ಕಾಪುವಿನ ಪಕೀರ್ನಕಟ್ಟೆಯಲ್ಲಿ ಕತ್ತಲ ಮನೆಗೆ ಬೆಳಕು ನೀಡಿದ ಸೇವ್ ಲೈಫ್
Thumbnail
ಕಾಪು ಪುರಸಭಾ ವ್ಯಾಪ್ತಿಯ ಪಕೀರ್ನಕಟ್ಟೆ ಅಪ್ಪಿಯವರು ಕಳೆದ ಹತ್ತು ವರ್ಷಗಳಿಂದ ಹುಲ್ಲಿನ ಮನೆಯಲ್ಲಿ ಚಿಮಿಣಿ ದೀಪದ ಬೆಳಕಿನಲ್ಲೇ ದಿನ ಕಳೆಯುತ್ತಿದ್ದು,ವಿದ್ಯುತ್ ಸಂಪರ್ಕ ಇಲ್ಲದೆ ವಾಸಿಸುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯ ಸಮಾಜ ಸೇವಕರಾದ ಪ್ರಶಾಂತ್ ಪೂಜಾರಿ ಕಾಪು ಮತ್ತು ನೀತಾ ಪ್ರಭು ಕಾಪು ಇವರು "ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್" ನ ಸದಸ್ಯರಾದ ಅರ್ಜುನ್ ಬಂಡಾರ್ಕರ್ ಇವರಿಗೆ ತಿಳಿಸಿದರು. "ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್" ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಸಂಸ್ಥೆಯಾಗಿದ್ದು ಈ ಸಮಸ್ಯೆಗೆ ತಕ್ಷಣ ಸ್ಪಂದಿಸಿ. ಅಪ್ಪಿಯವರ ಮನೆಗೆ ಸುಮಾರು 20,000 ವೆಚ್ಚದ ಸೋಲಾರ್ ಕನೆಕ್ಷನ್, ಹಾಗೂ ನಾಲ್ಕು ಬಲ್ಬ್ ಗಳನ್ನು ಹಸ್ತಾಂತರಿಸಿದರು. ಅಪ್ಪಿಯವರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ಕಂಡು ಸದಸ್ಯರಾದ ಅರ್ಜುನ್ ಬಂಡಾರ್ಕರ್ ಅವರು 10,000 ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಪ್ಪಿಯವರ ಸಹೋದರಿ ಉಪಸ್ಥಿತರಿದ್ದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ವರದಿ : ವಿಕ್ಕಿ ಪೂಜಾರಿ ಮಡುಂಬು
Additional image Additional image Additional image
26 Sep 2020, 04:45 PM
Category: Kaup
Tags: