ನೀಲಾವರ ಗೋಶಾಲೆಗೆ ಹುಲ್ಲು ನೀಡುವ ಮೂಲಕ ಗೋವಿಗಾಗಿ ಮೇವು ಅಭಿಯಾನ
Thumbnail
ಉಡುಪಿ :- "ಸಕ್ಷಮಾ ಉಡುಪಿ " ಇದರ ವತಿಯಿಂದ ಸ್ಪoದನ ವಿಶೇಷ ಮಕ್ಕಳ ಪ್ರನರ್ವಸತಿ ಕೇಂದ್ರ ಮತ್ತು ಯುವ ವಿಚಾರ ವೇದಿಕೆ ಇದರ ಸಹಕಾರದಲ್ಲಿ ನೀಲಾವರ ಶ್ರೀ ಪೇಜಾವರ ಮಠದ ಗೋ ಶಾಲೆಗೆ " ಗೋವಿಗಾಗಿ ಮೇವು " ಹಸಿರು ಹುಲ್ಲು ನೀಡುವ ಕಾಯ೯ಕ್ರಮ ಆ.16 ಆದಿತ್ಯವಾರ ನಡೆಯಿತು. ಸುರಿಯುವ ಮಳೆಯನ್ನು ಲೆಕ್ಕಿಸದೆ ವಿಶೇಷ ಮಕ್ಕಳು ಮತ್ತು ಸದಸ್ಯರು ಸಂತೆಕಟ್ಟೆ ಕಲ್ಯಾಣಪುರ ರಸ್ತೆಯ ಬದಿಯಲ್ಲಿರುವ ಹುಲ್ಲನ್ನು ಕಟಾವು ಮಾಡಿ ನೀಡಲಾಯಿತು. ಈ ಸಂದಭ೯ದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ೯ ಶ್ರೀಪಾದರು ತಂಡದ ಸದಸ್ಯರನ್ನು ಗೌರವಿಸಿದರು. ಕಾಯ೯ಕ್ರಮದಲ್ಲಿ ಮೂಡಬಿದ್ರೆ ಆಳ್ವಾಸ್ ಎಜುಕೇಶನ್ ನ ಡಾ|| ಮೋಹನ್ ಆಳ್ವ ,ಬಿಲ್ಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಗೋವಿಗಾಗಿ ಮೇವು ಅಭಿಯಾನದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸ್ಪoದನ ಸಂಸ್ಥೆಯ ಉಮೇಶ್, ಜನಾಧ೯ನ್,ಸಕ್ಷಮಾ ಅಧ್ಯಕ್ಷೆ ಲತಾ ಭಟ್,ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು, ಸುಬ್ರಮಣ್ಯ ಆಚಾಯ೯, ಯೋಗೀಶ್, ಉದಯ ನಾಯ್ಕ ಮುಂತಾದವರಿದ್ದರು.
16 Aug 2020, 08:18 PM
Category: Kaup
Tags: