ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.) ವತಿಯಿಂದ ಕಾಪು ಬಿಲ್ಲವರ ಸಹಾಯಕ ಸಂಘದ ವೇದಿಕೆಯಲ್ಲಿ 5 ನೇ ವರ್ಷದ "ಜ್ಞಾನ ದೀವಿಗೆ" ವಿದ್ಯಾರ್ಥಿವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿ, ಶುಭ ಹಾರೈಸಿದರು.
ಸುಮಾರು 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿನಯ ಕುಮಾರ್ ಸೊರಕೆ, ಸೂರ್ಯಕಾಂತ್ ಸುವರ್ಣ, ಸಂಕಪ್ಪ ಅಮಿನ್ ವಕೀಲರು, ಗೀತಾಂಜಲಿ ಸುವರ್ಣ, ಸಂಜೀವ ಆರ್ ಅಮಿನ್ , ದೀಪಕ್ ಕುಮಾರ್ ಎರ್ಮಾಳ್ ವಿತರಿಸಿದರು.
ಸಂಪನ್ಮೂಲ ವ್ಯಕ್ತಿ ದೀಪಕ್ ರಾಜ್ ರವರು ಮಕ್ಕಳ ಭವಿಷ್ಯ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದರು.
ಪ್ರಭಾಕರ ಎಸ್ ಪೂಜಾರಿ, ವಿಕ್ರಂ ಕಾಪು, ನವೀನ್ ಅಮಿನ್ ಶಂಕರಪುರ, ಸೂರ್ಯ ಕಾಂತ್ ಸುವರ್ಣ, ಶಿವಾನಂದ ಕೋಟ್ಯಾನ್, ಸಂಜೀವ ಆರ್ ಅಮಿನ್ ಮೂಳೂರು, ವಿಕ್ಕಿ ಮಡುಂಬು, ಸುಧಾಕರ ಸಾಲ್ಯಾನ್ ರವನ್ನು ಸನ್ಮಾನಿಸಲಾಯಿತು.
ಬಿರುವೆರ್ ಕಾಪು ಸೇವಾ ಸಮಿತಿಯ ಉಪಾಧ್ಯಕ್ಷರಾದ ಮನೋಜ್ ಅಂಚನ್ ರವರು ಸಭಾಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಉಪಾಧ್ಯಕ್ಷರುಗಳಾದ ಸುಧಾಕರ ಸಾಲ್ಯಾನ್, ಮನೋಜ್ ಅಂಚನ್ , ಕೋಶಧಿಕಾರಿಯಾದ ಕಾರ್ತಿಕ್ ಅಮಿನ್ , ಕಾರ್ಯದರ್ಶಿಗಳಾದ ವಿಕ್ಕಿ ಮಡುಂಬು, ರಾಕೇಶ್ ಕುಂಜೂರು , ರವಿರಾಜ್ ಶಂಕರಪುರ, ದೀಪಕ್ ಕುಮಾರ್ ಎರ್ಮಾಳ್, ಸುಜನ್ ಎಲ್ ಸುವರ್ಣ, ಮನೋಹರ್ ಕಲ್ಲುಗುಡ್ಡೆ , ವರುಣ್ ಬಿ ಕೋಟ್ಯಾನ್,ಸಂಧ್ಯಾ ಬಿ ಕೋಟ್ಯಾನ್ , ಅಶ್ವಿನಿ ಎನ್ ಬಂಗೇರ , ಹರಿ ಪ್ರಸಾದ್ ಕುಬೇರ , ಶ್ರೀಮತಿ ಸ್ವಪ್ನ ಎಮ್ ಅಂಚನ್ , ಅನಿಷ ಎಸ್ ಅಂಚನ್ , ಸಾಕ್ಷಿ ಪೂಜಾರಿ, ಅಶ್ವಿನಿ ಗಣೇಶ್ ಕೋಟ್ಯಾನ್ , ಸುರಕ್ಷ ಸುಜನ್ ಸುವರ್ಣ ಉಪಸ್ಥಿತರಿದ್ದರು.
ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವಿಸಿ, ಸ್ವಾಗತಿಸಿದರು. ಸತೀಶ್ ಪೂಜಾರಿ ಹೊಸ್ಮರ್ ಕಾರ್ಯಕ್ರಮ ನಿರೂಪಿಸಿ, ವಿಕ್ಕಿ ಮಡುಂಬುರವರು ವಂದಿಸಿದರು.
