ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ತಹಸೀಲ್ದಾರ್ ಅಂದ್ರೆ ಹೀಗೂ ಇರ್ತಾರಾ ?...

Posted On: 20-09-2021 03:46PM

ಬೈಂದೂರು : ಬೈಂದೂರು ಭಾಗದ ಜನರ ಯಾವ ಕಾಲದ, ಯಾರ ಪುಣ್ಯದ ಫಲವೋ ಏನೋ ಈ ಬಾರಿ ಸರಳ ಸಜ್ಜನಿಕೆಯ, ಮುತುವರ್ಜಿಯ, ಅಪಾರ ಜನಪರ ಕಾಳಜಿಯ, ಸರಕಾರಿ ಕೆಲಸ, ಜನಗಳ ಕೆಲಸ,ಸ್ವಂತ ಕೆಲಸದಷ್ಟೇ ಶ್ರದ್ದೆಯಿಂದ ಮಾಡುವ ಪ್ರಾಮಾಣಿಕ ಅಧಿಕಾರಿಗಳು ಸಿಗುವುದು ವಿರಳ.

ಬೈಂದೂರು ಭಾಗದ ಈಗಿನ ತಹಸೀಲ್ದಾರ್ ಕಾರ್ಯ ವೈಖರಿಯನ್ನು ಮೆಚ್ಚಲೇಬೇಕು. ಪ್ರಾಮಾಣಿಕ ಕೆಲಸಗಾರರನ್ನು ಗುರುತಿಸಿ ಅವರನ್ನು ಉಳಿಸಿಕೊಳ್ಳೋದು ಅನಿವಾರ್ಯ.

ಮಧ್ಯಮ ವರ್ಗದ ಅಲ್ಪ ಜನಸಂಖ್ಯೆಯ ವ್ಯಕ್ತಿಯೋರ್ವ ಆಕಸ್ಮಿಕ ಅವಘಡಕ್ಕೊಳಗಾದಾಗ ನಮ್ಮ ವ್ಯವಸ್ಥೆ ಹೇಗೆ ಸ್ಪಂದಿಸುತ್ತೆ ಅನ್ನೋ ಕೆಟ್ಟ ಅನುಭವ ಜನರಿಗಾಗಿದೆ. ಇಲಾಖೆಗಳ ನಡುವಿನ ಹೊಂದಾಣಿಕೆ ಕೊರತೆ , ರಾಜಕೀಯ ತಾತ್ಸರತೆಗೆ ಬಡಪಾಯಿಗಳ ಜೀವಕ್ಕೆ ಬೆಲೆ ಇಲ್ಲ ಅನ್ನೋದಕ್ಕೆ ಸಾಕ್ಷಿಭೂತರಾಗಿ ತಲೆತಗ್ಗಿಸುವಂತಾದ ಅಸಹಾಯಕ ಸ್ಥಿತಿ ಶನಿವಾರ ಬೆಳಿಗ್ಗೆ ನಡೆಯಿತು. ಬಡಪಾಯಿಯ ಶವವೊಂದು ಸಮುದ್ರದಲ್ಲಿ ತೇಲುತ್ತಿದೆ ಎನ್ನುವ ಮಾಹಿತಿ. ತೀರದಲ್ಲಿ ಕುಟುಂಬದ ಹಾಗೂ ಆ ಜನಾಂಗದ ಆಕ್ರಂದನ ಯಾರ ಕಿವಿಗೂ ಬೀಳದಿರೋದು ಈಗಿನ ಕಾಲದ ವಿಪರ್ಯಾಸವೇ ಸರಿ. ಆಗೊಮ್ಮೆ ಈಗೊಮ್ಮೆ ನೋಡಿದ ಮಾಹಿತಿ ಸಿಕ್ಕಿತೆ ಹೊರತು ನೀರಿನಿಂದ ಹೊರತರುವ ಕೆಲಸ ಮರೀಚಿಕೆಯಾಗುಳಿಯಿತು. ಶನಿವಾರ ಸಂಜೆಯ ಬೆಳವಣಿಯಲ್ಲಿ ತಹಶೀಲ್ದಾರಗೆ ಮಾಹಿತಿ ಹೋಗಿ ಆದಿತ್ಯವಾರ ಬೆಳಿಗ್ಗೆ 7 ಗಂಟೆಯ ಮೊದಲೇ ಬಂದು ಮರವಂತೆಯಲ್ಲಿ ಟಿಕಾಣಿ ಹೂಡಿ, ಸಂಬಂಧಿಸಿದ ಎಲ್ಲ ಇಲಾಖೆಗಳ ಕಳ್ಳಾಟವನ್ನು ಸಾವಧಾನವಾಗಿ ಶಾಂತ ಚಿತ್ತರಾಗಿ 12 ಗಂಟೆಯ ವರೆಗೂ ಇದ್ದು ಹುಡುಕಾಟದ ಖಚಿತತೆಯನ್ನು ಕಂಡ ಮೇಲೆಯೇ ಅಲ್ಲಿಂದ ತೆರಳಿದ ಮೇಲೆ ಎಲ್ಲರ ಬಾಯಲ್ಲೂ ಒಂದೇ ಉದ್ಘಾರ ತಹಸೀಲ್ದಾರ್ ಅಂದ್ರೆ ಹೀಗೂ ಇರ್ತಾರ??? ಅಂತ ಎಲ್ಲರ ಮೆಚ್ಚುಗೆ ಪಾತ್ರರಾದರು. ಇದೇ ಕೆಲಸ ಶನಿವಾರವೇ ಸಂಬಂದಿಸಿದ ಇಲಾಖೆಗಳು ಮಾಡಿದ್ದರೆ ಈಗಾಗಲೇ ವ್ಯಕ್ತಿಯ ಕ್ರಿಯಾಕರ್ಮಗಳು ಮುಗಿಯುತ್ತಿತ್ತು. ಆದಿತ್ಯವಾರ ಯಾವುದೇ ಫಲ ಇಲ್ಲ. ಕುಟುಂಬ ವರ್ಗ ಮುಖದ ಕೊನೆಯ ದರುಶನದ ನಿರೀಕ್ಷೆಯಲ್ಲಿ ಸೋಮವಾರ ಮುಂದಡಿ ಇಟ್ಟಿದೆ.

ಕರೋನ ಕಾಲದಲ್ಲೂ ಒಂದಷ್ಟು ಒಳ್ಳೆಯ ಕೆಲಸ ಹಲವರು ಬಾಯಲ್ಲಿ ಓಡಾಡುತ್ತಿದೆ. ರಾತ್ರಿ ಹತ್ತು ಗಂಟೆಯ ಮೇಲು ಸಹಸ್ರ ಸಂಖ್ಯೆಯ ಮೆಹಂದಿ ಕಾರ್ಯಕ್ರಮದ ಮಾಹಿತಿ ಸಿಕ್ಕಾಗ ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದು ಹಲವರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ 6 ಗಂಟೆಗೆ lockdown ಕಾರ್ಯಾಚರಣೆ ಕಂಡು ಹೌ ಹಾರಿದವರಿದ್ದಾರೆ. ವರ್ಷಗಟ್ಟಲೆ ದೂಳು ಹಿಡಿದ ಫೈಲ್ ಗೆ ಮುಕ್ತಿ ನೀಡಿದ್ದಕ್ಕೆ ಹರಸಿದವರಿದ್ದಾರೆ. ಸಮಸ್ಯೆಗಳ ಸೌಹಾರ್ದ ಪರಿಹಾರಕ್ಕೆ ಸಹನೆಯ ಪ್ರತಿಕ್ರಿಯೆಯ ಕಂಡು ಬೆರಗಾದವರಿದ್ದಾರೆ. ಒಟ್ಟಿನಲ್ಲಿ ರಾಜಕೀಯ ಒತ್ತಡಗಳ ನಡುವೆಯೂ ಕ್ರಿಯಾಶೀಲತೆಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ. ವರದಿ :ದಾಮೋದರ ಮೊಗವೀರ ನಾಯಕವಾಡಿ .