ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು ವಿಶ್ವಕರ್ಮ ಪೂಜೆ
ಕಾಪು ತಾಲೂಕಿನ ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘವು ಸಾಕಷ್ಟು ಚಟುವಟಿಕೆಯುಕ್ತವಾಗಿದ್ದು, ನಡೆಸುವ ಧಾರ್ಮಿಕ ಚಟುವಟಿಕೆಯು ಸಂಘಟನಾ ಶಕ್ತಿಗೆ ಪೂರಕವಾಗಲಿದೆ ಸ್ವಂತ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣ ಶೀಘ್ರ ಕೈಗೂಡಲಿ ಎಂದು ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮುರುಳೀಧರ ಆಚಾರ್ಯ ಇನ್ನಂಜೆ ಹೇಳಿದರು.
ಅವರು ಎಲ್ಲೂರು ಕಂಚುಗರ ಕೇರಿಯ ಸ್ವಂತ ನಿವೇಶನದಲ್ಲಿ ನಡೆದ ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ.) ಎಲ್ಲೂರು ಇದರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕಾಪು ದಂಡತೀರ್ಥ ಶಾಲೆಯ ಚಿತ್ರಕಲಾ ಶಿಕ್ಷಕಿ ಅನುಪಮಾ ದೇವರಾಜ ಆಚಾರ್ಯ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿನ ಆಚಾರ-ವಿಚಾರವು ಕುಲದ ಶ್ರೇಷ್ಠತೆಗೆ ಮೌಲ್ಯ ನೀಡಲಿ ಎಂದು ಕರೆ ನೀಡಿದರು. ಪಡುಬಿದ್ರಿಯ ಉದಯ ಪುರೋಹಿತ್ ಆಶೀರ್ವಚನ ನೀಡಿದರು. ನಿವೃತ್ತ ತಹಶೀಲ್ದಾರ್ ಗಣೇಶ್ ಪಿ. ಆಚಾರ್ಯ ಪಡುಬಿದ್ರಿ, ಶಿಲ್ಪಿ ಗಣಪತಿ ಆಚಾರ್ಯ ಶಂಕರಪುರ ಸಂಘಕ್ಕೆ ಮಾರ್ಗದರ್ಶನದ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ವೈ. ಸತೀಶ ಎಂ.ಆಚಾರ್ಯ, ಗೌರವಾಧ್ಯಕ್ಷರಾದ ವೈ. ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ವಿಶ್ವಕರ್ಮ ಪೂಜೆ :ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಶ್ರೀ ವಿಶ್ವಕರ್ಮ ಪೂಜೆಯು ಉದಯ ಪುರೋಹಿತ್ ಪೌರೋಹಿತ್ಯದಲ್ಲಿ ಎಲ್ಲೂರು
ಕಂಚುಗರ ಕೇರಿಯ ಸ್ವಂತ ನಿವೇಶನದಲ್ಲಿ ಜರಗಿತು. ಈ ಸಂದರ್ಭ ಸಂಘದ ಗೌರವಾಧ್ಯಕ್ಷರಾದ ವೈ. ರಾಘವೇಂದ್ರ ಆಚಾರ್ಯ, ಅಧ್ಯಕ್ಷರಾದ ವೈ. ಸತೀಶ ಎಂ.ಆಚಾರ್ಯ, ಕಾರ್ಯದರ್ಶಿ ವೈ. ಪ್ರಶಾಂತ್ ಆಚಾರ್ಯ, ಕೋಶಾಧಿಕಾರಿ ವೈ. ಕಿಶೋರ್ ಆಚಾರ್ಯ, ಗೌರವ ಸಲಹೆಗಾರ ವೈ. ವಾಸುದೇವ ಆಚಾರ್ಯ, ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.
