ಕಡಲ್ಕೊರೆತ : ಪಡುಬಿದ್ರಿಯ ನಡಿಪಟ್ಣದಲ್ಲಿ ಮೀನುಗಾರಿಕಾ ರಸ್ತೆಗೂ ಆಪತ್ತು
ಪಡುಬಿದ್ರಿ : ಇಲ್ಲಿಯ ನಡಿಪಟ್ಣ ಪ್ರದೇಶದಲ್ಲಿಯ ಕಡಲ ಕೊರೆತದಿಂದ ಮೀನುಗಾರಿಕಾ ಶೆಡ್, ಮೀನುಗಾರರ ವಿಶ್ರಾಂತಿ ಗೃಹ ಸಮುದ್ರ ಪಾಲಾದ ಬಳಿಕ ಇದೀಗ ಮೀನುಗಾರಿಕಾ ರಸ್ತೆಗೂ ಆಪತ್ತು ಬಂದೊದಗಿದೆ.
ಕಡಲಿನ ರಕ್ಕಸ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ರಸ್ತೆಯು ಹಾನಿಯಾಗುವುದರಲ್ಲಿದೆ. ಇದೇ ರಸ್ತೆಯ ಮೂಲಕ ಪ್ರತಿನಿತ್ಯ ಸ್ಥಳೀಯರಲ್ಲದೆ ಅಂತರಾಷ್ಟ್ರೀಯ ಮನ್ನಣೆಯ ಬ್ಲೂ ಫ್ಲ್ಯಾಗ್ ಬೀಚ್ ಗೂ ಇದೇ ರಸ್ತೆ ಅವಲಂಬಿತವಾಗಿದೆ.
ಸ್ಥಳಕ್ಕೆ ಕಾಪು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಭೇಟಿ ನೀಡಿದ್ದಾರೆ. ಜಿಲ್ಲಾಡಳಿತದ ಅಸಡ್ಡೆಗೆ ಸ್ಥಳೀಯರು ಆಕ್ರೋಶಿತರಾಗಿದ್ದು, ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ.
