ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ, ಮಹಿಳಾ ವೇದಿಕೆ ಅಶೋಕನಗರ
ಮಂಗಳೂರು : ರಾತ್ರಿ 10 ಗಂಟೆಗೆಯಿಂದ ಮಧ್ಯರಾತ್ರಿ 3.15 ರವರೆಗೂ ಉಬ್ಬು ( Humps ) ಗಳಿಗೆ ಪೈಂಟ್ ಕೊಡುವ ಕೆಲಸ ನಿನ್ನೆ ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಅಶೋಕನಗರ ವತಿಯಿಂದ ಲೇಡಿಹಿಲ್ ನಿಂದ ಉರ್ವಸ್ಟೋರ್ ವರೆಗೆ ನಡೆಯಿತು.
ಬಿರುವೆರ್ ಕುಡ್ಲ ಮಹಿಳಾ ವೇದಿಕೆ ಅಶೋಕ ನಗರ ವಲಯದ ಎಲ್ಲ ಮಹಿಳೆಯರು ಯಾವುದೇ ಕೆಲಸಕ್ಕೆ ಹಿಂಜರಿಯದೆ ಪ್ರತಿಯೊಂದು ಕೆಲಸಕ್ಕೂ ತುಂಬ ಉತ್ಸಾಹದಿಂದ ಭಾಗವಹಿಸಿದ್ದರು.
M S Enterprises ಮಾಲೀಕರಾದ ಸಚಿನ್ ಹಾಗೂ ಉರ್ವ ಆರಕ್ಷಕ ಠಾಣೆ ಸಿಬ್ಬಂದಿ ವರ್ಗದವರು ಸಹಕರಿಸಿದ್ದರು.
ಈ ಕೆಲಸದಲ್ಲಿ ಸುಮಾರು 15 ಮಹಿಳಾ ಸದಸ್ಯರು ಹಾಜರಿದ್ದು, ಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ, ಬಿರುವೆರ್ ಕುಡ್ಲ ಕೇಂದ್ರೀಯ ಸಮಿತಿ ಸದಸ್ಯರಾದ ಸುನಿಲ್ ಮತ್ತು ಶರಣ್ ಕೂಡ ಉಪಸ್ಥಿತರಿದ್ದರು.
