾಡ್ದ ಪ್ರತಿಭೆಲು ಪೇಜ್ ನಲ್ಲಿ ಲೈವ್ ಬರುವ ಮೂಲಕ ತೀರ್ಪು ನೀಡಿದ್ದಾರೆ. ಇದರಲ್ಲಿ ವಯಸ್ಕರ ಹಾಗೂ ಬಾಲ, ಬಾಲೆಯರ ಎರಡು ವರ್ಗ ಎಂಬಂತೆ ಬೇರ್ಪಡಿಸಿದ್ದು. ವಯಸ್ಕರಲ್ಲಿ ಅತೀ ಹೆಚ್ಚು ಲೈಕ್ಸ್ ಪಡೆದ ಮೂರು ಸ್ಪರ್ಧಿಗಳು : 1. ಹೇಮಲತಾ contestant number: 22 2. ಪ್ರಕಾಶ್ ಅಮೀನ್ Contestant number: 19 3. ವಿದ್ಯಾ Contestant number: 04 ಅತೀ ಹೆಚ್ಚಿನ ಲೈಕ್ಸ್ ಪಡೆದಿರುವ ಬಾಲ, ಬಾಲೆ ಗಾಯಕರು: 1. ಸುದೀಪ್ತ Contestant number: 61 2. ಆರಾಧ್ಯ Contestant number: 55 3. ಶೈನ Contestant number: 49 ಅಂತೆಯೇ, ತೀರ್ಪುಗಾರರ ಮೆಚ್ಚುಗೆ ಪಾತ್ರರಾದ ಹಾಡುಗಾರ/ಹಾಡುಗಾರ್ತಿಯರು : 1. ಯಶಸ್ವಿನಿ ಉಳ್ಳಾಲ್ Contestant number: 51 2. ಶರತ್ ಬೋಳ Contestant number: 21 3. ಅ) ರಜತ ಆಚಾರ್ಯ Contestant number: 28 ಆ) ಲಕ್ಷ್ಮಿ ಕೊಟ್ಯಾನ್ Contestant number:40 ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪೇಜ್ ನಿರ್ವಾಹಕ ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ. ಇಲ್ಲಿಯವರೆಗೆ ಹಲವಾರು ಕಲಾವಿದರ ಪರಿಚಯ ತುಳುನಾಡ್ದ ಪ್ರತಿಭೆಲು ಪೇಜ್ ನ ಮುಖಾಂತರ ಆಗಿದೆ. ಇನ್ನು ಮುಂದೆ ನಿಮ್ಮ ಪ್ರೋತ್ಸಾಹದಿಂದ ಇನ್ನಷ್ಟು ಕಲಾವಿದರನ್ನು ಪರಿಚಯಿಸಿ, ಮುಂದಿನ ಕಲಾಜೀವನಕ್ಕೆ ಹುರಿದುಂಬಿಸುವ ಪ್ರಯತ್ನವನ್ನು ಕಂಡಿತಾ ಮಾಡುತ್ತೇವೆ. ಅದರ ಒಟ್ಟಿಗೆ ಕರಾವಳಿಗೆ ಸಂಬಂಧಪಟ್ಟ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಇಂತಹ ಸ್ಪರ್ಧೆಗಳನ್ನು ಆಯೋಜಿಸಿ ಉತ್ತಮ ವೇದಿಕೆ ನಿರ್ಮಾಣ ಮಾಡುತ್ತೇವೆ. ಭಾಗವಹಿಸಿದ ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು

ಗೆಳೆಯರ ಬಳಗ (ರಿ.) ಮದ್ವನಗರ ತಂಡದಿಂದ 500 ತರಕಾರಿ ಕಿಟ್ ವಿತರಣೆ

Thumbnail
Posted On: 30 Apr 2020, 01:15 PM

ಕೋವಿಡ್19 ನಿಂದ ಲಾಕ್ಡೌನ್ ಆಗಿರುವುದರಿಂದ ಗೆಳೆಯರ ಬಳಗ (ರಿ.) ಮದ್ವನಗರ ಪಡುಬೆಳ್ಳೆ ಇವರ ವತಿಯಿಂದ ಪಡುಬೆಳ್ಳೆ ಹಾಗೂ ಮೂಡುಬೆಳ್ಳೆ ಗ್ರಾಮದ ಸುಮಾರು 500 ಕುಟುಂಬಗಳಿಗೆ ತರಕಾರಿ ಕಿಟ್ಟನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀ ಶೈಲಂ ಚಾಲನೆ ನೀಡಿದರು, ಗೆಳೆಯರ ಬಳಗ ತಂಡದ ಸದಸ್ಯರು ಮನೆ ಮನೆಗೆ ತೆರಳಿ ಕೀಟ್ಟನ್ನು ವಿತರಿಸಿದರು.

ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂದಿರ ವಾರ್ಷಿಕ ಮಂಗಲೋತ್ಸವ

Thumbnail
Posted On: 28 Apr 2020, 01:54 PM

ಪೊಲಿಪು ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂದಿರ ಪೊಲಿಪು ಇದರ ವಾರ್ಷಿಕ ಮಂಗಳೋತ್ಸವವು ಊರ ಹತ್ತು ಸಮಸ್ತರಿಂದ ಸರಳವಾಗಿ ಆಚರಿಸಲಾಯಿತು . ಇದರ ಪರವಾಗಿ ಊರಿನ ಮೊಗವೀರ ಮಹಾ ಸಭಾ ಅಧ್ಯಕ್ಷರಾದ ಶ್ರೀ ರೋಹಿತಾಶ್ವ ಕುಂದರ್,ಉಪಾಧ್ಯಕ್ಷರಾದ ವಿಜಯ ಕರ್ಕೇರ , ದ. ಕ ಮತ್ತು ಉಡುಪಿ ಜಿಲ್ಲಾ ಮೀನುಗಾರರ ಫೆಡರೇಶನ್.ನಿ ಇದರ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಉದ್ಯಮಿಗಳಾದ ಸುಕುಮಾರ್ ಕುಂದರ್ ಮುಂಬೈ, ಅನಂತ್ ಕುಂದರ್ ಮುಂಬೈ, ಪೊಲಿಪು ಮೊಗವೀರ ಮಹಿಳಾ ಮಂಡಳಿ ಪೊಲಿಪು ಹಾಗೂ ಊರ ಎಲ್ಲಾ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಊರ ಸುಮಾರು 200 ಕುಟುಂಬಗಳಿಗೆ ಊರ ಪರವಾಗಿ ಅಕ್ಕಿಯನ್ನು ವಿತರಿಸಲಾಯಿತು.

ಧಣಿವರಿಯದ ಸೇವೆಯಲ್ಲಿ ಪಡುಬಿದ್ರಿಯ ಭಗವತಿ ಗ್ರೂಪ್

Thumbnail
Posted On: 27 Apr 2020, 10:41 PM

ಪಡುಬಿದ್ರಿ.ಎ, 27 : ಕೋವಿಡ್ 19 ದುಸ್ಥಿತಿಯಲ್ಲಿ ಜನರಿಗೆ ಅಗತ್ಯ ಆಹಾರ ಪೂರೈಕೆ ನಿರಂತರವಾಗಿ ವಿತರಿಸಿದ್ದು, ಇಂದು ಭಗವತಿ ಗ್ರೂಪ್ ಸದಸ್ಯರು,ದಾನಿಗಳು ಮತ್ತು ಪ್ರಸಿದ್ಧ ವಕೀಲರಾದ ಶ್ರೀ ಉಮನಾಥ್ ಭಂಡಾರಿ ಮತ್ತು ಶ್ರೀಮತಿ ಮಂಜುಳ ದಂಪತಿಗಳು ಸಹಾಯಾರ್ಥವಾಗಿ ನೀಡಲ್ಪಟ್ಟ ದನದ ಆಹಾರಗಳನ್ನು ನೀಲಾವರ ಕಾಮಧೇನು ಗೋಶಾಲೆಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಗವತಿ ಗ್ರೂಪ್ ಸದಸ್ಯರಾದ ಯುವರಾಜ್ ಕುಲಾಲ್, ಸಂದೇಶ್ ಶೆಟ್ಟಿ, ದೇವಿತ್ ಶೆಟ್ಟಿ, ರವಿ ಆಚಾರ್ಯ, ಸುಕೇನ್ ಪೂಜಾರಿ ಉಪಸ್ಥಿತರಿದ್ದರು. ಗೋ ಸಂತತಿಯ ಬಗ್ಗೆ ಅಪಾರ ಕಾಳಜಿಯೊಂದಿಗೆ ಪ್ರಸ್ತುತ ಸ್ಥಿತಿಗತಿಗೆ ಅನುಗುಣವಾಗಿ ವಿಶೇಷ ದಾನನೀಡಿದ ದಾನಿಗಳಿಗೆ ಭಗವತಿ ಗ್ರೂಪ್ ಅಧ್ಯಕ್ಷರು ತಂಡದ ಸರ್ವ ಸದಸ್ಯರ ಪರವಾಗಿ ಹೃದಯಂತರಾಳದ ಅಭಿನಂದನೆಗಳನ್ನು ಸಲ್ಲಿಸಿದರು.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಉಡುಪಿ ಯುವಕನಿಂದ ಸಾವಿರಾರು ಜನಕ್ಕೆ ಆಹಾರ ತಯಾರಿ

