ಇನ್ನಂಜೆ : ಮೂರು ದಿನಗಳಿಂದ ಬಾವಿಯಲ್ಲಿದ್ದ ನಾಯಿಯನ್ನು ರಕ್ಷಿಸಿದ ಯುವಕರು
ಕಾಪು : ಸುಮಾರು ಮೂರು ದಿನಗಳಿಂದ ಶಾಂತ ಆಚಾರ್ಯರವರ ಬಾವಿಯಲ್ಲಿ ಬೀದಿನಾಯಿಯೊಂದು ಆಕಸ್ಮಿಕವಾಗಿ ಬಿದ್ದಿತ್ತು. ಶಾಂತ ಆಚಾರ್ಯರವರು ಗಮನಿಸಿ ಇನ್ನಂಜೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಸುನೀತಾ ಸಂಜೀವ ಮೂಲ್ಯ ಇವರನ್ನು ಸಂಪರ್ಕಿಸಿ ನಾಯಿಯನ್ನು ರಕ್ಷಿಸುವಂತೆ ಕೇಳಿಕೊಂಡರು.
ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಸುನೀತಾ ರವರು ಪ್ರಾಣಿಯ ಕಾಳಜಿ ಹೊಂದಿರುವ ಅಕ್ಷತಾ ಕುಲಾಲ್ ಮತ್ತು ಅಕ್ಷಯ್ ಕುಲಾಲ್ ಮತ್ತು ಅಕ್ಷಿತ್ ಇವರನ್ನು ಸಂಪರ್ಕಿಸಿ ಸ್ಥಳದಲ್ಲಿ ನಿಂತು ಕಾರ್ಯಾಚರಣೆಗೆ ಮುಂದಾದರು. ಅಲ್ಲಿಗೆ ಆಗಮಿಸಿದ ಅಕ್ಷಯ್ ಹಗ್ಗದ ಮುಖಾಂತರ ನಾಯಿಯನ್ನು ಬಾವಿಯಿಂದ ರಕ್ಷಿಸಿದರು. ಈ ಸಂದರ್ಭದಲ್ಲಿ ಸಂಜೀವ ಮೂಲ್ಯ, ಸ್ವಾತಿ ಸ್ಥಳದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.
ಪ್ರಾಣಿಗಳ ಮೇಲೆ ಕಾಳಜಿ ವಹಿಸಿರುವುದು ಶ್ಲಾಘನೀಯ ಎಂದು ಸ್ಥಳೀಯರು ಅಭಿನಂದಿಸಿದರು.
