ಉಡುಪಿ : ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟ - ವಂದೇ ಮಾತರಂ ಟ್ರೋಫಿ 2026ರ ಪೋಸ್ಟರ್ ಬಿಡುಗಡೆ
ಉಡುಪಿ : ಅಖಿಲ ಭಾರತೀಯ ವಿದ್ಯಾರ್ಥಿ ಗತಿವಿದಿಯ ಖೇಲೋ ಭಾರತ್, ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ
ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕಬಡ್ಡಿ ಪಂದ್ಯಾಟದ ವಂದೇ ಮಾತರಂ ಟ್ರೋಫಿ 2026 ರ ಪೋಸ್ಟರ್ ಬಿಡುಗಡೆಯನ್ನು ಪರ್ಯಾಯ ಶ್ರೀ ಶಿರೂರು ಮಠದ ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು.
ಈ ಸಂದರ್ಭ ನಗರ ಕಾರ್ಯದರ್ಶಿ, ನಗರ ಸಂಘಟನ ಕಾರ್ಯದರ್ಶಿ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
