ರೋಟರಿ ಕಲ್ಯಾಣಪುರ ವತಿಯಿಂದ ಭಾರತ ರತ್ನ ಸರ್.ಎಮ್ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ
Thumbnail
ಉಡುಪಿ : ರೋಟರಿ ಕ್ಲಬ್ ಕಲ್ಯಾಣಪುರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಭಾರತ ರತ್ನ ಸರ್.ಎಮ್ ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆಯನ್ನು ಆಚರಿಸಿ ಗೌರವ ಸಲ್ಲಿಸಲಾಯಿತು. ಕ್ಲಬ್ಬಿನ ಸಭಾ ಭವನದಲ್ಲಿ ಜರುಗಿದ ಈ ಸಮಾರಂಭದಲ್ಲಿ ಎಬಿಬಿ, ಅರೆವ, ಅಲ್ ಸ್ಪಾಮ್, ಜಿಇ ಕಂಪೆನಿ ಗಳಲ್ಲಿ ಯೋಜನಾ ಅಭಿಯಂತರರು ಆಗಿ ವಿಶೇಷ ಸೇವೆ ಸಲ್ಲಿಸಿರುವ ನಿವೃತ್ತ ಎಲೆಕ್ಟ್ರಿಕಲ್ ಇಂಜಿನಿಯರ್ ಮೂಡುತೋನ್ಸೆ ಯ ಸೊಲೊಮನ್ ವಿಜಯ್ ಲೂವಿಸ್ ಮತ್ತು ಉಡುಪಿ ಜಿಲ್ಲಾ ಇಂಜಿನಿಯರ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿಗಳೂ, ಹೆಸರಾಂತ ಅರ್ಚನಾ ಪ್ರೊಜೆಕ್ಟ್ಸ್ ನ ಮುಖ್ಯಸ್ಥರುಗಳಾದ ಅಮಿತ್ ಅರವಿಂದ್ ಇವರುಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ರೊಟರಿಯ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜರಾಂ ಭಟ್ ಮತ್ತು ವಲಯ ಸೇನಾನಿ ಅಮಿತ್ ಅರವಿಂದ್ ಅವರುಗಳು ದೇಶದ ಮೂಲ ಸೌಕರ್ಯಗಳ ವಿನ್ಯಾಸ, ನಿರ್ಮಾಣ ಕಾರ್ಯಗಳಲ್ಲಿ ಇಂಜಿನಿಯರ್ ರವರುಗಳು ಪಾತ್ರ ಅಪಾರವಾದದ್ದು ಎಂಬುದಾಗಿ ಸಂದರ್ಭೋಚಿತವಾಗಿ ಮಾತನಾಡಿದರು. ಇಂಜಿನಿಯರಿಂಗ್ ವೃತ್ತಿ ಯಲ್ಲಿ ತೊಡಗಿಸಿಕೊಂಡಿರುವ ರೋಟರಿ ಸದಸ್ಯರುಗಳಾದ ಗಿರಿಧರ್ ಬಾಳಿಗ, ಬ್ರಾನ್ ಡಿಸೋಜ , ದಿವಾಕರ್ ಮತ್ತಿತರ ತಾಂತ್ರಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರುಗಳನ್ನು ರೊಟರಿ ಅಧ್ಯಕ್ಷರಾದ ಶಂಭು ಶಂಕರ್ ರವರು ಆಭಿನಂದಿಸಿದರು. ರೊಟೇರಿಯನ್ ಗಿರಿಧರ್ ಬಾಳಿಗ ರವರು ಭಾರತ ರತ್ನ ಸರ್.ಎಮ್ ವಿಶ್ವೇಶ್ವರಯ್ಯನವರು ದೇಶಕ್ಕೆ ನೀಡಿರುವ ಶ್ರಮ ಹಾಗೂ ಅಪಾರ ಕೊಡುಗೆಗಳನ್ನು ಸ್ಮರಿಸಿ ಅವರಿಗೆ ಗೌರವ ಅರ್ಪಿಸಿದರು. ವಿಭಿನ್ನ ಮಾದರಿಯ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕಾರ್ಯಗಳ ಜೊತೆಗೆ ಪರಿಸರ ಸ್ನೇಹಿ ಹಾಗೂ ಪ್ರಕ್ರತಿಯನ್ನು ಉಳಿಸಿ , ಬೆಳೆಸುವ ನಿಟ್ಟಿನಲ್ಲಿ ತಂತ್ರಜ್ಞಾನ ಅಳವಡಿಕೆ ಈಗಿನ ಅಗತ್ಯತೆಯಾಗಿದೆ ಎಂದು ತಿಳಿಸಿ, ಕಾಳಜಿ ವ್ಯಕ್ತಪಡಿಸಿದರು. ಕ್ಲಬ್ಬಿನ ಅಧ್ಯಕರಾದ ಶಂಭು ಶಂಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯನ್ನು ಪೂರ್ವಾಧ್ಯಕ್ಷ ಅಲೆನ್ ಲೂವಿಸ್, ಕೋಶಾಧಿಕಾರಿ ದಿವಾಕರ್, ವೃತ್ತಿ ಸೇವಾ ನಿರ್ದೇಶಕ ಶಂಕರ್ ಸುವರ್ಣ ರವರುಗಳು ಅತಿಥಿ ಪರಿಚಯ ನಿರ್ವಹಿಸಿದರು, ರಾಮ ಕೃಷ್ಣ ಆಚಾರ್ಯರವರು ಸಭಾ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಗಿರೀಶ್ ಚಂದ್ರರವರು ವಂದಿಸಿದರು.
18 Sep 2021, 09:46 AM
Category: Kaup
Tags: