ಇನ್ನಂಜೆಯಲ್ಲಿ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಘಟಕದ ಪೂರ್ವಭಾವಿ ಸಭೆ
ಇನ್ನಂಜೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವಿಶ್ವ ವಲ್ಲಭ ಘಟಕದ ಜೊತೆಗೆ ಮಾತೃಶ್ರೀ ಘಟಕ ಮತ್ತು ದುರ್ಗಾ ಶಕ್ತಿ ಘಟಕವನ್ನು ಮಾಡುವ ಸಲುವಾಗಿ ಇಂದು ಮಡುಂಬು ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿಗಳ ಮನೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಕೆ.ಪಿ ಶ್ರೀನಿವಾಸ್ ತಂತ್ರಿ, ಭಜರಂಗದಳದ ಸಂಚಾಲಕರಾದ ರಾಜೇಶ್ ನಿಸರ್ಗ, ಮಾಲಿನಿ ಇನ್ನಂಜೆ , ಗೊರಕ್ಷಾ ಪ್ರಮುಖ್ ರವಿ ಕಲ್ಯಾಲು, ವಿದ್ಯಾರ್ಥಿ ಪ್ರಮುಖ್ ಕಾರ್ತಿಕ್ ಮಡುಂಬು, ಸಾಮಾಜಿಕ ಜಾಲತಾಣ ಪ್ರಮುಖ್ ಪೃಥ್ವಿರಾಜ್ ಮಡುಂಬು, ವಿಶ್ವ ಹಿಂದೂ ಪರಿಷತ್ ಸದಸ್ಯರು,ಭಜರಂಗ ದಳದ ಕಾರ್ಯಕರ್ತರು ಹಾಗೂ ಮಾತೃ ಶಕ್ತಿ ಮತ್ತು ದುರ್ಗಾವಾಹಿನಿ ಸೇರ್ಪಡೆಗೊಳ್ಳಲಿರುವ ಸದಸ್ಯರು ಉಪಸ್ಥಿತರಿದ್ದರು..
ಕಾರ್ಯದರ್ಶಿ ನಿತೇಶ್ ಕಲ್ಯಾಲು ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.
