ಹೆಜಮಾಡಿ ಬಂದರಿಗೆ 19ರಂದು ಮುಖ್ಯಮಂತ್ರಿಯಿಂದ ಶಿಲಾನ್ಯಾಸ
ಮೀನುಗಾರರ ಸುದೀರ್ಘ ಹೋರಾಟದ ಫಲವಾಗಿ ಕಾಪು ತಾಲೂಕಿನ ಹೆಜಮಾಡಿ ಕೋಡಿಯಲ್ಲಿ ₹ 180.8 ಕೋಟಿಯ ವಿವಿಧ ಸವಲತ್ತುಗಳ ಕಾರ್ಯಯೋಜನೆಯ ಮೀನುಗಾರಿಕಾ ಬಂದರು ಕಾಮಗಾರಿಗೆ ಇದೇ ಬರುವ 19ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ಮಾಡಲಿದ್ದಾರೆ.
