ಹಾಡುಹಗಲೇ ಮಹಿಳೆ ಹಾಗೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಅನ್ಯಕೋಮಿನ ಯುವಕ
ಕುಂದಾಪುರ : ದಿನಾಂಕ ಜುಲೈ 30ರಂದು ಸರಿಸುಮಾರು ಮಧ್ಯಾಹ್ನ 4 ಘಂಟೆ ಹೊತ್ತಿಗೆ ದತ್ತಾತ್ರೇಯ ಫ್ಲಾಟ್ ನ ಸಮೀಪ ಆಕ್ಟಿವ್ ಹೋಂಡಾ ಬೈಕ್ ನಲ್ಲಿ ಬಂದು ಓರ್ವ ಮಹಿಳೆಯೊಂದಿಗೆ ಅಸಭ್ಯ ರೀತಿಯಿಂದ ವರ್ತಿಸಿ ಅಲ್ಲಿಂದ ಪರಾರಿಯಾಗಿ ಮುಂದೆ ನಾರಾಯಣ ಗುರು ಕಲ್ಯಾಣ ಮಂಟಪದ ಸಮೀಪದಲ್ಲಿ ತಾಯಿ ಮಗಳು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಮಗಳ ಜೊತೆಗೆ ಅಸಭ್ಯ ರೀತಿಯಲ್ಲಿ ವರ್ತಿಸಿ ಬೈಕ್ ನಲ್ಲಿ ಪರಾರಿಯಾಗಿದ್ದಾನೆ.
ಅಷ್ಟು ಹೊತ್ತಿಗಾಗಲೇ ಸಾರ್ವಜನಿಕರು ಸೇರಿದಂತೆ ಹುಡುಗಿಯ ತಂದೆಯಾದ ಕುಂದಾಪುರ ನೋಟರಿ ವಕೀಲರು ಪೊಲೀಸ್ ರಿಗೆ ಮಾಹಿತಿ ನೀಡಿರುತ್ತಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕ್ರೈಂ PSI ರಮೇಶ್ ಪವರ್, ASI ಆನಂದ್, ನವೀನ್ ರವರು ತನಿಖೆಯನ್ನು ಚುರುಕುಗೊಳಿಸಿ ದತ್ತಾತ್ರೇಯ ಫ್ಲಾಟ್ ಮತ್ತು ನಾರಾಯಣ ಗುರು ಕಲ್ಯಾಣ ಮಂಟಪದ ಹತ್ತಿರ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಆಳವಡಿಸಿದ ಸಿ. ಸಿ ಕ್ಯಾಮೆರಾವನ್ನು ಪರಿಶೀಲಿಸಿ ಈ ಕೃತ್ಯದ ವಿಡಿಯೋದಲ್ಲಿರುವ ಯುವಕನ ಚಹರೆ ಪಟ್ಟಿಯನ್ನು ಗುರುತಿಸಿ ಕೂಡಲೇ ಕಾರ್ಯ ಪ್ರವೃತ್ತರಾಗಿ ಸರಿಸುಮಾರು ರಾತ್ರಿ 7.30ಕ್ಕೆ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಯುವಕ ಕೋಡಿ ಮೂಲದ ವ್ಯಕ್ತಿ ಎಂದು ತಿಳಿದು ಬಂದಿದೆ.
ಆತನಿಗೆ ಇನ್ನು ಮುಂದೆ ಇಂತಹ ಅಸಭ್ಯ ಕೃತ್ಯವನ್ನು ಮಾಡಬಾರದು ಎಂದು ತಾಕೀತು ಮಾಡಿ ಸಮಾಜಾಯಿಸಿ ಕಳುಹಿಸಿದ್ದಾರೆ ಎನ್ನಲಾಗಿದೆ. ಚುರುಕಿನ ಕಾರ್ಯಚರಣೆ ಮಾಡಿ ಆರೋಪಿತನನ್ನು ವಶಕ್ಕೆ ಪಡೆದ ಕುಂದಾಪುರ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
