ಅಜಾಗರೂಕತೆಯ ಚಾಲನೆ : ಮಾರುತಿ ಕಾರಿಗೆ ಇಂಟ್ರಾ ವಾಹನ ಢಿಕ್ಕಿ
ಕಟಪಾಡಿ : ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಪು ಕಡೆಗೆ ಬರುತ್ತಿದ್ದ ಮಾರುತಿ ಕಾರಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟಾಟಾ ಇಂಟ್ರಾ ವಾಹನ ಹಿಂಬದಿಗೆ ಢಿಕ್ಕಿಯಾದ ಪರಿಣಾಮ ಓರ್ವನಿಗೆ ತೀವ್ರತರದ ಗಾಯವಾಗಿ, ಕಾರು ಸಂಪೂರ್ಣ ಜಖಂಗೊಂಡ ಪ್ರಕರಣ ಪಾಂಗಾಳ ಜನಾರ್ಧನ ದೇವಸ್ಥಾನದ ಸಮೀಪ ನಡೆದಿದೆ.
ಮಾರುತಿ ಕಾರಿನ ಹಿಂಬದಿ ಸೀಟಿನಲ್ಲಿದ್ದ ಚರಣ್ ಹೆಚ್ ಪೂಜಾರಿಯ ತಲೆ, ಬೆನ್ನು, ಎದೆಭಾಗ, ಬಲ ಕೈಗೆ ತೀವ್ರ ತರದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಟಾ ಇಂಟ್ರಾ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
