ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಹಾಕಿ ಅಸಂಬದ್ಧ ಪದ ಪ್ರಯೋಗಿಸಿದ ಪ್ರಕರಣ ಮುಚ್ಚಳಿಕೆ, ತಪ್ಪೊಪ್ಪಿಗೆಯೊಂದಿಗೆ ಅಂತ್ಯ

Posted On: 19-09-2021 07:09PM

ಉಡುಪಿ : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರ ಹಾಕಿ ಅಸಂಬದ್ಧ ಪದ ಪ್ರಯೋಗಿಸಿದ ಬಗ್ಗೆ ಕುಂದಾಪುರ ಠಾಣೆಯಲ್ಲಿ ಕಿರಣ್ ಪೂಜಾರಿ ನೀಡಿದ ದೂರಿನನ್ವಯ ಅವಹೇಳನಗೈದ ಕುಂಭಾಶಿಯ ಸಂಪಾದಕರೋರ್ವರನ್ನು ಕುಂದಾಪುರ ಠಾಣೆಗೆ ಕರೆಯಿಸಿ ಇನ್ನು ಮುಂದೆ ಇಂತಹ ಯಾವುದೇ ಕೃತ್ಯ ಮಾಡುವುದಿಲ್ಲವೆಂದು ಮುಚ್ಚಳಿಕೆ ಬರೆಸಿ ಕೊಳ್ಳಲಾಗಿದೆ‌.

ದೂರುದಾರರ ದೂರಿನಲ್ಲಿ ಉಲ್ಲೇಖಿಸಿದಂತೆ ಬ್ರಹ್ಮಶ್ರೀ ನಾರಾಯಣಗುರುಗಳ ಪ್ರತಿಮೆಯ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ.