ಶಂಕರಪುರ ಸಾಯಿ ಬಾಬಾ ಮಂದಿರಕ್ಕೆ ಮೂರ್ತಿಗಳ ಆಗಮನ
ಉಡುಪಿ : ಶಂಕರಪುರದ ದ್ವಾರಕಾಮಾಯಿ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಮೇ ತಿಂಗಳ 1,2 ಮತ್ತು 3 ರಂದು ನಡೆಯುವ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಇಂದು ಸಾಯಿ ಬಾಬಾ ಮೂರ್ತಿಯನ್ನು ಶಂಕರಪುರದ ಮಂದಿರಕ್ಕೆ ಸ್ವಾಗತಿಸಲಾಯಿತು.
ರಾಜಸ್ಥಾನದ ಜೈಪುರದಲ್ಲಿ ಕೆತ್ತಲಾದ ಅಮೃತಶಿಲೆಯ ದ್ವಾರಕಾಮಾಯಿ ಸಾಯಿ ಬಾಬಾ ಮತ್ತು ಧನ್ವಂತರಿ ಸಾಯಿಬಾಬಾ ಮೂರ್ತಿಗಳ ಜೊತೆಗೆ ಕರಿಗಲ್ಲಿನ ಗಣಪತಿ, ಆಂಜನೇಯ, ಅಯ್ಯಪ್ಪ, ಸುಬ್ರಮಣ್ಯ ಮೂರ್ತಿಗಳನ್ನು ಉಡುಪಿಯ ಜೋಡುಕಟ್ಟೆಯಿಂದ ವಾಹನ ಮೆರವಣಿಗೆಯಲ್ಲಿ ಶಂಕರಪುರಕ್ಕೆ ತರಲಾಯಿತು.
ಜಯಕರ ಶೆಟ್ಟಿ ಇಂದ್ರಾಳಿ,ಸುಪ್ರಸಾದ್ ಶೆಟ್ಟಿ, ಕಿರಣ್ ಜೋಗಿ, ಪ್ರಕಾಶ್ ಬಾರಾಡಿ, ಗೀತಾಂಜಲಿ ಸುವರ್ಣ ಕಟಪಾಡಿ , ವೀಣಾ ಶೆಟ್ಟಿ, ಸತೀಶ್ ಉದ್ಯಾವರ, ವಿಶ್ವನಾಥ ಸುವರ್ಣ, ಉಮೇಶ್ ನಾಯ್ಕ್ ,ಸಂಪತ್ ಶೆಟ್ಟಿ, ಸುಧಾಕರ ಶೆಟ್ಟಿ, ಯಶ್ ಪಾಲ್ ಸುವರ್ಣ , ರಾಧಾಕೃಷ್ಣ ಮೆಂಡನ್,ವಿಜಯ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.
