ಮೂಡುಬೆಳ್ಳೆ : ವಿಶ್ವ ಹಿಂದೂ ಪರಿಷದ್, ಬಜರಂಗದಳ, ಮಾತೃ ಶಕ್ತಿ ಹಾಗೂ ದುರ್ಗವಾಹಿನಿ ಘಟಕದ ವತಿಯಿಂದ ವನಮಹೋತ್ಸವ, ಭಗವಧ್ವಜ ಸ್ಥಾಪನೆ
Thumbnail
ಕಾಪು : ವಿಶ್ವ ಹಿಂದೂ ಪರಿಷದ್, ಬಜರಂಗದಳ ಮತ್ತು ಮಾತೃ ಶಕ್ತಿ ಹಾಗೂ ದುರ್ಗವಾಹಿನಿ ಮೂಡುಬೆಳ್ಳೆ ಘಟಕ ವತಿಯಿಂದ ಕುಂತಳ ನಗರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಹಾಗೂ ಭಗವಧ್ವಜ ಸ್ಥಾಪಿಸಲಾಯಿತು. ಈ ಸಂದರ್ಭದಲ್ಲಿ ಕಟ್ಟಿಂಗೇರಿ ದೇವಸ್ಥಾನದ ಧರ್ಮದರ್ಶಿಗಳಾದ ದೇವದಾಸ್ ಹೆಬ್ಬಾರ್ ಹಾಗೂ ಕಾಪು ತಾಲೂಕು ಕಾರ್ಯವಾಹ ಸಚಿನ್ ಶೆಟ್ಟಿ ವಿ.ಹಿಂ.ಪ ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು, ಕಾಪು ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ, ಶಿರ್ವ ವಿ.ಹಿಂ.ಪ ವಲಯ ಅಧ್ಯಕ್ಷರಾದ ವಿಖ್ಯಾತ್ ಭಟ್ ಮೂಡುಬೆಳ್ಳೆ ಹಾಗೂ ಬೆಳ್ಳೆ ಘಟಕದ ಅಧ್ಯಕ್ಷರಾದ ವಿಜೇತ್ ಭಟ್, ಸ್ಥಳೀಯ ಉದ್ಯಮಿ ಅಶೋಕ್ ಶೆಟ್ಟಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Additional image
26 Sep 2021, 09:14 PM
Category: Kaup
Tags: