ಅರ್ಚಕ ವೃತ್ತಿಯ ಆದಾಯದಿಂದ ದಿನಸಿ ಸಾಮಗ್ರಿ, ಊಟ ವಿತರಿಸುವ ಕೆ.ಪಿ ಶ್ರೀನಿವಾಸ ತಂತ್ರಿ ಮಡುಂಬು
Thumbnail
ಕಾಪು : ಕೊರೊನಾ ಲಾಕ್ಡೌನ್ ಪ್ರಾರಂಭವಾದ ದಿನದಿಂದಲೂ ಯಾರು ಹಸಿವೆಯಿಂದ ಇರಬಾರದೆಂದು ಸದ್ದಿಲ್ಲದೆ ತನ್ನಿಂದಾದಷ್ಟು ಮತ್ತು ದಾನಿಗಳ ನೆರವಿನಿಂದ ಅಗತ್ಯವುಳ್ಳವರಿಗೆ ದಿನಸಿ ಸಾಮಾಗ್ರಿ, ಊಟದ ವ್ಯವಸ್ಥೆಯನ್ನು ಮಾಡುತ್ತಿರುವ ವ್ಯಕ್ತಿಯೇ ಕಾಪು ತಾಲೂಕಿನ ಕೆ.ಪಿ ಶ್ರೀನಿವಾಸ ತಂತ್ರಿ ಮಡುಂಬು. ಈಗಾಗಲೇ ಹಲವಾರು ಮಂದಿಗೆ ಎಂಟು ಬಗೆಯ ವಸ್ತುಗಳನ್ನೊಳಗೊಂಡ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ. ಇಂದು 200 ಜನರಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಿದ್ದಾರೆ. ತಾನು ಅರ್ಚಕ ವೃತ್ತಿ ಮಾಡಿಕೊಂಡಿದ್ದು ಅದರಿಂದ ಬಂದ ಆದಾಯ ಮತ್ತು ನನ್ನಿಂದ ಪೂಜಾ ಸೇವೆ ಮಾಡಿಸಿಕೊಂಡ ಸೇವಾರ್ಥಿಗಳಿಂದ ದಾನವಾಗಿ ನೀಡಿದ ಅಕ್ಕಿ ಇತ್ಯಾದಿ ವಸ್ತುಗಳನ್ನು ಅಗತ್ಯವುಳ್ಳವರಿಗೆ ನೀಡುತ್ತಿದ್ದಾರೆ. ಕಳೆದ ಬಾರಿಯ ಲಾಕ್ಡೌನ್ ಸಂದರ್ಭ ಸುಮಾರು 29750 ಜನರಿಗೆ ಅನ್ನದಾನ ಮಾಡಿದ್ದರು.
Additional image
17 May 2021, 05:29 PM
Category: Kaup
Tags: