ಯುವ ಜಾದೂಗಾರ ಪ್ರಥಮ್ ಕಾಮತ್ ಕಟಪಾಡಿ ಹಸ್ತದಿ ಮೂಡಿದ ಅರಿಶಿಣ ಗಣಪ
ಕಾಪು : ಅರಿಶಿಣ ಗಣಪತಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆ ಯಂತೆ 10ಲಕ್ಷ ಅರಿಶಿಣ ಗಣಪತಿ ಅಭಿಯಾನದಲ್ಲಿ ಕಟಪಾಡಿ ಪ್ರಥಮ್ ಕಾಮತ್ ಇವರಿಂದ ಅರಶಿನ ಗಣಪತಿ ರಚಿಸಲ್ಪಟ್ಟಿದೆ.
ಕಟಪಾಡಿಯ ಎಸ್ ವಿ ಎಸ್ ಆಂಗ್ಲ ಮಾದ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಪ್ರಥಮ್ ಕಾಮತ್ 250ಗ್ರಾಂ ಅರಿಶಿಣ ಹಾಗೂ 250 ಗ್ರಾಂ ಮೈದಾ ಹಾಗೂ ನೀರು ಬೆರೆಸಿ 6 ಇಂಚಿನ ಪರಿಸರ ಸ್ನೇಹಿ ಗಣೇಶನನ್ನು ರಚಿಸಿದ್ದಾನೆ.
ಇದು ಕರ್ನಾಟಕ ಸರಕಾರದ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಸೂಚನೆಯನ್ನು ಪಾಲಿಸಿ ರಚಿಸಲಾಗಿದೆ. ಅಲ್ಲದೇ 10ಲಕ್ಷ ಅರಿಶಿಣ ಗಣಪತಿ ಅಭಿಯಾನದಲ್ಲಿ ಪ್ರಥಮ್ ಕಾಮತ್ ನ ಒಂದು ಕೊಡುಗೆಯಾಗಿದೆ.