Thumbnail
Posted On: 25 Apr 2020, 10:38 PM

ಉಡುಪಿ. ಎ, 25 : ಅನೇಕ ಹೆಸರಾಂತ ಕಂಪನಿಗಳಲ್ಲಿ ಅಡಿಗೆ ಮಾಡಿ ಬಡಿಸಿದವರು ಸಂದೇಶ್ ಅಡುಗೆಮನೆ, ಇವರು ಮೂಲತಃ ಉಡುಪಿಯವರು. ಹೈದರಬಾದ್ ತಾಜ್ ಗ್ರೂಪ್ ಹೊಟೇಲ್ ಗಳಲ್ಲಿ ಸಾಕಷ್ಟು ಕೆಲಸ ಮಾಡಿ ಅನುಭವ ಇರುವ ಇವರು, ಇದೀಗ ಬೆಂಗಳೂರಿನ ಷೆಪ್ ಟಾಕ್ ಎಂಬ ಸಂಸ್ಥೆಯಲ್ಲಿ ಅಡುಗೆ ಮುಖ್ಯಸ್ಥರಾಗಿದ್ದಾರೆ. ಗಂಗಾವತಿಗೆ ಬಂದಿದ್ದ ಸಂದೇಶ್ ಅಡುಗೆಮನೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾವಿರಾರು ಜನರಿಗೆ ಅಡುಗೆ ಮಾಡಿದ ಘಟನೆ ಗಂಗಾವತಿಯಲ್ಲಿ ನಡೆದಿದೆ. ಹೈದ್ರಾಬಾದಿನ ತಾಜ್ ಗ್ರೂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ.. ಇದೀಗ ಬೆಂಗಳೂರಿನ ಷೆಪ್ ಟಾಕ್ ಎಂಬ ಆಹಾರ ಸಿದ್ಧಪಡಿಸುವ ಸಂಸ್ಥೆಯಲ್ಲಿ ಮುಖ್ಯ ಅಡುಗೆಯ ಮುಖ್ಯಸ್ಥನಾಗಿ ಇರುವ ಸಂದೇಶ್ ಪೂಜಾರಿ ಈ ಸಾಹಸ ಮಾಡಿದ್ದಾರೆ. ಕೊರೋನಾ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಇಲ್ಲಿನ ನಗರೇಶ್ವರ ದೇವಸ್ಥಾನಲ್ಲಿ ನಾನಾ ಇಲಾಖೆಯ ಸಿಬ್ಬಂದಿಗೆ ಹಾಗೂ ಬಡವರಿಗೆ ಆಹಾರ ಸಿದ್ಧಪಡಿಸಿ ಕೊಡುವ ಕೆಲಸ ಮಾಡಲಾಗುತ್ತಿದೆ. ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೋರಾಡುತ್ತಿರುವ ಎಲ್ಲಾ ಇಲಾಖೆಯ ಸಿಬ್ಬಂದಿಗಳಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಆಹಾರ ತಯಾರಿಸಿ ಸಂದೇಶ್ ರವರು ಕೃತಜ್ಞತೆ ಸಲ್ಲಿಸಿರುತ್ತಾರೆ, ಸಂದೇಶ್ ಅಡುಗೆಮನೆ ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮೂರುವರೆ ಗಂಟೆಯಲ್ಲಿ ಗರಂ ಗರಂ ಫಲಾವ್ ತಯಾರು ಮಾಡಿದರು. ಬೆಳಿಗ್ಗೆ ಏಳು ಗಂಟೆಗೆ ಆರಂಭವಾದ ಆಡುಗೆ ಮಾಡುವ ಕಾರ್ಯ‌ ಮೂರುವರೆ ಗಂಟೆಯ ಅವಧಿಯಲ್ಲಿ ಮುಗಿದಿದೆ. ಮಧ್ಯ ಅರ್ಧ ಗಂಟೆ ಮಾತ್ರ ವಿಶ್ರಾಂತಿ ತೆಗೆದುಕೊಂಡ ಯುವಕ, ಇಡೀ ಅಡುಗೆಯನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡಿದ್ದಾರೆ.