ನಮ್ಮ ಕಾಪು ವರದಿಗೆ ಸ್ಪಂದಿಸಿದ ಅಧಿಕಾರಿಗಳು - 5 ತಿಂಗಳಿಂದ ದುರಸ್ತಿ ಭಾಗ್ಯ ಕಾಣದಾಗಿದ್ದ ಕಾಪು ದೀಪಸ್ತಂಭದ ಮೆಟ್ಟಿಲುಗಳು ಮತ್ತು ಗೋಡೆಗಳು ದುರಸ್ತಿ
ಅಸಂಖ್ಯಾತ ಪ್ರವಾಸಿಗರನ್ನು ಸೆಳೆಯುತ್ತಿದ್ದ ಪ್ರವಾಸಿ ತಾಣ ಉಡುಪಿ ಜಿಲ್ಲೆಯ ಕಾಪು ಕಡಲ ಕಿನಾರೆಯಲ್ಲಿರುವ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲ್ಪಟ್ಟ ಕಾಪು ದೀಪಸ್ತಂಭ.
ಇತ್ತೀಚಿನ ಮಳೆಯ ಸಂದರ್ಭ ದೀಪಸ್ತಂಭದ ಆರಂಭದ ಮೆಟ್ಟಿಲುಗಳು ಮತ್ತು ಗೋಡೆ ಹಾನಿಗೊಂಡಿದ್ದವು. 5 ತಿಂಗಳಿಂದ ಈ ರೀತಿಯ ಅವಸ್ಥೆ ಇದ್ದರೂ ದುರಸ್ತಿ ಕಂಡಿರಲಿಲ್ಲ. ಈ ಬಗ್ಗೆ ಕೆಳ ತಿಂಗಳ ಹಿಂದೆ ಕೆಲವು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದರೂ ಪ್ರವಾಸೋದ್ಯಮ ಇಲಾಖೆ ಎಚ್ಚೆತ್ತುಕೊಂಡಿರಲಿಲ್ಲ.
ಸ್ಥಳೀಯ ನಿವಾಸಿಯೊಬ್ಬರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಾಕಷ್ಟು ಮಾತುಕತೆ ಮತ್ತು ಪತ್ರವ್ಯವಹಾರ ನಡೆಸಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಅದೇ ರೀತಿ
ಈ ಬಗ್ಗೆ ನಮ್ಮ ಕಾಪು ವೆಬ್ ಪೋರ್ಟಲ್ ಸಚಿತ್ರ ವರದಿ ಪ್ರಕಟಿಸಿ ತಲುಪಬೇಕಾದವರಿಗೆ ತಲುಪುವಲ್ಲಿಯೂ ಪ್ರಮುಖ ಪಾತ್ರ ವಹಿಸಿತ್ತು. ಸಂಬಂಧಪಟ್ಟ ಇಲಾಖೆಗೆ ತಲುಪಿಸಿ ಆ ಮೂಲಕ ದೀಪಸ್ತಂಭದ ಮೆಟ್ಟಿಲು ಮತ್ತು ಗೋಡೆ ದುರಸ್ತಿಯಾಗಿದೆ.
ಸ್ಥಳೀಯ ನಿವಾಸಿ ಹಾಗೂ ನಮ್ಮ ಕಾಪುವಿನ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿ, ಸಂತಸ ವ್ಯಕ್ತಪಡಿಸಿದ್ದಾರೆ.
