ಫೆ. 9 : ನೃತ್ಯಶಂಕರ ಸರಣಿಯ ಮೂರನೇ ಸರಣಿ ಕಾರ್ಯಕ್ರಮ
ಉಡುಪಿ : ನೃತ್ಯನಿಕೇತನ ಕೊಡವೂರು ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಜಂಟಿಯಾಗಿ ಆಯೋಜಿಸುತ್ತಿರುವ ಪಾಕ್ಷಿಕ ಸಮೂಹ ನೃತ್ಯಸರಣಿ ನೃತ್ಯಶಂಕರ ಸರಣಿಯ ಮೂರನೇ ಸರಣಿ ಕಾರ್ಯಕ್ರಮವು ಫೆಬ್ರವರಿ 9 ರಂದು ಸಂಜೆ ಗಂಟೆ 6:25 ಕ್ಕೆ ಕೊಡವೂರಿನ ವಸಂತಮಂಟಪದಲ್ಲಿ ನಡೆಯಲಿದೆ.
ಮಂಗಳೂರಿನ ಗಾನನೃತ್ಯ ಅಕಾಡೆಮಿಯ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ಬಳಗದವರಿಂದ ನಡೆಯಲಿದೆ ಎಂದು ವಿದುಷಿ ಸುಧೀರ್ ಮಾನಸಿ ಮತ್ತು ನೃತ್ಯನಿಕೇತನ ಕೊಡವೂರು ಕಲಾವಿದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
