ಮಂಗಳೂರು : ಸ್ಕೂಟರ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ
ಮಂಗಳೂರು : ಇಲ್ಲಿನ ಹೊರವಲಯದ ಉಳ್ಳಾಲದ ಬಗಂಬಿಲ ಬಳಿ ಗಾಂಜಾ ಸಾಗಾಟದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಕೇರಳ ತ್ರಿಶೂರು ನಿವಾಸಿ ಆದರ್ಶ್ ಜೋತಿ (22), ಕೊಟ್ಟಾಯಂ ನ ಲೋಯಲ್ ಜೋಯ್ಸ್ (22) ಬಂಧಿತರು.
ಬಂಧಿತರಿಂದ 220 ಗ್ರಾಂ ಗಾಂಜಾ ವಶಪಡಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
