ಕುತ್ಯಾರು : ಎಸ್. ಟಿ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮ ರಾವ್ ಅಂಬೇಡ್ಕರ್ ಜಯಂತಿ ಆಚರಣೆ
Thumbnail
ಕಾಪು: ಕುತ್ಯಾರು ಗ್ರಾಮ ವ್ಯಾಪ್ತಿ ಯ ಎಸ್. ಟಿ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಭೀಮ ರಾವ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಉಡುಪಿ ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿ ನವೀನ್ ಶೆಟ್ಟಿ ಕುತ್ಯಾರು, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರು ಲತಾ ಆಚಾರ್ಯ, ಉಪ ಅಧ್ಯಕ್ಷರು ರಾಜ ಶೆಟ್ಟಿ, ಪಂಚಾಯತ್ ಸದಸ್ಯರಾದ ಸಂಪತ್ ಪೂಜಾರಿ,ಅಗ್ನೇಸ್ ಮತಾಯಸ್, ಆರ್ ಎಸ್ ಎಸ್ ಪ್ರಮುಖ ಸತೀಶ್ ಕುತ್ಯಾರು,ವಾರ್ಡ್ ಕಾರ್ಯದರ್ಶಿ ರೂಪ ಆಚಾರ್ಯ ಕುತ್ಯಾರು, ಸ್ಥಾನಿಯ ಸಮಿತಿ ಪ್ರಧಾನ ಕಾರ್ಯದರ್ಶಿ ಸುಶಾಂತ್ ಶೆಟ್ಟಿ ಕುತ್ಯಾರು ಉಪಸ್ಥಿತಿ ಇದ್ದರು. ನಂತರ ಕಾಲೋನಿ ಯ ಜನರೊಂದಿಗೆ ಲಘು ಉಪಹಾರ ಸೇವಿಸಲಾಯಿತು.
Additional image Additional image
14 Apr 2021, 10:32 PM
Category: Kaup
Tags: