ಕಾಪು : ದೇಶದ ಹಿತದೃಷ್ಟಿಯಲ್ಲಿ ದೂರದೃಷ್ಟಿ ಇಟ್ಟುಕೊಂಡ ಬಜೆಟ್ - ಯೋಗೇಶ್ ವಿ. ಶೆಟ್ಟಿ
ಕಾಪು : ಈ ಬಾರಿಯ ಕೇಂದ್ರ ಸರಕಾರದ ಬಜೆಟ್, ದೇಶದ ಹಿತದೃಷ್ಟಿಯಲ್ಲಿ ದೂರದೃಷ್ಟಿ ಇಟ್ಟುಕೊಂಡ ಬಜೆಟ್ ಆಗಿದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ವಿ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಮೀನುಗಾರಿಕೆ, ಗೋಡಂಬಿ, ಜವಳಿ ಮತ್ತು ಇತರೆ ಉದ್ಯಮ, ರೈತರ ಒಳಿತು ಮತ್ತು ಉತ್ಪಾದನಾ ಯೋಜನೆಗಳಿಗೆ ಹಾಗೂ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕ ಬಜೆಟ್ ಆಗಿರುತ್ತದೆ ಎಂದು ತಿಳಿಸಿದ್ದಾರೆ.
