ಡಿ.13 : ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ಕುಟ್ಯಣ್ಣನ ಕುಟುಂಬ ತುಳು ನೂತನ ನಾಟಕ ಪ್ರದರ್ಶನ
ಕಾಪು : ಸಮಾಜತ್ನ ದಿ| ಕೆ. ಲೀಲಾಧರ ಶೆಟ್ಟಿ ಅವರ ಸಾರಥ್ಯದ ಕಾಪು ರಂಗತರಂಗ ಕಲಾವಿದರು ತಂಡದ ಕುಟ್ಯಣ್ಣನ ಕುಟುಂಬ ತುಳು ನೂತನ ನಾಟಕವು ಡಿ.13 ರಂದು ಸಂಜೆ 6:30ಕ್ಕೆ ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ.
ಇಂದಿನ ಪ್ರಸ್ತುತತೆಗೆ ಅನುಗುಣವಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕುಟ್ಯಣ್ಣನ ಕುಟುಂಬ ತುಳು ನಾಟಕವು ಸಾಂಸಾರಿಕ ಮತ್ತು ಹಾಸ್ಯಮಯವಾಗಿ ಮೂಡಿ ಬಂದಿದ್ದು ಕುಟುಂಬ ಕುಳಿತು ವೀಕ್ಷಿಸುವಂತಿದೆ.
ಸಂದೀಪ್ ಶೆಟ್ಟಿ ಮಾಣಿಬೆಟ್ಟು ರಚನೆಯ ಈ ನಾಟಕಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ನಿರ್ದೇಶನ ಮತ್ತು ಶರತ್ ಉಚ್ಚಿಲ ಸಂಗೀತ ನೀಡಿದ್ದಾರೆ.
ಪ್ರಥಮ ಪ್ರದರ್ಶನದಲ್ಲೇ ಜನರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು ಪ್ರದರ್ಶನಗೊಂಡಲ್ಲೆಲ್ಲಾ ಉತ್ತಮ ಜನಸ್ಪಂದನೆ ದೊರಕುತ್ತಿದೆ.
ಕಾಪು ಜೇಸಿಐನ ಜೇಸಿ ಭವನ ಮತ್ತು ತರಬೇತಿ ಕೇಂದ್ರದ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಸಹಾಯಾರ್ಥವಾಗಿ ಕುಟ್ಯಣ್ಣನ ಕುಟುಂಬ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕಾಪು ಜೇಸಿಐ ಮತ್ತು ಕಾಪು ರಂಗತರಂಗ ಕಲಾವಿದರ ಜಂಟಿ ಪ್ರಕಟಣೆಯು ತಿಳಿಸಿದೆ.
